ಬೆಳ್ತಂಗಡಿ: ಹಾಲಿನ ದರ ಏರಿಕೆ ಹಿಂಪಡೆಯಲು, ರೈತರಿಗೆ ಪ್ರೋತ್ಸಾಹಧನಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Upayuktha
0


ಬೆಳ್ತಂಗಡಿ: ಜಿಲ್ಲಾ ಭಾರತೀಯ ಜನತಾ ಪಾರ್ಟಿ ಮತ್ತು ಜಿಲ್ಲಾ ರೈತ ಮೋರ್ಚಾದ ನೇತೃತ್ವದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಾ ಸಭೆ ಇಂದು (ಜು.2) ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಯಿತು. ಬಳಿಕ ರಾಜ್ಯ ಸರ್ಕಾರಕ್ಕೆ ಹಾಲಿನ ದರ ಏರಿಕೆಯನ್ನು ಹಿಂಪಡೆಯಲು ಹಾಗೂ ರೈತರಿಗೆ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆಗೆ ಗೊಳಿಸುವಂತೆ ಉಪತಹಶೀಲ್ದಾರ್ ರವಿಕುಮಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.


ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಅವರು ವಿರೋಧ ಪಕ್ಷದ ನಾಯಕನಾಗಿ ಕಂಳಕ ತರುವ ಕೆಲಸ ಮಾಡಿದ್ದಾರೆ ಹಿಂದೂ ಸಮಾಜಕ್ಕೆ ಕ್ಷಮೆಯಾಚಿಸಬೇಕು. ಕಾಂಗ್ರೆಸ್ ಅಪನಂಬಿಕೆಯ ಸರಕಾರ. ಕಾಂಗ್ರೆಸಿನ ಶಾಸಕರು, ಮಂತ್ರಿಗಳು ಸಿಎಂ ಅಥವಾ ಡಿಸಿಎಂ ಅವರಲ್ಲಿ ಯಾರನ್ನು ನಂಬೇಕು ಎನ್ನುವ ಪರಿಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್ ಸರಕಾರ ನಂಬಿಕೆ ಇಲ್ಲದ ಸರ್ಕಾರ. ದೇಶದಲ್ಲಿಯೇ ರೈತರಿಗೆ ಬಜೆಟ್ ಮಂಡಿಸಿದ ಸಿಎಂ ಬಿಜೆಪಿಯ ಬಿ.ಎಸ್. ಯಡಿಯೂರಪ್ಪನವರು. ಹಾಲಿನ ದರ ಏರಿಸಿ ಮಕ್ಕಳ ಹೊಟ್ಟೆಗೆ ಬದಿಯುವ ಕಾರ್ಯವನ್ನು ಮಕ್ಕಳ ವಿರೋಧಿ ರಾಜ್ಯ ಕಾಂಗ್ರೆಸ್ ಸರಕಾರ ಮಾಡಿದೆ. ಜನನ-ಮರಣ ಪತ್ರಕ್ಕೂ ಬೆಲೆ ಏರಿಸಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳ ಭಾಗಗಕ್ಕೆ ಅನುದಾನ ನೀಡದೆ ಕತ್ತಲು ಅವರಿಸಿದೆ. ಪಂಚ ಗ್ಯಾರಂಟಿಯ ಯೋಜನೆಯಲ್ಲಿ ಕಮಿಷನ್ ಪಡೆಯುತ್ತಿದ್ದಾರೆ, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಹೊರ ಬೀಳುತ್ತಿದೆ ಎಂದರು.


