ಶ್ರೀ ಸತ್ಯಾತ್ಮವಾಣಿ-11: ಮಹಾಲಕ್ಷ್ಮೀ ಎಂತಹವರಲ್ಲಿ ನೆಲೆಸುತ್ತಾಳೆ?

Upayuktha
0



ಹಾಲಕ್ಷ್ಮಿದೇವಿಯ ಪೂಜೆಯ ಮಾಡಿ ಅನುಗ್ರಹ ಪಡೆಯುವ ದಿನ ಶ್ರಾವಣ ಶುಕ್ರವಾರ, ಮಹಾಭಾರತದ ವಚನಗಳಲ್ಲಿ ಮಹಾಲಕ್ಷ್ಮಿದೇವಿಯ ಅನುಗ್ರಹ ಪಡೆಯಲು ಎಂತಹ ಕಾರ್ಯಗಳನ್ನು ಮಾಡಬೇಕು ಎಂದು ಮಹಾಭಾರತದಲ್ಲಿ ಹೇಳುತ್ತಾರೆ,  ತಾನು ಎಂತಹ ಸ್ಥಾನದಲ್ಲಿ ವಾಸ ಮಾಡುತ್ತೇನೆ ಎಂದು ಹೇಳುತ್ತಾಳೆ ಇದನ್ನು ವೇದವ್ಯಾಸದೇವರು ಉಪದೇಶಿಸುತ್ತಾರೆ. ಯುಧಿಷ್ಠಿರ ಭೀಷ್ಮಾಚಾರ್ಯರಿಗೆ ಕೇಳುತ್ತಾನೆ. ಎಂತಹ ಸಂದರ್ಭದಲ್ಲಿ ಮನುಷ್ಯನಿಗೆ ಸೌಭಾಗ್ಯ ಉಂಟಾಗುತ್ತದೆ ಮಹಾಲಕ್ಷ್ಮಿ ಅನುಗ್ರಹ ಆಗುತ್ತದೆ ಎಂದು ಕೇಳಿದಾಗ ಭೀಷ್ಮರು ಹೇಳುತ್ತಾರೆ, ಇಂದ್ರ ಮತ್ತು ನಾರದು ಗಂಗಾ ನದೀ ತೀರದಲ್ಲಿ ಪವಿತ್ರ ಸ್ನಾನ ಮಾಡಿ ಗಂಗಾ ತೀರದಲ್ಲಿ ಸೇರುತ್ತಾರೆ. ಇಬ್ಬರು ವಿಷ್ಣು ಭಕ್ತರು ಸೇರುತ್ತಾರೆ ಆಗ ಭಗವಂತನ ಗುಣಗಳ ಮಹಿಮೆಯ ಬಗ್ಗೆ ಮಾತನಾಡುತ್ತಾರೆ. ಶ್ರೀಮದಾಚಾರ್ಯರ ಗ್ರಂಥಗಳಲ್ಲಿ ಪುರಾಣ ವೇದ ಮೊದಲಾದ ಗ್ರಂಥಗಳಲ್ಲಿ ಉಲ್ಲೇಖಿತವಾದ ಶಾಸ್ತ್ರ ಸಮ್ಮತವಾದ ವಿಚಾರಗಳೇ ಉಲ್ಲೇಖವಾಗಿರುವದನ್ನು ತಿಳಿದು ನಾವು ಅನುಸರಿಸಬೇಕು. 



ಭಗವಂತನ ಪ್ರೀತಿಗಾಗಿ ಜಪ ಆದರೂ ಮಾಡಬೇಕು ಅಥವಾ ಚರ್ಚೆಗಳನ್ನು ಮಾಡಬೇಕು. ಕೇಳಲು ಶಿಷ್ಯರಿದ್ದರೆ ಪಾಠ ಹೇಳಬೇಕು. ಯೋಗ್ಯ ಗುರುಗಳಿದ್ದರೆ ಪಾಠ ಕೇಳಬೇಕು. ಯಾರೂ ಇಲ್ಲದಾಗ ಜಪಗಳನ್ನು ಮಾಡಬೇಕು. ನಿತ್ಯ ನೈಮಿತ್ಯಿಕವಾಗಿ ಮಾಡಬೇಕಾದ ಸಮಯಕ್ಕೆ ಬೇಕಾದಷ್ಟು ಜಪವನ್ನು ಮಾಡಲೇ ಬೇಕು ಉಳಿದ ಕಾಲದಲ್ಲಿ ಪಾಠ ಪ್ರವಚನ ಮಾಡಬೇಕು ಎಂಬ ಮಾತನ್ನು ಮಹಾಭಾರತದಲ್ಲಿ ಕೂಡ ಹೇಳಿದ್ದಾರೆ. ನಾರದರು ಮತ್ತು ಇಂದ್ರ ದೇವರು ಅರೂಣೋದಯ ಕಾಲದಲ್ಲಿ ಸ್ನಾನ ಮತ್ತು ಜಪವನ್ನು ಮಾಡಿ ಆಶ್ರಮದಲ್ಲಿ ಕುಳಿತಾಗ ಭಗವಂತನ ಕಥೆಗಳನ್ನು ಒಬ್ಬರು ಹೇಳಬೇಕು ಒಬ್ಬರು ಕೇಳಬೇಕು ಈ ಕಾರ್ಯದಲ್ಲಿ ಮುಳುಗಿರುತ್ತಾರೆ. 


