ಚಲನಚಿತ್ರರಂಗದ ಮಾಂತ್ರಿಕ ನಿರ್ದೇಶಕ, ಮರೆಯಲಾಗದ ಕಲಾವಿದ ವಿ. ಶಾಂತಾರಾಂ

Upayuktha
0


1959ರಲ್ಲಿ ಬಿಡುಗಡೆಯಾದ 'ನವರಂಗ್' ಚಿತ್ರದ ಆರಂಭದಲ್ಲಿ ನಿರ್ದೇಶಕ ಹೇಳುವ ಸತ್ಯಕಥೆ, ಇನ್ನೂ ನನ್ನ ಮನದಾಳದಲ್ಲಿ ಹಸಿರಾಗಿದೆ. ತನ್ನ ನಿರ್ದೇಶನ ಹಾಗೂ ಅಭಿನಯದ ಹಿಂದಿನ ಚಿತ್ರ 'ದೋ ಆಂಖೆ ದಾರಾ ಹಾಥ್'ನ ಕೊನೆಯ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ, ಭಯಂಕರ ಗೂಳಿಯೊಂದಿಗೆ ಹೊರಾಡುವ ದೃಶ್ಯದಲ್ಲಿ, ನಾಯಕ ಪಾತ್ರಧಾರಿ ನಿರ್ದೇಶಕನ ಕಣ್ಣುಗಳಿಗೆ ಗಾಯವಾಗಿ, ಕಣ್ಣಿನ ಚಿಕಿತ್ಸೆಗಾಗಿ, ನಿಜ ಜೀವನದಲ್ಲಿ ಎರಡೂ ಕಣ್ಣುಗಳಿಗೆ ಪಟ್ಟಿ ಕಟ್ಟಿದ್ದರಂತೆ. ಒಳಗಣ್ಣುಗಳ ಎದುರು ಬಣ್ಣ ಬಣ್ಣದ ಜೀವನದ ಕಲ್ಪನೆ ಹಾಗೂ ಕನಸಿನ ಚಿತ್ರಗಳು ಮೂಡಿದವಂತೆ. ಮುಂದೆ ಕಣ್ಣುಗಳು ಕಾಣುವಂತಾದಾಗ, ಈ ನಿರ್ದೇಶಕ ಚಿತ್ರಿಸಿದ ಚಿತ್ರ 'ನವರಂಗ್'. ಈ ಅಪೂರ್ವ ವ್ಯಕ್ತಿಯೇ ಶಾಂತಾರಾಮ್ ರಾಜಾರಾಮ್ ವಣಕುದ್ರೆ. 


'ನವರಂಗ್' ಚಿತ್ರದಲ್ಲಿ ಸ್ವಾತಂತ್ರö್ಯಪೂರ್ವ ಕಾಲದ ಸಾಂಪ್ರದಾಯಿಕ ಕುಟುಂಬದಲ್ಲಿಯ ದಿವಾಕರ ಎಂಬ ಕಲ್ಪನೆ ಕನಸು ಕಾಣುವ ಕವಿ, ತನ್ನ ಹೆಂಡತಿ ಜಮುನಾಳನ್ನು ಅಪಾರವಾಗಿ ಪ್ರೀತಿಸಿ, ಆಕೆಯಲ್ಲೇ ತನ್ನ ಕಾವ್ಯಸ್ಪೂರ್ತಿ ಕನ್ನಿಕೆ ಮೋಹಿನಿಯನ್ನು ಕಾಣುತ್ತಾನೆ. ಮಡದಿಯು ಮಾಡುವ ಎಲ್ಲ ಮನೆ ಕೆಲಸ, ತನಗೆ ಬಡಿಸುವ ಊಟ, ವಿರಾಮ, ಏಕಾಂತ ಎಲ್ಲೆಡೆ ಆಕೆಯಲ್ಲೇ, ನರ್ತಿಸುವ, ಹಾಡುವ ಮೋಹಿನಿಯನ್ನೇ ಕಾಣುವ ಗಂಡ. ಪತ್ನಿಯ ವಿರಹದಿಂದ ಕವಿ ಹುಚ್ಚನಂತಾಗಿದ್ದಾನೆ. 