ಮಣಿಪಾಲ: ಡಾ|| ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಮಣಿಪಾಲದ ವತಿಯಿಂದ ಹಿರಿಯ ವೈದ್ಯೆ ಡಾ|| ಸಾವಿತ್ರಿ ದೈತೋಟ ಅವರನ್ನು ಇತ್ತೀಚೆಗೆ ಮಣಿಪಾಲ ಡಾಟ್ ನೆಟ್ ಸಭಾಂಗಣದಲ್ಲಿ ನಡೆದ 'ಆರೋಗ್ಯ ಸಂಧ್ಯಾ' ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಡಾ|| ಸಾವಿತ್ರಿ ದೈತೋಟ ಅವರು ಆಲೋಪತಿ ಪದ್ಧತಿಯಲ್ಲಿ ನಿರತರಾಗಿದ್ದು ಜನಪ್ರಿಯ ವೈದ್ಯರಾಗಿದ್ದರೂ ನಾಟಿ ವೈದ್ಯ ಪದ್ಧತಿ, ಅಮೂಲ್ಯ ಗಿಡಮೂಲಿಕೆಗಳು ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಮಹತ್ವದ ಬಗ್ಗೆ ಸಮಾಜದಲ್ಲಿ ಜನರಿಗೆ ಅರಿವು ಮೂಡಿಸಿ ಸುಲಭ ಚಿಕಿತ್ಸೆಯ ವಿಧಾನವನ್ನು ಪ್ರಚುರಪಡಿಸಿದ್ದಾರೆ.
ಅವರ ಈ ಸೇವೆಯನ್ನು ಗುರುತಿಸಿ ಡಾ|| ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಅವರಿಗೆ ಗೌರವ ಸನ್ಮಾನ ನೆರವೇರಿಸಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