ಕವನ: ಭಾರತಾಂಬೆ

Upayuktha
0


ತಾಯೇ ನಿನ್ನ ಮಡಿಲು 

ಅದು ಆನಂದದ ಕಡಲು 

ನಿನ್ನ ಸುಂದರ ರೂಪ 

ವರ್ಣಿಸಲು ಸಾಧ್ಯವೇನಪ್ಪ 


ಹಸಿರು ವನಸಿರಿಯ ಸೊಬಗು 

ಹಿಮಾಲಯದ ಹಿಮಾಚ್ಚಾಡಿತ ಬೆಡಗು 

ಎಲ್ಲೆಲ್ಲೂ  ಬಾನಾಡಿಗಳ ಗಾನ 

ಮನಕೆ ತಂದಿತು ಹರ್ಷವನು 


ಗಂಗೆ ಯಮುನಾ ನದಿಗಳ ಜಲ 

ನಿನ್ನ ಪಾದ ತೊಳೆದು ಪಾವನವಾಗಲು 

ದಕ್ಷಿಣದಲಿ ತುಂಗಾ ಕಾವೇರಿ 

ಮಾಡಿವೆ ಆ ಜಾಗವನೇ ಸಿರಿ 


ಕಾಳಿದಾಸ ಪ್ರೇಮಚಂದ ರನ್ನ 

ನಿನ್ನ ಹೊಗಳಿ ಹಾಡಿದ್ದಾರೆ ಗಾನ 

ರಾಮ ಕೃಷ್ಣರು ಜನಿಸಿದ ಪುಣ್ಯಭೂಮಿ 

ಶಿವಾಜಿ, ರಾಣಾ ಪ್ರತಾಪರಾಳಿದ 

ಜನ್ಮಭೂಮಿ 


ನಿನ್ನ ಮಡಿಲಲಿ ಹುಟ್ಟಬೇಕು ಎಂದೂ 

ಇದೇ ನನ್ನ ಮನದಾಸೆ ಎಂಬುದು 

ನಿನ್ನ ಚರಣದಲಿ ಸೇವೆ ಮಾಡುವೆ 

ತಾಯೇ ನಿನಗೆ ಜಯವಾಗಲಿ ಎಂಬೆ 


ನಿನ್ನನೆಷ್ಟು ವರ್ಣಿಸಿದರೂ ಕಡಿಮೆಯೇ ಭಾರತಾಂಬೆ 

ಮೊಳಗಲಿ ಎಂದೂ ಘೋಷ ಜೈ ಅಂಬೇ 


- ರೇಖಾ. ಮುತಾಲಿಕ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top