'ತೂ ಛುಪೀ ಹೈ ಕಹಾ' ಎಂದು ಹಾಡುತ್ತಾನೆ, ಕವಿ ಪತ್ನಿ, ಮೆಲ್ಲಗೆ ಒಳ ಬಂದಂತೆ, ಆಕೆಯ ಕಾಲಿನ ಗೆಜ್ಜೆಯ ಸದ್ದುಗಳಿಂದ ಕವಿಗೆ ತನ್ನ ಹೆಂಡತಿ ಬಂದಳೆಂದು ಉತ್ಸಾಹ ಏರುತ್ತ, ಸಂತಸ ಗೀತೆ ಹಾಡುತ್ತಾನೆ. ಈ ದೃಶ್ಯದಲ್ಲಿ ಸಂಧ್ಯಾಳ ನೃತ್ಯ, ಮನ್ನಾಡೆಯ ಗಾಯನ, ಮಹಿಪಾಲನ ನಟನೆ, ದೃಶ್ಯ ಸಂಯೋಜನೆ ಅಪೂರ್ವ. ಅಂತೂ ಕೊನೆಗೆ ಕವಿಯ ಹೆಂಡತಿಗೆ ತಾನೇ ಕವಿಯ ಮೋಹಿನಿ ಎಂಬ ಅರಿವಾಗುತ್ತದೆ. 'ಆಧಾ ಹೈ ಚಂದ್ರಮಾ', 'ಅರೆ ಜಾರ್ ಹಟ್ ನಟಖಟ್', 'ಶ್ಯಾಮಲ್ ಶ್ಯಾಮಲ್ ಬದನ್', 'ತೂ ಮೇರಿ ಮೈ ತೇರಿ' ಮುಂತಾದ ಗೀತೆಗಳು ಭರತ್ ವ್ಯಾಸ್‌ರ ರಚನೆ, ಸಿ.ರಾಮಚಂದ್ರ ಅವರ ಸಂಗೀತ ಹಾಗೂ ಶ್ಯಾಮ್ ಕುಮಾರ್ ಅವರ ನೃತ್ಯ ಸಂಯೋಜನೆಗಳಿಂದ ಅತ್ಯುತ್ತಮವಾಗಿದ್ದವು. 


1959ರಲ್ಲೇ ಇದು ವರ್ಣರಂಜಿತ ಚಿತ್ರವಾಗಿತ್ತು. 1955ರಲ್ಲಿ ಅಖಿಲ ಭಾರತ ಪ್ರತಿಭಾ ಪ್ರಶಸ್ತಿ ಪತ್ರ ಪಡೆದ 'ಝಣಕ್ ಝಣಕ ಪಾಯಲ್ ಬಾಜೆಗೆ', ರಾಷ್ಟ್ರಪತಿಗಳ ಬೆಳ್ಳೀ ಪದಕ ಪಡೆದ ಹಿಂದೀ ಭಾಷೆಯ ಅತ್ಯುತ್ತಮ ಚಿತ್ರ ಎಂಬ ಮಾನ್ಯತೆಯೂ ಸಿಕ್ಕಿತ್ತು. 1957ರಲ್ಲಿ 'ದೋ ಆಂಖೆ ಬಾರಾ ಹಾಥ್'ಗೆ ರಾಷ್ಟçಪತಿಗಳ ಸ್ವರ್ಣ ಪದಕ ಪಡೆದ ಅತ್ಯುತ್ತಮ ಚಿತ್ರ ಎಂಬ ಮಾನ್ಯತೆ, ಅಲ್ಲದೇ, ಹಿಂದಿ ಭಾಷೆಯ ಅತ್ಯತ್ತಮ ಚಿತ್ರ ಎಂದು ರಾಷ್ಟçಪತಿಗಳ ಬೆಳ್ಳೀ ಪದಕ ಸಿಕ್ಕಿತ್ತು. ಇದೇ ಚಿತ್ರಕ್ಕೆ 1958ರಲ್ಲಿ ಬಿರ್ಲಿನ್ ಅಂತರ್ ರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಓಸಿಐಸಿ ಪ್ರಶಸ್ತಿ ಹಾಗೂ 'ಬೆಳ್ಳಿ ಕರಡಿ' ವಿಶೇಷ ಬಹುಮಾನ ಸಿಕ್ಕಿತು. ಶಾಂತಾರಾಂ ಅವರ ಮರಾಠಿ ಭಾಷೆಯ 'ಮಾನೂಸ್' ಚಿತ್ರವನ್ನು ಚಾರ್ಲಿ ಚಾಪ್ಲಿನ್ ಬಹಳ ಇಷ್ಟಪಟ್ಟಿದ್ದನಂತೆ. 

