ಶೇಷಾದ್ರಿಪುರಂ ರಾಯರ ಮಠದಲ್ಲಿ ಆರಾಧನಾ ಪಂಚರಾತ್ರೋತ್ಸವ- ಆ.19ರಿಂದ 23ರ ವರೆಗೆ

Upayuktha
0


ಬೆಂಗಳೂರು: ಬೆಂಗಳೂರು: ಶೇಷಾದ್ರಿಪುರ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ ಆರಾಧನಾ "ಪಂಚರಾತ್ರೋತ್ಸವ" ಸಮಾರಂಭ ಆಗಸ್ಟ್ 19 ರಿಂದ 23ರ ವರೆಗೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮತ್ತು ಶ್ರೀ ಸುಶಮೀಂದ್ರತೀರ್ಥರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಶ್ರೀ ಪ್ರಹ್ಲಾದರಾಜರ ಪಾದಪೂಜೆ, ಕನಕಾಭಿಷೇಕ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 7-00ಕ್ಕೆ) : ಆಗಸ್ಟ್ 20, ಮಂಗಳವಾರ : ಗಾನ ಸುಧಾ ಸಂಗೀತ ಶಾಲೆಯ ವಿದ್ಯಾರ್ಥಿನಿಯರಾದ ಕು|| ಮನಸ್ವಿ ಕಶ್ಯಪ್, ಕು|| ದೀಪ್ತಿ ಮೋಹನ್, ಕು|| ಅನನ್ಯ ಬೆಳವಾಡಿ, ಕು|| ದೀಪ್ತಿ ಶ್ರೀನಿವಾಸನ್, ಮತ್ತು ಕು|| ಸಂಜನಾ ಇವರುಗಳಿಂದ "ದಾಸ ಗಾನ ವೈಭವ" ವಾದ್ಯ ಸಹಕಾರ : ಶ್ರೀ ಟಿ.ಎಸ್. ರಮೇಶ್ (ಕೀ-ಬೋರ್ಡ್), ಶ್ರೀ ಎಸ್ . ಮೋಹನ್ (ತಬಲಾ). ನಿರ್ದೇಶನ : ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್.


ಆಗಸ್ಟ್ 21, ಬುಧವಾರ : ವಿದ್ವಾನ್ ಶ್ರೀರಾಮ ಐಯ್ಯಂಗಾರ್ ಇವರಿಂದ "ವೀಣಾ ವಾದನ". ಸಹ-ವಾದ್ಯ : ಶ್ರೀ ಎಸ್. ಕಾರ್ತಿಕ್ (ಮೃದಂಗ),  ಶ್ರೀ ಫಣೀಂದ್ರ (ಘಟ). ಆಗಸ್ಟ್ 22, ಗುರುವಾರ : ಸಮನ್ವಯ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಂದ "ಭರತನಾಟ್ಯ". ನಿರ್ದೇಶನ :  ವಿದುಷಿ ಶ್ರೀಮತಿ ಭಾವನಾ ಉದಯಕಾಂತ್. ಆಗಸ್ಟ್ 23, ಶುಕ್ರವಾರ : ಪ್ರಣವಾಂಜಲಿ ಅಕಾಡೆಮಿ ಫಾರ್ ಪಫಾ೯ಮಿಂಗ್ ಆಟ್ಸ್೯ ಮತ್ತು ತಮೋಹ ಆರ್ಟ್ಸ್ ಫೌಂಡೇಶನ್ ಸಂಸ್ಥೆಗಳ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ". ನಿರ್ದೇಶನ : ಶ್ರೀಮತಿ  ಗಾಯತ್ರಿ ಮಯ್ಯ ಮತ್ತು ವಿದುಷಿ ಶ್ರೀಮತಿ ಪವಿತ್ರ ಪ್ರಶಾಂತ್.


ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸುಬ್ಬನರಸಿಂಹ (ಸುಬ್ಬಣ್ಣ) ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಚೇತನ್ ಅವರು ವಿನಂತಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 






Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top