ಮಂಗಳೂರು:ರಾಜ್ಯಮಟ್ಟದ ಅಥ್ಲೆಟಿಕ್​ ಕ್ರೀಡಾಕೂಟ- ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಕ್ಷೇತ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Upayuktha
0


ಮಂಗಳೂರು:
ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಅಥ್ಲೆಟಿಕ್​ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತೆಲಂಗಾಣದಲ್ಲಿ ನಡೆಯುವ ಕ್ಷೇತ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಥಮ ಪಿಯುಸಿಯ ಸಮೃದ್ಧಿ ಜೆ. ಶೆಟ್ಟಿ, 100ಮೀ ಹರ್ಡಲ್ಸ್​ ಮತ್ತು ಎತ್ತರ ಜಿಗಿತದಲ್ಲಿ ಚಿನ್ನದ ಪದಕ, ಉದ್ದಜಿಗಿತದಲ್ಲಿ ಬೆಳ್ಳಿಯ ಪದಕ, ಎಮ್​.ಪವಿತ್ರ ಜಾವಲಿನ್​ ಮತ್ತು ಹ್ಯಾಮರ್​ತ್ರೋದಲ್ಲಿ ಚಿನ್ನದ ಪದಕ, ರಿಧಿ ಸಿ. ಶೆಟ್ಟಿ 800ಮೀ ಓಟದಲ್ಲಿ ಚಿನ್ನದ ಪದಕ, 400ಮೀ ಓಟದಲ್ಲಿ  ಬೆಳ್ಳಿಯ ಪದಕ, ಸಚಿತ್​ ಪಿ.ಕೆ. 800 ಮೀ ಮತ್ತು 400 ಮೀ ಹರ್ಡಲ್ಸ್​, 4X400 ಮೀ ರಿಲೇಯಲ್ಲಿ ಚಿನ್ನದ ಪದಕ, 400ಮೀ ಓಟದಲ್ಲಿ ಬೆಳ್ಳಿಯ ಪದಕ, ಸಾತ್ವಿಕ್​. ಆರ್​ 110ಮೀ ಹರ್ಡಲ್ಸ್ ನಲ್ಲಿ ಚಿನ್ನದ ಪದಕ, ಚವನ್​ಕುಮಾರ್​4X400ಮೀ ರಿಲೇಯಲ್ಲಿ ಚಿನ್ನದ ಪದಕ ಹಾಗೂ 4X400 ಮೀ  ರಿಲೇಯಲ್ಲಿ ಬೆಳ್ಳಿಯ ಪದಕ, ದ್ವಿತೀಯ ಪಿಯುಸಿಯ ಆಶ್ವಿಜ ಲಾಂಗ್​ಜಂಪ್​ ಮತ್ತು ಟ್ರಿಪಲ್​ಜಂಪ್​ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.

                                                                                                                                                                                                                                                                                                                                ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್​, ಡಾ. ಜ್ಯೋತಿ ಮತ್ತು ಯತೀಶ್​ ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top