ಇವರ ಚಿತ್ರಗಳಲ್ಲಿ ಒಂದು ದಿಕ್ಕಿನಿಂದ ಮಾನವತೆಯನ್ನು ಸಾರಿದರೆ, ಇನ್ನೊಂದು ದಿಕ್ಕಿನಿಂದ ಧರ್ಮಾಂಧತೆ ಹಾಗೂ ಅನ್ಯಾಯವನ್ನು ಎತ್ತಿ ತೋರಿಸಿ ಕಟುವಾಗಿ ಟೀಕಿಸುತ್ತಿದ್ದರು. 'ದ ಹೇಜ್' ಚಿತ್ರದಲ್ಲಿ ವರದಕ್ಷಿಣೆ ಪದ್ಧತಿಯ ಕೆಡುಕುಗಳನ್ನು ಇವರು ಚಿತ್ರಿಸಿದ್ದರು. 18.11.1901ರಲ್ಲಿ ಹುಟ್ಟಿದ ಇವರು, ಲಾಂಛನಗಳಿಗೆ ಬಣ್ಣ ತುಂಬುತ್ತಾ, ದ್ವಾರಪಾಲಕನಾಗಿ, ಒಬ್ಬ ಛಾಯಾಗ್ರಾಹಕನಿಗೆ ಸಹಾಯಕನಾಗಿ, ನಂತರ ಕೊಲ್ಲಾಪುರದ ಬಾಬುರಾವ್ ಪೇಂಟರ್ ಅವರ ಮಹಾರಾಷ್ಟ್ರ ಫಿಲಂ ಕಂಪನಿ ಸೇರಿದ. ಇಲ್ಲಿ ನಟನೆಯಿಂದ ನಿರ್ಮಾಣದವರೆಗೆ, ಪ್ರಯೋಗಶಾಲೆ ಸಹಾಯಕನಾಗಿ ಎಲ್ಲ ಕಾರ್ಯ ಮಾಡಿದ. 1921ರಿಂದ ಮೂಕಿ ಚಿತ್ರಗಳಾದ 'ಸುರೇಖಾಹರನ್', 'ಸಿಂಹಗಡ್'ಗಳಲ್ಲಿ ಹಾಗೂ 'ಸಾವಕಾರಿ ಪಾಶ್'ದಲ್ಲಿ ಯುವ ರೈತನಾಗಿ ನಟಿಸಿ, 1927ರಲ್ಲಿ 'ನೇತಾಜಿ ಪಾಲ್ಕರ್' ಎಂಬ ಚಿತ್ರ ಮೊದಲ ಬಾರಿಗೆ ನಿರ್ದೇಶಿಸಿದ ಈ ಯುವಕ. 


