ಇಂದು ಸಂಜೆ ಅಬುಧಾಬಿಯ ಫಲವತ್ತಾದ ಮರುಭೂಮಿಯ ಮೇಲೆ ವಾಯುವಿಹಾರ ಮಾಡುತ್ತಿರುವಾಗ ಹೊಸದೊಂದು ಆರ್ಥಿಕ ಚಿಂತನೆ ಇದಕ್ಕಿದ್ದ ಹಾಗೆ ತಲೆಗೆ ಹೊಳೆಯಿತು. ಏನೂ ಇಲ್ಲದ ದೇಶಗಳಿಂದು ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯುತ್ತಿವೆ. ಅಮೆರಿಕ, ಸ್ವಿಟ್ಜರ್ಲ್ಯಾಂಡ್, ಯುಎಇ ಮುಂತಾದ ರಾಷ್ಟ್ರಗಳು. ಸರಿಯಾಗಿ ನೇೂಡಿದರೆ ಅವುಗಳಿಗೆ ಸರಿಯಾದ ಪರಿಸರವೂ ಇಲ್ಲ, ನೈಸರ್ಗಿಕ ಸಂಪತ್ತೂ ಇಲ್ಲ. ಒಳಹೊಕ್ಕು ನೇೂಡಿದರೆ ಸರಿಯಾದ ಮಾನವ ಸಂಪತ್ತು ಕೂಡ ಇಲ್ಲ.
ಆದರೆ ಅದೇ ಸಕಲ ಸಂಪತ್ತು ಹೊಂದಿರುವ ನಮ್ಮ ದೇಶಕ್ಕೆ ಈ ಸಿರಿ ಸಂಪತ್ತಿನ ಭಾಗ್ಯ ಪಡೆಯಬೇಕಾದರೆ ಎಷ್ಟೊಂದು ಕಾಲ ಇಷ್ಟೊಂದು ಕಷ್ಟಪಡಬೇಕಾಗಿ ಬಂದಿದೆ. ಅಂದರೆ ಇದಕ್ಕೆ ಕಾರಣವೇನು? ಹಾಗಾದರೆ ಈ ಅಮೆರಿಕ, ಈ ಸ್ವಿಟ್ಜರ್ಲ್ಯಾಂಡ್, ಈ ಯುಎಇ ಮುಂತಾದ ದೇಶಗಳಿಗೆ ಈ ಶ್ರೀಮಂತಿಕೆ ಬಂದಿರುವುದು ಸ್ವಂತ ದುಡಿದು ಗಳಿಸಿದ ಸಂಪತ್ತಾ? ಖಂಡಿತವಾಗಿಯೂ ಅಲ್ಲ. ಇದರೊಳಗೊಂದು ಸುಲಭವಾದ ಆರ್ಥಿಕತೆಯ ಚಿಂತನೆಯೂ ಇದೆ. ಆದರೆ ಈ ಉಪಾಯ ನಮ್ಮ ತಲೆಗೆ ಹೊಳೆಯಲೇ ಇಲ್ಲ. ಹಾಗಾದರೆ ಇದು ನಮ್ಮಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ? ಅನ್ನುವ ಹತ್ತಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಸುಳಿದು ಹೋದವು.
ಕೊನೆಗೂ ಹೊಳೆದ ಒಂದು ಸುಲಭದ ಉಪಾಯವೆಂದರೆ, ನಾವು ಶ್ರೀಮಂತರಾಗಬೇಕಾದರೆ ನಮಗಾಗಿ ದುಡಿಯುವ ಹೊರಗಿನ ಕೈಗಳು ಬೇಕು ಅನ್ನುವ ಹೊಸದೊಂದು ಆರ್ಥಿಕ ಚಿಂತನೆ. ಇಂದಿನ ಕಾಲದಲ್ಲಿ ನಾವು ಮೆರೆಯಬೇಕಾದರೆ ನಮ್ಮ ದುಡಿಮೆಯೊಂದೇ ಸಾಕಾಗುವುದಿಲ್ಲ, ಬೇರೆಯವರು ನಮ್ಮ ಪರವಾಗಿ ದುಡಿಯುವವರು ಬೇಕು. ಇದು ಹೇಗೆ ಸಾಧ್ಯ ಅನ್ನುವುದನ್ನು ಜಗತ್ತಿನ ಈ ಎಲ್ಲಾ ಶ್ರೀಮಂತ ರಾಷ್ಟ್ರಗಳು ಸಾಧಿಸಿತೇೂರಿಸಿದ್ದಾವೆ. ಹಾಗಾಗಿ ಅವರು ಇಂದು ಶ್ರೀಮಂತರ ಪಟ್ಟಿಯಲ್ಲಿ ನಿಂತಿದ್ದಾರೆ. ಇದು ಹೇಗೆ ಅನ್ನುವುದೇ ಇಂದಿನ ಅರ್ಥಿಕ ಚಿಂತನೆ.