ಆ ಸಮಯದಲ್ಲಿ ಬರುತ್ತಿರುವ ತೇಜ ಪಂಜವನ್ನು ನೋಡಿ ಅಗ್ನಿ ಮೇಲೆ ಜ್ವಲಿಸುತ್ತಾನೆ. ಸೂರ್ಯ ಸುತ್ತಲೂ ತಿರುಗುತ್ತಾನೆ ಮೇಲಿಂದ ಕೆಳಗೆ ಇಳಿಯತ್ತಿರುವುದು ಏನೂ ಎಂದು ತಿಳಿಯಲಿಲ್ಲ ಎಂದು ನೋಡುವಾಗ ಮಹಾಲಕ್ಷ್ಮಿಯು ಬರುತ್ತಾಳೆ. ಸಕಲ ಜೀವಿಗಳಲ್ಲಿ ಅತೀ ಸುಂದರವಾದ ರೂಪದಲ್ಲಿ ಮಹಾಲಕ್ಷ್ಮೀಯು ಸರ್ವಾಲಂಕಾರ ಭೂಷಿತಳಾಗಿ ಇವರನ್ನು ಅನುಗ್ರಹಿಸಲು ದೇವಿ ಕೆಳಗೆ ಇಳಿದು ಬರುತ್ತಾಳೆ. ಅವಳು ಇವರುಗಳು ಮಾಡುತ್ತಿರುವ ಪಾಠ ಪ್ರವಚನದ ಭಗವಂತನ ಮಹಿಮೆಯ ಶ್ರವಣ ಮಾಡುವುದನ್ನು ನೋಡಿ ಪ್ರಸನ್ನಳಾಗಿ ಬಂದಿರುತ್ತಾಳೆ, ಭಗವಂತನ ಮಹಿಮೆಯ ಶ್ರವಣಕ್ಕೆ ಎಂತಹ ಮಹತ್ವ ಇದೆ ಎಂದು  ಈ ಕಥೆಯಿಂದ ತಿಳಿಯಬೇಕು.