1929ರಲ್ಲಿ ಶಾಂತಾರಾಂ, ವಿ.ಜಿ.ದಾಮ್ಲೆ, ಕೆ.ಆರ್.ಥೈಬರ್, ಎಸ್.ಫತೇಲಾಲ್ ಹಾಗೂ ಎಸ್.ಬಿ.ಕುಲಕರ್ಣಿ ಅವರೊಂದಿಗೆ ಪ್ರಭಾತ್ ಫಿಲಂ ಕಂಪನಿ ಆರಂಭಿಸಿದರು. ಹಿಂದಿ, ಮರಾಠಿ ಭಾಷೆಗಳಲ್ಲಿ ಬಂದ 'ಅಮೃತ ಮಂಥನ್', 'ಶಾಂತಿ ಸಾರಿದ ಧರ್ಮ'ದ ಬಗೆಗಿನ ಚಿತ್ರ ಶಾಂತಾರಾಂರನ್ನು ಗಣ್ಯ ನಿರ್ದೇಶಕರ ಸಾಲಿನಲ್ಲಿ ನಿಲ್ಲಿಸಿತು. ಪ್ರಭಾತ್ ಫಿಲಂ ಕಂಪನಿಯಲ್ಲಿ 1929ರಿಂದ 1941ರವರೆಗೆ ಇವರ ನಿರ್ದೇಶನದ ಮುಖ್ಯ ಚಿತ್ರಗಳು. 'ಗೋಪಾಲ ಕೃಷ್ಣ', 'ದುನಿಯಾ ನ ಮಾನೆ' ಹಾಗೂ 'ಕುಂಕು', 'ಮಾನೂಸ್', 'ಆದ್ಮಿ, ಪಡೋಸಿ'. ಮೂರೇ ದಶಕಗಳಲ್ಲಿ ಹಿಂದಿ ಹಾಗೂ ಮರಾಠಿಯಲ್ಲಿ, 40 ಚಲನಚಿತ್ರಗಳು ಇವರಿಂದ ನಿರ್ಮಾಣ ಗೊಂಡವು. 1941ರಲ್ಲಿ ಶಾಂತಾರಾಂ ಪ್ರಭಾತ್ ಬಿಟ್ಟು ತಮ್ಮದೇ ನಿರ್ಮಾಣ ಸಂಸ್ಥೆ ರಾಜಕಮಲ್ ಕಲಾಮಂದಿರ ಆರಂಭಿಸಿದರು. 1943ರಲ್ಲಿ 'ಶಾಕುಂತಲಾ' ಮೊದಲ ಚಿತ್ರ. ಇದು 104 ವಾರ ಓಡಿತು. 'ಡಾ.ಕೋಟ್ನೀಸ್ ಕೀ ಅಮರ್ ಕಹಾನಿ'' (1946), 'ದಹೇಜ್' (1950), 'ಪರ್‌ಛಾಯೇ' (1952) 'ದೋ ಆಂಖೆ ಬಾರಾ ಹಾಥ್' (1957) 'ಸ್ತ್ರೀ ' (1961) ಚಿತ್ರದÀಲ್ಲಿ ಇವರು ನಾಯಕ ನಟನಾಗಿ ಅಭಿನಯಿಸಿದ್ದರು. 'ಸೆಹ್ರಾ', 'ಬೂಂದ್ ಜೋ ಬನ್‌ಗÀಯಿ ಮೋತಿ', 'ಜಲ್ ಬಿನ್ ಮಚಲೀ ನೃತ್ಯ ಬಿನ್ ಬಿಜಲಿ', 'ಪಿಂಜರಾ'. ಇವರ ನಿರ್ದೇಶನ ಹಾಗೂ ನಿರ್ಮಾಣದ ಮುಖ್ಯ ಚಿತ್ರಗಳು. 


1964ರ 'ಗೀತಾ ಗಾಯಾ ಪತ್ಥರೋನೇ' ಚಿತ್ರದಲ್ಲಿ ಮಗಳು ರಾಜಶ್ರೀ ಹಾಗೂ ಜಿತೇಂದ್ರರನ್ನು ಬೆಳ್ಳಿತೆರೆಗೆ ಪರಿಚಯಿಸಿದರು. 1936ರಲ್ಲಿ 'ಅಮರಜ್ಯೋತಿ', 1937ರಲ್ಲಿ 'ದುನಿಯಾ ನ ಮಾನೆ', ಲಿಂಗ ಸಮಾನತೆ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನದ ಬಗೆಗಿನ ವಸ್ತು ಹೊಂದಿದ್ದವು. ಪೌರಾಣಿಕ ಕಥೆಗಳ ಮಧ್ಯದಲ್ಲಿ 1937ರಲ್ಲಿ ಬಿಡುಗಡೆಯಾದ ಸಾಮಾಜಿಕ ಹಂದರದ ಚಿತ್ರ 'ಕುಂಕು' (ಮರಾಠಿಯಲ್ಲಿ) 'ದುನಿಯಾ ನ ಮಾನೆ' (ಹಿಂದಿಯಲ್ಲಿ) ವೆನಿಸ್ ಅಂತರ್ ರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರದರ್ಶಿಸಲ್ಪಟ್ಟಿತು. ಶಾಂತಾ ಅಪ್ಟೆ ಹಾಗೂ ಕೇಶವರಾವ್ ದಾತೆಯ ಉತ್ತಮ ಅಭಿನಯದ ಚಿತ್ರವಿದು. ಹಣಕ್ಕಾಗಿ, ವಯಸ್ಸಾದ ವಿಧುರನಿಗೆ, ಯುವತಿ ನಿರ್ಮಲಾಳನ್ನು ಆಕೆಯ ಪಾಲಕರು ಮದುವೆ ಮಾಡಿಕೊಟ್ಟಾಗ, ಅದರಿಂದ ಕುಟುಂಬ ಹಾಗೂ ನೆರೆ ಹೊರೆಯಲ್ಲಾಗುವ ಪರಿಣಾಮಗಳ ದರ್ಶನ ಈ ಚಿತ್ರ. ತನಗೆ ವಯಸ್ಸಾಗಿಲ್ಲ, ತಾನು ಶಕ್ತಿವಂತ ಗಂಡಸು ಎಂಬ ಭ್ರಮೆಯಲ್ಲಿದ್ದ ಗಂಡ, ನಿರ್ಮಲಾಳ ಮನಸ್ಸಿನ ವಿರುದ್ಧ ಆಕೆಯನ್ನು ವಿವಾಹವಾದರೂ, ಆಕೆಯ ಸ್ಥಿತಿ ದಿನೇ ದಿನೇ ಗಮನಿಸಿ, ಕೊನೆಗೆ ಪಶ್ಚಾತ್ತಾಪದಿಂದ ಗಂಡ ಆತ್ಮಹತ್ಯೆ ಮಾಡಿಕೊಂಡು, ಆಕೆಯನ್ನು ಅವಳ ದಾರಿಗೆ ಹೋಗಲು ಮುಕ್ತ ಅವಕಾಶ ಮಾಡಿಕೊಡುವ ಅಂದಿನ ಕಾಲದ ಕ್ರಾಂತಿಕಾರಕ ಚಿತ್ರವಿದು. 


1941ರ ಪಡೋಸಿ ಸಮುದಾಯ ಕ್ಷೋಭೆಯಿಂದ ಅಕ್ಕಪಕ್ಕದವರ ಸ್ನೇಹದ ಮೇಲಾಗುವ ಪರಿಣಾಮ ಚಿತ್ರಿಸಿತು. 1946ರಲ್ಲಿ 'ಡಾ.ಕೋಟ್ನೀಸ್ ಕೀ ಅಮರ್ ಕಹಾನಿ' ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಚಿತ್ರೀಕರಣವಾಯಿತು. ಚೀನಾ-ಜಪಾನ್ ಯುದ್ಧದ ಕಾಲದಲ್ಲಿ, ಚೀನಾಕ್ಕೆ ನೆರವಿಗೆ ಧಾವಿಸಿ ಅಲ್ಲಿಯ ರೋಗಿಗಳು ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ಮಾಡಿದ ವೈದ್ಯಕೀಯ ತಂಡದ ಮುಖ್ಯಸ್ಥ ದ್ವಾರಕಾನಾಥ್ ಕೋಟ್ನೀಸ್ ಅವರ ನೈಜ ಜೀವನ ಕಥೆ ಆಧರಿಸಿದ ಈ ಚಿತ್ರದಲ್ಲಿ, ಶಾಂತಾರಾಂ ಕೋಟ್ನೀಸ್ ಪಾತ್ರದಲ್ಲಿ, ಜಯಶ್ರೀ ನರ್ಸ್ ಪಾತ್ರದಲ್ಲಿ. 1953ರ ಚಿತ್ರ 'ತೀನ್‌ಬತ್ತಿ ಚಾರ್‌ರಾಸ್ತಾ' ರಾಷ್ಟ್ರೀಯ ಭಾವೈಕ್ಯತೆ ಬಗೆಗಿತ್ತು. ಕುಟುಂಬದ ಯಜಮಾನ 'ಲಾಲಾ ಗುಲಾಬಚಂದ್' ಪಂಜಾಬಿ, ಹೆಂಡತಿ ಉತ್ತರ ಪ್ರದೇಶದವಳು. ಇವರಿಗೆ 6 ಗಂಡು ಮಕ್ಕಳು. 5 ಸೊಸೆಯರು 5 ರಾಜ್ಯಗಳ 5 ಭಾಷೆ ಮಾತನಾಡುವವರು. ಕಪ್ಪು ಬಣ್ಣದ ಸುಂದರ ಕಂಠದ ಕೋಕಿಲಾ ರೇಡಿಯೋ ಗಾಯಕಿ. ಧ್ವನಿ ಕೇಳಿ ಮೋಹಿಸಿದ 6ನೇ ಮಗ. ಆಕೆ ಆ ಮನೆಯ ಎಲ್ಲರಿಗೂ ಅಚ್ಚುಮೆಚ್ಚಾಗುತ್ತಾಳೆ. ಆಕೆಯ ಬಣ್ಣದಿಂದ ಆಕೆಯನ್ನು ತಿರಸ್ಕರಿಸಿದವನು, ಮತ್ತೆ ಆಕೆಯ ಗುಣದಿಂದ, ಆಕೆಯನ್ನೇ ಸ್ವೀಕರಿಸುವ ಸಾಮಾಜಿಕ ಹಾಸ್ಯ ಚಿತ್ರ ಇದಾಗಿತ್ತು. 


