ಬಳ್ಳಾರಿ:ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ಆರ್.ಗೋಪಾಲಕೃಷ್ಣ ನೇಮಕ

Upayuktha
0


ಬಳ್ಳಾರಿ:
ನೈರುತ್ಯ(ಸೌತ್ ವೆಸ್ಟ್ರನ್) ರೈಲ್ವೇ ವಿಭಾಗದ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯರನ್ನಾಗಿ ಬಳ್ಳಾರಿಯ ಆರ್.ಗೋಪಾಲ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ. ರೈಲ್ವೇ ವಿಭಾಗದ ವಾಣಿಜ್ಯ ವಿಭಾಗದ ವ್ಯವಸ್ಥಾಪಕರು ಈ ನೇಮಕ ಆದೇಶ ನೀಡಿದ್ದು. ಅ.18 2024 ರಿಂದ ಎರೆಡು ವರ್ಷಗಳ ಅವಧಿಗೆ ಇದು ಜಾರಿಯಲ್ಲಿರುತ್ತದೆಂದು ಹೇಳಿದ್ದಾರೆ. ಇವರ ನೇಮಕಕ್ಕೆ ಧಾರವಾಡ ಜಿಲ್ಲಾ ಗ್ರಾಹಕರ ಸಂರಕ್ಷಣಾ ಸಂಸ್ಥೆ ಶಿಫಾರಸು ಮಾಡಿತ್ತು. ತಮ್ಮ ನೇಮಕದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಗೋಪಾಲಕೃಷ್ಣ ಅವರು. ಪ್ರಧಾನಿ ಮೋದಿ ಅವರ ಆಡಳಿತ ಅವಧಿಯಲ್ಲಿ ದೇಶದಲ್ಲಿ ರೈಲ್ವೇ ವ್ಯವಸ್ಥೆ ಉತ್ತಮವಾಗಿ ಅಭಿವೃದ್ಧಿ ಯಾಗುತ್ತಿದ್ದು ಈ ಭಾಗದ ರೈಲ್ವೇ ಸೌಕರ್ಯ ಮತ್ತು ಗ್ರಾಹಕರ ಸೌಲಭ್ಯಗಳಿಗಾಗಿ ಪ್ರಯತ್ನಿಸಲಿದೆಂದು ಹೇಳಿದ್ದಾರೆ.ಇವರ ನೇಮಕಕ್ಕೆ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top