ಕವನ-ನಮನ: ಅಂಬಾಸುತ ವರಸಿದ್ಧಿವಿನಾಯಕ

Upayuktha
0


ಗೌರಿಗಣೇಶರ ಹಬ್ಬವು ಬಂದಿದೆ

ಭಕ್ತಿಯ ಭಾವದಿ ನಮಿಸೋಣ|

ಗೌರವದಿಂದಲಿ ತಲೆಯನು ಬಾಗುತ

ಇಚ್ಛಿತ ಫಲವನು ಕೇಳೋಣ||


ಈಶನ ವಲ್ಲಭೆ ಪಾರ್ವತಿ ಮಾತೆಯು

ಪುತ್ರಗಣೇಶನ ಜೊತೆಯಿಹಳು|

ಕಾಶಿಸಿ ನಗುತಾ ಬರುವಳು ಭೂಮಿಗೆ

ಭಕ್ತರ ಪ್ರೇಮದಿ ಪೊರೆಯುವಳು||


ಲಂಬೋದರ ಗಣನಾಯಕ ಬೆನಕನು

ರಕ್ಷಿಸುತಿರುವನು ಅನವರತ|

ಅಂಬಾಸುತ ವರ ಸಿದ್ಧಿವಿನಾಯಕ

ವರವನು ಕೊಡುವನು ನಗುನಗುತ||


ಮೂಷಕವಾಹನ ಈಶ್ವರ ಪುತ್ರನು

ಭಕ್ತಿಯ ಪೂಜೆಗೆ ಒಲಿಯುವನು|

ಪೋಷಿಸಿ ಶರಣರ ಒಳಿತನು ಮಾಡುವ

ಪ್ರೀತಿಯ ತೋರಿಸಿ ಹರಸುವನು||


ಮಾತೆಯು ಗೌರಿಯು ಪುತ್ರನು ಬೆನಕನು

ನಮ್ಮನು ಆಶೀರ್ವದಿಸುವರು|

ಭೀತಿ ನಿವಾರಿಸಿ ಮಮತೆಯ ತೋರಿಸಿ

ಕರುಣಾ ದೃಷ್ಟಿಯ ಬೀರುವರು||


- ಅಶ್ವತ್ಥನಾರಾಯಣ, ಮೈಸೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top