ಈ ಮೇಲಿನ ಎಲ್ಲಾ ದೇಶಗಳಿಗೆ ತಮ್ಮ ಜನರನ್ನು ಸಾಕುವ ಕೆಲಸ ತುಂಬಾ ಕಡಿಮೆ. ಆದರೆ ಆ ದೇಶಗಳಲ್ಲಿ ದುಡಿಯುವ ಕೈಗಳು ಆ ದೇಶದ ಜನರಿಗಿಂತ ತುಂಬಾ ಜಾಸ್ತಿ ಇದ್ದಾರೆ. ಹೊರಗಿನಿಂದ ಬಂದು ದುಡಿಯುವ ಮಂದಿಗೆ ಆ ದೇಶದ ಖಜಾನೆಯಿಂದ ನಯಾಪೈಸೆ ಖರ್ಚು ಮಾಡಬೇಕಾಗಿಲ್ಲ. ಬದಲಾಗಿ ಇವರಿಂದಾಗಿ ಇವರಿಂದಲೇ ಅವರ ಖಜಾನೆ ತುಂಬಿಸಿ ಕೊಡುವ ಕೆಲಸ ನಾವು ಮಾಡುತ್ತಿದ್ದೇವೆ. ಇಲ್ಲಿ ಸರ್ಕಾರಕ್ಕೆ ಲಾಭವೇ ಜಾಸ್ತಿ ಹೊರತು ನಷ್ಟ ಇಲ್ಲ. ನಮ್ಮ ವಿದ್ಯೆ ನಮ್ಮ ಆರೇೂಗ್ಯ ಎಲ್ಲವನ್ನೂ ನಾವೇ ನೇೂಡಿಕೊಳ್ಳ ಬೇಕು. ಉದಾ: ನಮ್ಮ ದೇಶದ ವಿದ್ಯಾವಂತರು ಬುದ್ಧಿವಂತರು ಅನ್ನಿಸಿಕೊಂಡವರು ಹೆಚ್ಚಿನ ವೇತನಕ್ಕಾಗಿಯೊ ಸೌಕರ್ಯಕ್ಕಾಗಿಯೊ ಐಷಾರಾಮಿ ಜೀವನಕ್ಕಾಗಿ ಇಂತಹ ದೇಶಗಳನ್ನೇ ಹುಡುಕಿಕೊಂಡು ನಾವೇ ಹೇೂಗುತ್ತೇವೆ.
ನಾವು ಗಳಿಸಿದ ವೇತನದ ಮುಕ್ಕಾಲು ಭಾಗವಾದರೂ ಅಲ್ಲಿ ಖರ್ಚು ಮಾಡಿಯೇ ಮಾಡುತ್ತೇವೆ. ಇದು ನಾವು ಅವರ ದೇಶದಲ್ಲಿ ಕೆಲಸ ಮಾಡಿ ಪರೇೂಕ್ಷವಾಗಿ ಅವರಿಗೆ ಕೊಡುವ ಸಂಪತ್ತು ಹೌದು. ನಮ್ಮ ಸೇವೆಗಾಗಿ ಆ ದೇಶ ನಮಗಾಗಿ ಏನೂ ಕೊಡಬೇಕಾಗಿಲ್ಲ. ಎಲ್ಲಿಯವರೆಗೆ ಅಂದರೆ ಪೌರತ್ವ ಕೂಡಾ ಕೊಡುವುದಿಲ್ಲ. ಒಂದು ಅರ್ಥದಲ್ಲಿ ಪ್ರವಾಸೋದ್ಯಮ ಒಂದು ದೇಶಕ್ಕೆ ಯಾವ ರೀತಿಯಲ್ಲಿ ಲಾಭ ತರಬಹುದೊ ಅದೇ ತರದಲ್ಲಿ ನಮ್ಮ ಹಣದಿಂದಲೇ ಅವರ ಬೊಕ್ಕಸ ತುಂಬಿಸುವ ಕೆಲಸ ನಾವು ಮಾಡುತ್ತೇವೆ ಅಷ್ಟೇ. ಹಾಗಾಗಿ ಅವರ ಜನರನ್ನು ಸಾಕುವ ಜವಾಬ್ದಾರಿಯನ್ನು ನಾವು ಹೊತ್ತ ಹಾಗೆ.
