ವಿಜಯನಗರ:ಪ್ರಪಂಚದಲ್ಲಿ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯವೆಂಬ ಹೆಮ್ಮೆಯೊಂದಿಗೆ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯದ ಏಳುನೂರು ಎಕರೆಯಷ್ಟು ಭೂಮಿಯಲ್ಲಿರುವ ಅರಣ್ಯ ಪ್ರದೇಶವು ದೇಶದಲ್ಲೇ ಅಪರೂಪವಾಗಿದ್ದು, ಇಲ್ಲಿನ ದಟ್ಟವಾದ ಅರಣ್ಯ ಪರಿಸರದಲ್ಲಿ ನೂರಕ್ಕೂ ಹೆಚ್ಚು ಜೀವವೈವಿಧ್ಯತೆಗಳು ನೆಲೆಸಿವೆ. ಇನ್ನೂರಕ್ಕೂ ಹೆಚ್ಚಿನ ಅಪರೂಪದ ಮತ್ತು ಪರಿಸರ ಸಮತೋಲನ ಕಾಪಾಡುವ ಸಸ್ಯ ಪ್ರಭೇದಗಳಿವೆ. ಇದು ನಾಡಿನಲ್ಲೇ ಹೆಮ್ಮೆಯ ಜೀವವೈವಿಧ್ಯತೆಯ ತಾಣವಾಗಿದೆ ಎಂದು ಹಿರಿಯ ಪರಿಸರ ವಿಜ್ಞಾನಿ ಪ್ರೊ.ನಾಗರಾಜು ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಅರಣ್ಯ ಪರಿಸರದಲ್ಲಿ ಎರಡು ದಿನಗಳ ವಿಶ್ವವಿದ್ಯಾಲಯದ ಹಸಿರು ಸಮೃದ್ಧಿಯ ತಪಾಸಣೆಯನ್ನು ಮಾಡಲು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿನ ದಟ್ಟವಾದ ಹಸಿರ ಪರಿಸರ ಹಾಗೂ ಪ್ರಾಣಿ-ಪಕ್ಷಿಗಳ ವೈವಿಧ್ಯತೆಯನ್ನು ಕಂಡು ನನಗೆ ಆಶ್ಚರ್ಯಕರವಾಗಿದೆ. ಈ ಪರಿಸರದಿಂದ ಇಲ್ಲಿ ಮತ್ತು ಸುತ್ತಮುತ್ತಲ ವಾಸಿಗಳಿಗೆ ಶುದ್ಧವಾದ ಗಾಳಿ ದೊಕುವುದಲ್ಲದೆ ಅವರ ಬೌದ್ಧಿಕ ಮಟ್ಟವೂ ಹೆಚ್ಚಾಗಿದೆಯೆಂದು ತಿಳಿಸಿದರು. ಪ್ರಮುಖವಾಗಿ ಆವರಣದಲ್ಲಿರುವ ವೈವಿಧ್ಯಮಯ ಪಕ್ಷಿ ಸಂಕುಲ ಅಲ್ಲದೆ, ಮೊಲಗಳು, ನವಿಲುಗಳು, ವಿವಿಧ ಪ್ರಭೇದದ ಹಾವುಗಳು, ಹಲ್ಲಿಗಳು, ಜೇಡಗಳು, ಚೇಳುಗಳು, ಕಾಡುಹಂದಿಗಳು, ಕರಡಿ ಹಾಗೂ ಚಿರತೆಗಳ ಓಡಾಟವನ್ನು ನಾವು ಕಾಣಬಹುದಾಗಿದ್ದು,
ಇವು ಕನ್ನಡ ವಿಶ್ವವಿದ್ಯಾಲಯದ ಪರಿಸರದ ಮಹತ್ವವನ್ನು ಸಾರುತ್ತಿವೆ. ಈ ಅಪರೂಪದ ಪರಿಸರವನ್ನು ಉಳಿಸುವ ಮತ್ತು ಬೆಳೆಸು ಹೊಣೆಗಾರಿಕೆ ಎಲ್ಲರಿಗೂ ಸೇರುತ್ತದೆ ಎಂದು ನುಡಿದರು. ಇನ್ನು ವಿಶ್ವವಿದ್ಯಾಲಯದ ಕಟ್ಟಡಗಳೂ ಪರಿಸರಕ್ಕೆ ಪೂರಕವಾಗಿದ್ದು ನಾಡಿನಲ್ಲೇ ಅಪರೂಪದ ವಿನ್ಯಾಸ ಹೊಂದಿವೆ. ಇಂತಹ ಅರಣ್ಯ ಪರಿಸರವನ್ನು ಸಂರಕ್ಷಿಸಲು ಸ್ಥಳೀಯರು ಮತ್ತು ಸರ್ಕಾರವೂ ಕೈಜೋಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೀವತಂತ್ರಜ್ಞಾನ ವಿಜ್ಞಾನಿ ಪ್ರೊ. ಗಿರೀಶ್, ಸಹಾಯಕ ಕುಲಸಚಿವರಾದ ಎಂ.ಶಿವಪ್ರಕಾಶ್, ವಿಜ್ಞಾನ ನಿಕಾಯದ ಡೀನರಾದ ಪ್ರೊ. ಶೈಲಜ ಇಂ. ಹಿರೇಮಠ, ತೋಟಗಾರಿಕಾ ವಿಭಾಗದ ಬೀರಪ್ಪ, ತಾಂತ್ರಿಕ ವಿಭಾಗದ ಚಂದ್ರಶೇಖರ್ ಮುಂತಾದವರು ಇದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