ಶಾಸಕ ಹರೀಶ್ ಪೂಂಜ ಮಾತನಾಡಿ, ಸಿದ್ದರಾಮಯ್ಯನವರು ಸರಕಾರ ತೆರಿಗೆ ಹೆಚ್ಚಿಸುವ ಮೂಲಕ ಜನತೆಗೆ ಬರೆ ಎಳೆದಿದೆ. ಹಾಲಿನ ಮೇಲೆ 2 ರೂಪಾಯಿ ದರ ಏರಿಕೆ ಮಾಡಿ, ಜನ ಸಾಮಾನ್ಯರ ಜೀವನವನ್ನು ದುಸ್ತಿರ ಮಾಡಿರುವುದು ಖಂಡನೀಯ. ಮಾಜಿ ಸಿಎಂ ಬೊಮ್ಮಾಯಿ ಸರಕಾರ ರೈತರ ಮಕ್ಕಳಿಗೆ ರೈತನಿಧಿ ಯೋಜನೆ ರೂಪಿಸಿ ರೈತರು ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ನಡೆಸುವ ಆಕಾಂಕ್ಷೆ ಹೊಂದಿದ್ದರು. ಆದರೆ ರೈತರ ಶಕ್ತಿಯಾಗಿದ್ದ ರೈತನಿಧಿಯನ್ನು ತೆಗೆದು ಹಾಕಿದರು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರಕಾರ 4 ಸಾವಿರ ರೂಪಾಯಿ ರೈತರಿಗೆ ನೀಡಿದನ್ನು ಹಿಂಪಡೆದಿದೆ. ಭೂಸಿರಿ ಯೋಜನೆಯನ್ನು ಕೂಡ ಹಿಂಪಡೆದಿದೆ. ಇಂಧನ ಬೆಲೆ ಏರಿಕೆ ಮಾಡಿದೆ. ಜಿಲ್ಲೆಯಲ್ಲಿ ಅಧಿಕ ಹಾಲು ಸಂಗ್ರಹಣೆಯಾಗುದು ಬೆಳ್ತಂಗಡಿ ತಾಲೂಕಿನಲ್ಲಿ. ರೈತರಿಗೆ ಹಾಲಿನ ದರವನ್ನು ಏರಿಸುವ ಕೆಲಸ ರಾಜ್ಯ ಸರಕಾರ ಮಾಡಬೇಕು. ಕೃಷಿ ಇಲಾಖೆ, ತೋಟಗಾರಿಕ ಇಲಾಖೆಯಲ್ಲಿ ಸಿಗುವ ಸವಲತ್ತುಗಳನ್ನು ರದ್ದುಗೊಳಿಸಿ, ಕೃಷಿಕರ ಬುದುಕಿ ಕೊಲ್ಲಿ ಇಡುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಜಗತ್ತಿನ ಶ್ರೇಷ್ಠ ಧರ್ಮ ಹಿಂದೂ ಧರ್ಮದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದಕ್ಕೆ ಧಿಕ್ಕಾರ, ಅವರು ಕ್ಷಮೆ ಕೇಳಬೇಕು. ಮುಖ್ಯಂತ್ರಿ ಸಿದ್ದರಾಮಯ್ಯನವರು ಅವರ ಹೇಳಿಕೆಯನ್ನು ಸರ್ಮಥಿಸಿಕೊಂಡವರು. ಅಧಿಕಾರಕ್ಕೋಸ್ಕರ ಮುಸಿಲ್ಮಾನರ ಟೋಪಿ ಹಾಕುತ್ತಾರೆ, ಟಿಪ್ಪು ಖಡ್ಗ ಹಿಡಿಯುತ್ತಾರೆ ಎಂದು ಹೇಳಿದರು.


ಜಿಲ್ಲಾ ರೈತಮೋರ್ಚಾದ ಅಧ್ಯಕ್ಷ ಗಣೇಶ್ ನಾವೂರ ಪ್ರಾಸ್ತವಿಕವಾಗಿ ಮಾತನಾಡಿ, ಗ್ಯಾರಂಟಿ ಯೋಜನೆ ಮೂಲಕ ಅಧಿಕಾರಕ್ಕೆ ಬಂದ ಸರಕಾರ ಬೆಲೆ ಏರಿಕೆ ಮಾಡವ ಮೂಲಕ ರೈತಾಪಿ ವರ್ಗವನ್ನು ಪಾತಳಕ್ಕೆ ಕೊಂಡುಯ್ಯೂವ ಕೆಲಸ ಮಾಡುತ್ತಿದೆ. ಜಿಲ್ಲೆಯ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರೆಮಾನಂದ ಶೆಟ್ಟಿ, ಮಹಿಳಾ ಮೋರ್ಚಾದ ಮಂಜುಳಾ ರಾವ್, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಮುಖರಾದ ಗಣೇಶ್ ಪುತ್ರನ್, ಚೆನ್ನಪ್ಪ ಕೋಟ್ಯಾನ್, ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕುಶಲಾಪ್ಪ ಗೌಡ ಪೂವಾಜೆ, ಬಿಜೆಪಿ ಕಿಯೋನಿಕ್ಸ್ ಹರಿಕೃಷ್ಣ ಬಂಟ್ವಾಳ, ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಸೀತಾರಾಮ್, ಬೆಳ್ತಂಗಡಿ ಮಂಡಲ ರೈತಮೋರ್ಚಾ ಅಧ್ಯಕ್ಷ ವಿಜಯ ಗೌಡ ವೇಣೂರು, ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ, ಪ್ರಶಾಂತ್ ಪಾರೆಂಕಿ, ಯೋಗೀಶ್ ಗೌಡ ಆಳಂಬಿಲ ಕೊಕ್ಕಡ, ದಿನೇಶ್ ಚಾರ್ಮಾಡಿ, ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಮುಂಡಾಜೆ, ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಶಶಿಧರ್ ಕಲ್ಮಂಜ, ಜಿಲ್ಲೆಯ ಪ್ರಮುಖರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದರು.


ಪ್ರತಿಭಟನಾಕಾರರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಗ್ಯಾಸ್ ಮೂಲಕ ಬಿಜಿಪಿ ಕಾರ್ಯಕರ್ತೆಯರು ಕಣ್ಣ ಚಹಾ (ಹಾಲು ಹಾಕದ ಚಹಾ) ಮಾಡಿದರು. ಸತೀಶ್ ಕುಂಪಲ, ಹರೀಶ್ ಪೂಂಜ ಹಾಗೂ ಹರಿಕೃಷ್ಣ ಬಂಟ್ವಾಳ ಅವರು ಈ ಚಹಾ ಕುಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top