ಎಡಪದವು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ರೈತ ಮೋರ್ಚಾ ಇದರ ಆಶ್ರಯದಲ್ಲಿ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲ ಇದರ ಸಹಭಾಗಿತ್ವದಲ್ಲಿ ವನ ಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಗೋಳಿದಡಿ, ಎಡಪದವು ಇಲ್ಲಿ ಜರಗಿತು.
ಶಾಸಕರಾದ ಡಾ॥ ಭರತ್ ಶೆಟ್ಟಿ ವೈ., ಉದ್ಘಾಟಿಸಿ ಪರಿಸರ ಸಹ್ಯ ವಾತಾವರಣವಿದ್ದಾಗ ಜನರು ಆರೋಗ್ಯಪೂರ್ಣವಾಗಿ ಬಾಳಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಸ್ವಚ್ಚ, ಹಸಿರು, ಶುದ್ದ ಗಾಳಿಯನ್ನು ಹೊಂದುವಂತಾಗಲು ಈ ಮೂಲಕ ಪರಿಸರ ಉಳಿಸಲು ಪ್ರತಿಜ್ಞೆ ತೊಡಬೇಕೆಂದರು. ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಡಪದವು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಮಾರ್ಗದರ್ಶಕರಾದ ಮುರಳೀಧರ ಶೆಟ್ಟಿ, ಸುಕೇಶ್ ಮಾಣ್ಯಾ ತಲಕಳ ಕೊಳಂಬೆ, ಅಧ್ಯಕ್ಷರು- ರೈತ ಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಶೋಧನ್ ಅದ್ಯಪಾಡಿ, ಮಹಾಬಲ ಪೂಜಾರಿ, ಮಂಡಲ ಉಪಾಧ್ಯಕ್ಷ ಸೋಹನ್ ಅತಿಕಾರಿ, ಪಂಚಾಯತ್ ಅಧ್ಯಕ್ಷರುಗಳಾದ ಅನುಸೂಯ ಭಂಡಾರಿ, ಪ್ರವೀಣ್ ಆಳ್ವ, ಶಾಲಿನಿ ಕಂದಾವರ, ನಾರಾಯಣ ಪೂಜಾರಿ ಮುಚ್ಚೂರು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುಕುಮಾರ್ ಎಡಪದವು, ಸೋಹನ್ ಆಳ್ವ ಮಲ್ಲೂರು, ಬಿಜೆಪಿ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಮತ್ತಿತರರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