ಬದಿಯಡ್ಕ: ಶ್ರೀಭಾರತಿ ವಿದ್ಯಾಪೀಠಕ್ಕೆ ಮುಂಬಯಿಯ ಎಲ್ಐಸಿ ಗೋಲ್ಡನ್ ಜ್ಯುಬಿಲಿ ಫೌಂಡೇಶನ್ ಶಾಲಾ ಬಸ್ ಅನ್ನು ಕೊಡುಗೆಯಾಗಿ ನೀಡಿದೆ. ಈ ಕಾರ್ಯಕ್ರಮ ನಿನ್ನೆ ನಡೆಯಿತು.
ಹವ್ಯಕ ಅಭ್ಯುದಯ ಚಾರಿಟೇಬಲ್ ಟ್ರಸ್ಟ್ ನ ಡಾ.ವೈ.ವಿ.ಕೃಷ್ಣಮುರ್ತಿ ಅಧ್ಯಕ್ಷಸ್ಥಾನ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಎಲ್.ಐ.ಸಿ. ಕ್ಯಾಲಿಕಟ್ ಸೀನಿಯರ್ ಡಿವಿಷನಲ್ ಮೆನೇಜರ್ ಆಜೇಶ್ ಬಸ್ಸನ್ನು ಹಸ್ತಾ೦ತರಿಸಿ ಶುಭ ಹಾರೈಸಿದರು.
ಕಾಸರಗೋಡು ಶಾಖೆ ಮೆನೇಜರ್ ವೇಣುಗೋಪಾಲನ್, ಮುಳ್ಳೇರಿಯಾ ಶಾಖೆ ಮೇನೇಜರ್ ಪ್ರೇಮಾನಂದನ್ ಎಲ್.ಐ. ಸಿ. ಅಡ್ವೈಸರ್ ರಮೇಶ ಭಟ್ ವೈ ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿದ್ಯಾಪೀಠ ಮೆನೇಜರ್ ಜಯಪ್ರಕಾಶ್ ಪಜಿಲ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಪಿಟಿಎ ಅಧ್ಯಕ್ಷ ಅನಂತಕೃಷ್ಣ ಚಡಗ, ಶಾಲಾ ಕೋಶಾಧಿಕಾರಿ ರಾಜಗೋಪಾಲ ಸಿ.ಎಚ್ ಮತ್ತು ಎಲ್.ಐ.ಸಿ. ಅಡ್ವೈಸರ್ ರಾಘವೇಂದ್ರ ಅಮ್ಮಣ್ಣಾಯ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