ಆದುದರಿಂದಲೆ ಇಂತಹ ಪ್ರತಿಭಾವಂತರನ್ನು ತಮ್ಮ ದೇಶಗಳಿಗೆ ಸೆಳೆಯುವ ಕಾರಣಕ್ಕಾಗಿಯೇ ಅತ್ಯುತ್ತಮವಾದ ಪರಿಸರ ಪರಿಕರ ಸ್ವಾಫ್ಟವೇರ್ ಕಂಪನಿಗಳನ್ನು ಸ್ಥಾಪನೆಗೆ ಪೂರಕವಾದ ವ್ಯವಸ್ಥೆ. ಸ್ವಲ್ಪಮಟ್ಟಿಗೆ ಬೇರೆ ಬೇರೆ ತರದಲ್ಲಿ ಆಕಷಿ೯ಸುವ ತಂತ್ರಗಾರಿಕೆಗಳನ್ನು ಅಳವಡಿಸಿಕೊಳ್ಳುತ್ತವೆ. ಅದು ಕೂಡಾ ಅವರ ಲಾಭಕ್ಕಾಗಿಯೇ ಹೊರತು ನಮ್ಮ ಲಾಭಕ್ಕಾಗಿ ಅಲ್ಲ.
ಹಾಗಾದರೆ ನಮ್ಮಲ್ಲಿ ಅಂದರೆ ಭಾರತದಲ್ಲಿ ಈ ಆಥ೯ ಚಿಂತನೆ ಯಾಕೆ ಹುಟ್ಟಿಕೊಳ್ಳಲಿಲ್ಲವೇಕೆ? ನಮ್ಮಲ್ಲಿ ಇರುವ 145 ಕೇೂಟಿ ಜನರನ್ನು ನಮ್ಮ ದುಡಿಮೆಯಲ್ಲಿಯೇ ನಮ್ಮ ಖರ್ಚಿನಲ್ಲಿಯೇ ಸಾಕಬೇಕಾದ ಪರಿಸ್ಥಿತಿ. ಅವರ ವಿದ್ಯಾಭ್ಯಾಸ, ಆರೇೂಗ್ಯ, ಉದ್ಯೋಗ, ಗ್ಯಾರಂಟಿ ಸಬ್ಸಿಡಿ, ಒಂದೇ ಎರಡೇ... ಎಲ್ಲದಕ್ಕೂ ನಮ್ಮ ದುಡಿಮೆಯಲ್ಲಿಯೇ ನೇೂಡಿಕೊಳ್ಳಬೇಕು. ನಮಗಾಗಿ ದುಡಿಯುವ ಹೊರಗಿನ ಕೈಗಳು ಇಲ್ಲಿ ಬರಲೇ ಇಲ್ಲ. ಹೊರಗಿನವರು ಬಂದು ನಮಗಾಗಿ ಕೆಲಸ ಮಾಡುವ ಆರ್ಥಿಕತೆಯ ಕಡೆಗೆ ನಾವು ಗಮನ ಹರಿಸಲೇ ಇಲ್ಲ. ಬದಲಾಗಿ ಬೇರೆಯವರಿಗಾಗಿ ದುಡಿಯಲು ನಾವು ಹೊರದೇಶಗಳಿಗೆ ಉದ್ಯೋಗ ಹುಡುಕಿಕೊಂಡು ಹೇೂಗುವ ಪರಿಸ್ಥಿತಿ ನಮ್ಮದು. ಹಾಗಾಗಿ ನಾವು ಸುಲಭ ದಾರಿಯಲ್ಲಿ ಶ್ರೀಮಂತರಾಗಲೂ ಸಾಧ್ಯವಿಲ್ಲ. ಏನ್ನಿದರೂ ಹಾಸಿಗೆ ಇದ್ದಷ್ಟೆ ಕಾಲು ಚಾಚಿ ಮಲಗುವ ಆಥಿ೯ಕ ಬದುಕು ನಮ್ಮದು. ಅಲ್ವೇ?.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