ಯಾವ ರಾಜರು ಧರ್ಮದ ಯುದ್ಧದಲ್ಲಿ ಬೆನ್ನು ತೋರದ ರಾಜರಲ್ಲಿ ನನ್ನ ಸಾನಿಧ್ಯ ಇರುತ್ತದೆ. ಧರ್ಮ ಸ್ಥಾಪನೆಯನ್ನು ಮಾಡಲು ಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳುತ್ತಾಳೆ. ಭಗವಂತನ ಪ್ರೀತಿ ಸದಾ ಇದ್ದರೂ ಲಕ್ಷ್ಮಿದೇವಿ ಭಗವಂತನ ಪ್ರೀತಿಗಾಗಿ ನಿತ್ಯ ಎಲ್ಲ ಕಾರ್ಯಗಳನ್ನು ಮಾಡುತ್ತೇನೆ ಎನ್ನುತ್ತಾಳೇ, ವಿನಯ ಇರುವವರು, ದಾನ ಧರ್ಮ ಮಾಡುವವರಲ್ಲಿ ವಿಶೇಷ ಸನ್ನಿಹಿತಳಾಗಿ ಸಮೃದ್ಧಿಯನ್ನು ಕೊಡುತ್ತೇನೆ ಎನ್ನುತ್ತಾಳೆ  ಅಂಭ್ರಣಿ ಸೂಕ್ತದಲ್ಲಿ ಹೇಳುತ್ತಾರೆ. ಅಮಂತುಗಳು ಅಂದರೆ ಶಾಸ್ತ್ರ ರೀತಿಯಲ್ಲಿ ಇರುವವಂತಹವರ ಹತ್ತಿರ ನಾನು ವಾಸಿಸುತ್ತೇನೆ, ಅಧರ್ಮದಿಂದ ಇರುವವರಿಂದ ದೂರ ಇರುತ್ತೇನೆ ಎನ್ನುತ್ತಾಳೇ. ಶ್ರೀಮಂತಿಕೆ ಇದ್ದರೆ ಅವರಿಗೆ ಲಕ್ಷ್ಮಿ ದೇವಿಯ ಅನುಗ್ರಹ ಇದೆ ಎಂದು ತಿಳಿಯಬಾರದು. ಅಧರ್ಮಿಗಳಿಗೆ ಬಹಳವಾದ ಅನುಕೂಲ ಎನಿಸಿದರೂ  ಅದು ಶಾಶ್ವತವಾದುದಲ್ಲ. ಧರ್ಮವಂತರಲ್ಲಿ ಮಾತ್ರ ಶಾಶ್ವತವಾಗಿ ಜೊತೆಗಿರುವ ಸಂಪತ್ತನ್ನು ಲಕ್ಷ್ಮಿ ದೇವಿ ನೀಡುತ್ತಾಳೆ ಅದು ಅಭಿವೃದ್ಧಿಯಾಗುತ್ತದೆ. 


ಎಂತಹ ಗುಣವಂತರ ಬಳಿ ಇರುತ್ತೀಯೇ ಎಂದಾಗ ಲಕ್ಷ್ಮೀ ದೇವಿ ಹೇಳುತ್ತಾಳೆ, ತಾತ್ಕಾಲಿಕವಾಗಿ ಧರ್ಮ ಮಾಡಿದವರಿಗೂ ನಾನು ಅನುಗ್ರಹ ಮಾಡುತ್ತೇನೆ ಆದರೆ ರಾಕ್ಷಸರಲ್ಲಿಯೂ ಇದ್ದರೂ ನಿಜವಾದ ಧರ್ಮವಂತರಾದ ದೇವತೆಗಳ ಬಳಿ ಬಂದಿದ್ದೇನೆ ಎನ್ನುತ್ತಾಳೆ. 


ಅವರ ವರ್ಣಾಶ್ರಮಗಳನ್ನು ಬಿಡದೆ, ಪುಣ್ಯ ಕರ್ಮ ಮಾಡುತ್ತಿದ್ದು, ‍ದಾನ ಯಜ್ಞ ಯಾಗಾದಿ ಅತಿಥಿ ಪೂಜೆ ದಾನ ಧರ್ಮಗಳ ಪೂಜೆಯನ್ನು ಮಾಡುತ್ತಿರುತ್ತಾರೋ ಅವರ ಬಳಿ ಇರುತ್ತೇನೆ ಎಂದು ಹೇಳಿ ಅದಕ್ಕಾಗಿ ರಾಕ್ಷಸರು ಅದನ್ನು ಅನುಸರಿಸಿದ್ದರಿಂದ ಅವರ ಬಳಿಯೂ ಇದ್ದೇ ಎನ್ನುತ್ತಾಳೆ.

ಅತಿಥಿ ಅಭ್ಯಾಗತ ಸೇವೆಯನ್ನು ಮಾಡಿದಾಗ ಅವರ ಹರಸಿದಾಗ ಅವರ ಅಭಿವೃದ್ಧಿಯಾಗುತ್ತದೆ. ನಾವು ನಿತ್ಯದಲ್ಲಿ ಗುರುಗಳ ಸೇವೆ ಅತಿಥಿ ಅಭ್ಯಾಗತರ ಸೇವೆ, ಪಿತೃಕಾರ್ಯ, ದೇವತಾ ಕಾರ್ಯ ದಿನ ನಿತ್ಯದ ಪೂಜೆಯನ್ನು ನಮಗೆ ವಿಹಿತವಾದ ಕರ್ಮಗಳನ್ನು ನಿತ್ಯವೂ ತಪ್ಪದೇ ಮಾಡಿದರೆ ಅಂತಹವರಲ್ಲಿ ಲಕ್ಷ್ಮಿ ದೇವಿ ನೆಲಸುತ್ತಾಳೆ ಎಂದು ಸ್ವತಃ ಹೇಳುತ್ತಾಳೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top