ನೀರಾವರಿ ಪಂಪ್‌ಸೆಟ್ ಆರ್.ಆರ್ ನಂಬರ್‌ಗೆ ಆಧಾರ್ ಲಿಂಕ್ ಮಾಡಿಸಲು ಸೂಚನೆ

Upayuktha
0




ಸಂಡೂರು:
ತಾಲೂಕಿನ ಎಲ್ಲ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ನೀರಾವರಿ ಪಂಪ್ (ಐ.ಪಿ) ಸೆಟ್ ನ ಆರ್.ಆರ್ ನಂಬರ್‌ಗೆ ಕಡ್ಡಾಯವಾಗಿ ಲಿಂಕ್ ಮಾಡುವಂತೆ ಜೆಸ್ಕಾಂ ಸಂಡೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಜೆಸ್ಕಾಂನ ಸಂಡೂರು ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಉಮೇಶ್ ಕುಮಾರ್, ಎಸ್ಕಾಂಗಳು ಐಪಿ ಸೆಟ್‌ಗಳ ಆರ್.ಆರ್. ನಂಬರ್‌ ಗಳನ್ನು ಗ್ರಾಹಕರ ಆಧಾರ್  ಸಂಖ್ಯೆಗಳೊಂದಿಗೆ ಲಿಂಕ್ ಮಾಡಬೇಕು.

ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್  ಮಾಡದ ಆರ್.ಆರ್. ನಂಬರ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರವು ಸಬ್ಸಿಡಿ ಬಿಡುಗಡೆ ಮಾಡುವುದಿಲ್ಲ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶ ಹೊರಡಿಸಿದೆ. ಆದ್ದರಿಂದ ಸಂಡೂರು ತಾಲೂಕಿನ ಎಲ್ಲಾ ರೈತರು ಹತ್ತಿರದ ಲೈನ್‌ಮ್ಯಾನ್, ಮೀಟರ್ ರೀಡರ್, ಎಲ್ಲಾ ಶಾಖಾಧಿಕಾರಿಗಳು ಅಥವಾ ಉಪ-ವಿಭಾಗ ಕಚೇರಿ ಕಾರ್ಯ ಮತ್ತು ಪಾಲನೆ ಉಪ-ವಿಭಾಗ ಜೆಸ್ಕಾಂ ಸಂಡೂರು ಅವರನ್ನು ಸಂಪರ್ಕಿಸಿ ಆಧಾರ್ ಸಂಖ್ಯೆಯನ್ನು ಐಪಿ ಸೆಟ್ ಆರ್. ಆರ್. ನಂಬರಿಗೆ ಲಿಂಕ್ ಮಾಡಿಕೊಳ್ಳುವಂತೆ ಕೊರಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors
Mandovi Motors
To Top