1972ರ ಪಿಂಜರಾ, ತಮಾಶಾ ನೃತ್ಯಗಾತಿಯನ್ನು ಸುಧಾರಿಸಲು ಹೋಗಿ, ತಾನೇ ಆಕೆಯ ಪ್ರೇಮಪಾಶದಲ್ಲಿ ಬಿದ್ದು ಹಾಳಾಗುವ, ಮೌಲ್ಯಗಳ ಶಾಲಾ ಮಾಸ್ತರನ ಕಥೆ. ಡಾ. ಶ್ರೀರಾಮ್ ಲಾಗೂ ಹಾಗೂ ಸಂಧ್ಯಾ ನಟಿಸಿದ್ದ ಚಿತ್ರದ, ಜನಪ್ರಿಯ ಗೀತೆಗಳ ಸಂಗೀತ ರಾಮ ಕದಂ ಅವರದಾಗಿತ್ತು. 1955ರ 'ಝನಕ ಝನಕ ಪಾಯಲ್ ಬಾಜೆ ಟೆಕ್ನಿ' ಕಲರ್ ಚಿತ್ರ. ಗೋಪಿಕೃಷ್ಣ ಹಾಗೂ ಸಂಧ್ಯಾ ಅಭಿನಯದ ನೃತ್ಯ ಹಾಗೂ ನೈಜ ಪ್ರೇಮ ತ್ಯಾಗಗಳ ಕಥೆ. 'ಝಣಕ ಝಣಕ ಪಾಯಲ್ ಬಾಜೆ' ಚಿತ್ತಕ್ಕೆ 1957ರ ಫಿಲಂಫೇರ್ ಪ್ರಶಸ್ತಿ ಸಿಕ್ಕಿತು. 1957ರ ಇವರ 'ದೋ ಆಂಖೆ ಬಾರಾ ಹಾಥ್' ಚಿತ್ರ ಬರ್ಲಿನ್ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಬೆಳ್ಳಿ ಕರಡಿ ಪ್ರಶಸ್ತಿ ಸಂಪಾದಿಸಿತು. ಲತಾ ಮಂಗೇಶ್‌ಕರ್ ಹಾಡಿರುವ ಐ ಮಾಲಿಕ್ ತೇರೇ ಬಂದೆ ಹಮ್ ಗೀತೆ ಈ ಚಿತ್ರದ್ದು. ರಾಜರ ಆಡಳಿತದ ಸತಾರಾ ಬಳಿಯ ಔಂದ್‌ನ ಸ್ವಾತಂತ್ರ್ಯಪುರದಲ್ಲಿ ನಡೆದ ಬಯಲು ಬಂಧಿ ಗೃಹ ಪ್ರಯೋಗ ಆಧರಿಸಿ, ಜಿ.ಡಿ.ಮಾಡಗೂಲಕರ್ ಅವರು ಬರೆದ ಕಥೆ, ಚಿತ್ರನಾಟಕ, ಸಂಭಾಷಣೆ ಹೊಂದಿದ ಚಿತ್ರದಲ್ಲಿ, ಆದಿನಾಥ್ ಎಂಬ ಜೈಲರ್ ಪಾತ್ರದಲ್ಲಿ ಸ್ವತಃ ಶಾಂತಾರಾಂ ಅಭಿನಯಿಸಿದ್ದರು. 


ಭಯಂಕರ ಅಪರಾಧ ಹಾಗೂ ಕೊಲೆ ಕೃತ್ಯಗಳಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಜೈಲಿನಲ್ಲಿದ್ದ 6 ಕೈದಿಗಳನ್ನು, ಜೈಲರ್ ಮುಕ್ತ ಪ್ರದೇಶಕ್ಕೆ ಒಯ್ದು, ಅವರಿಗೆ ಸನ್ನಡತೆ, ಜವಾಬ್ದಾರಿ ಕಲಿಸುವ, ಅವರನ್ನು ಉತ್ತಮ ರೈತರನ್ನಾಗಿ ಪರಿವರ್ತಿಸುವ, ಪ್ರಯತ್ನದ ಅಪೂರ್ವ ಕಥೆ ಈ ಚಿತ್ರದ್ದು. ಇವರು ಪರಿವರ್ತನೆ ಆಗುವ ಹಾದಿಯಲ್ಲಿ, ರೈತರಾಗಿ ತರಕಾರಿ ಬೆಳೆದಾಗ, ಅವುಗಳನ್ನು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮಾರಿದಾಗ, ಆಸೆಬುರುಕ ವ್ಯಾಪಾರಿಗಳು ಅಟ್ಟಿದ ಗೂಳಿ, ಇವರ ಬೆಳೆ ಹಾಳು ಮಾಡಲು ಬಂದಾಗ, ನಾಯಕ ಅದನ್ನು ಓಡಿಸಲು ಹೋರಾಡಿದನು. ಗೂಳಿಯ ಕೊಂಬು ಆತನನ್ನು ಇರಿದು ಕೊಲ್ಲುತ್ತದೆ. ಅಷ್ಟರೊಳಗೆ ಪರಿವರ್ತನೆಯಾಗಿದ್ದ 6 ಕೈದಿಗಳ 12 ಕೈಗಳು, ನಾಯಕನ ಶವದ ಮುಂದೆ ಜೋಡಿಸಲ್ಪಟ್ಟಾಗ, ಇವರಿಗೆ ಮಾರ್ಗದರ್ಶನ ಮಾಡಿದ ನಾಯಕನ 2 ಕಣ್ಣುಗಳು, ಅವರಿಗೆ ಇನ್ನು ದಾರಿದೀಪ ಎಂಬ ಭಾವನೆ, ಜಾಗೃತಿಯಾದ ಕಥೆ ಈ ಚಿತ್ರದ್ದು. 


ಇವರಿಗೆ 1985ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 1992ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಒಲಿದು ಬಂದವು. 17-11-2001ರಲ್ಲಿ ಇವರ ಸ್ಮರಣೆಯಲ್ಲಿ ಭಾರತೀಯ ಅಂಚೆ ಒಂದು ಸ್ಟಾಂಪ್ ಬಿಡುಗಡೆ ಮಾಡಿದೆ. ಕೇಂದ್ರ ಹಾಗೂ ಮಹಾರಾಷ್ರ ರಾಜ್ಯ ಸರಕಾರಗಳು ಇವರ ಹೆಸರಿನಲ್ಲಿ ವಿ. ಶಾಂತಾರಾಂ ಪ್ರಶಸ್ತಿ ನೀಡುತ್ತಿದೆ. ವಿ.ಶಾಂತಾರಾಂ ಮೋಷನ್ ಪಿಕ್ಚರ್ ವೈಜ್ಞಾನಿಕ ಸಂಶೋಧನೆ ಹಾಗೂ ಸಾಂಸ್ಕೃತಿಕ ಫೌಂಡೇಶನ್ 1993ರಲ್ಲಿ ಸ್ಥಾಪಿಸಲ್ಪಟ್ಟಿದ್ದು, ಚಲನಚಿತ್ರ ಮಾಡುವವರಿಗೆ ವಿವಿಧ ಪ್ರಶಸ್ತಿಗಳನ್ನು, ಪ್ರತೀ ವರ್ಷ ನವೆಂಬರ್-18ರಂದು ನೀಡುತ್ತಿದೆ. ಶಾಂತಾರಾಂ 30.10.1990 ರಂದು ಮುಂಬಯಿಯಲ್ಲಿ ಆ ಕಲಾ ಸರಸ್ವತಿಯ ಪಾದಗಳನ್ನು ಸೇರಿದರು.


إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top