ವನಿತಾ ಕಥನ -7: ಪಾಂಡವರ ಮಾತೆ "ಕುಂತಿ" (ಭಾಗ-2)

Upayuktha
0


ಮುಂದುವರೆದ ಭಾಗ


ಕೌರವರ ಅನ್ಯಾಯ ಅತ್ಯಾಚಾರ ಧೃತರಾಷ್ಟ್ರ ಗಾಂಧಾರಿಯರ ಮೌನ, ಭೀಷ್ಮರ ಅಸಹಾಯಕತೆಯ ನಡುವೆ ತನ್ನ ಕುರುಕುಲದ ಸೊಸೆಯ ಧರ್ಮವನ್ನು ಬಿಡದೇ ಮಕ್ಕಳಿಗೆ ದೂರವೇ ಇದ್ದು ಆಶೀರ್ವದಿಸಿದ ಧರ್ಮ ನಿಷ್ಠೆಯ ಮಹಾನ್‌ ಸಾಧ್ವಿ ಕುಂತಿಯಾಗಿದ್ದಾಳೆ. ಕ್ಷತ್ರಿಯ ಗುಣ ದರ್ಮದ ಶಿಕ್ಷಣವನ್ನು ಮಕ್ಕಳಿಗೆ ಕೊಟ್ಟ ಕುಂತಿದೇವಿ ತಮ್ಮ ಅಧಿಕಾರಕ್ಕಾಗಿ ಹೋರಾಡಲು ಪ್ರೇರೇಪಿಸಿ ತಾಯಿಯ ಕರ್ತವ್ಯವನ್ನು ವನವಾಸದಲ್ಲಿ ಅರಮನೆಯಲ್ಲಿಯೇ ಇದ್ದು ಹಿರಿಯರ ಸೇವೆ ಮಾಡಿ ತನ್ನ ಕರ್ತವ್ಯವನ್ನು ನಿರ್ವಹಿಸಿ ಆದರ್ಶಳಾದ ಮಹಿಳೆಯಾಗಿದ್ದಾಳೆ. ಕುಂತಿದೇವಿ ಕೃಷ್ಣನ ಬಳಿಯಲ್ಲಿ ಕುಂತಿ ದೇವಿ ನನಗೆ ಕಷ್ಟಗಳನ್ನು ಕೊಟ್ಟು ನನ್ನ ಜೊತೆಯಲ್ಲಿ ನೀನು ನಿಂತರು ಎಂಬ ಪ್ರಾರ್ಥನೆಯನ್ನು ಮಾಡುತ್ತಾಳೆ. ಕುಂತಿ ಕೃತ ಶ್ರೀಕೃಷ್ಣ ಸೋತ್ರ ಇಂದಿಗೂ ಪ್ರಸಿದ್ಧವಾಗಿದೆ. ಇದು ಅವಳ ಪಾತ್ರದ ದೊಡ್ಡ ಸಂದೇಶ ನಮ್ಮೆಲ್ಲರಿಗೂ ಅನುಸರಿಸುವ ಮಾತಾಗಿದೆ. ಈ ಮಾತಿನಲ್ಲಿ ಎರಡು ಅರ್ಥ ಬರುತ್ತದೆ. ಭಗವಂತ ಜೊತೆಗೆ ಇದ್ದರೆ ಏನ್ನನ್ನು ಬೇಕಾದರೂ ಸಾಧಿಸಬಹುದು ಎಂಬ ಆತ್ಮಸ್ಥೈರ್ಯ ಹಾಗೂ ಭಗವಂತನ ಆಶೀರ್ವಾದ ದೊರೆಯ ಬೇಕಾದರೆ ನಾವು ಧರ್ಮದಿಂದ ಇದ್ದರೆ ಮಾತ್ರ ಅವ ಕೈ ಬಿಡಲಾರ ಎಂಬ ಸಂದೇಶವನ್ನು ಕುಂತಿದೇವಿ ತನ್ನ ಜೀವನದಿಂದ ನಮಗೆ ತೋರಿಸಿದ್ದಾಳೆ.


ಕರ್ಣನ ವಿಷಯದಲ್ಲಿ ಕುಂತಿ ದೇವಿ ನಮಗೆ ಕೆಟ್ಟವಳು ಅನಿಸಿದರೂ ಕೂಡ ಅವಲ ಮಾತೃ ಹೃದಯ ಅವನ ಏಳಿಗೆಯನ್ನೇ ಬಯಸುತ್ತದೆ. ಅವಳು ಕೃಷ್ಣ ಹೇಳಿದನೆಂದು ಯುದ್ಧಕ್ಕೆ ಮೊದಲು ಕರ್ಣನ ಬಳಿ ಹೋಗಿ ತೊಟ್ಟ ಬಾಣ ತೊಡಬಾರದು ಎಂದು ಕೇಳುವ ಮೊದಲು ನೀನು ಪಾಂಡವರ ಅಣ್ಣ ನೀನು ನಮ್ಮ ಪಕ್ಷಕ್ಕೆ ಬಾ ನಿನ್ನನ್ನೇ ರಾಜನ್ನಾಗಿ ಮಾಡುವೆ ಎಂದೂ ಕೇಳುತ್ತಾಳೆ. ಆದರೆ ತನ್ನದೇ ಕಾರಣದಿಂದ ಕರ್ಣನು ಅದಕ್ಕೆ ಒಪ್ಪುವುದಿಲ್ಲ. ನಂತರ ಅವಳು ತೊಟ್ಟ ಬಾಣ ತೊಡಬಾರದು ಹಾಗೂ ರಣಭೂಮಿಯಲ್ಲಿ ಅರ್ಜುನನ್ನು ಬಿಟ್ಟು ಬೇರೆ ಯಾರನ್ನೂ ವಧಿಸಬಾರದೆಂಬ ಮಾತನ್ನು ತೆಗೆದುಕೊಳ್ಳುತ್ತಾಳೆ.

ಈ ವಿಚಾರದಲ್ಲಿ ಕೂಡ ಜನರ ಕಣ್ಣಿಗೆ ಕುಂತಿಯ ಸ್ವಾರ್ಥ ಎನಿಸಿದರೂ ಕುಂತಿ ಅವನನ್ನು ತಾಯಿಯ ಪ್ರೀತಿಯಿಂದಲೇ ಕರೆದಾಗಲೂ ಅವನು ತಾನು ಕೊಟ್ಟ ಮಾತು ಹಾಗೂ ಸ್ನೇಹದ ಋಣವನ್ನು ಹೆಚ್ಚು ಎಂದು ತಾಯಿಯ ಆಶೀರ್ವಾದವನ್ನು ತಿರಸ್ಕರಿಸುತ್ತಾನೆ. ಇನ್ನು ಮಹಾಭಾರತದ ಯುದ್ಧ ಮುಗಿದ ಮೇಲೆ ಧರ್ಮರಾಜನಿಗೆ ಕರ್ಣ ಅಣ್ಣನೆಂಬ ಸತ್ಯದ ಅರಿವಾಗಿ ಹೆಣ್ಣು ಮಕ್ಕಳ ಬಾಯಿಯಲ್ಲಿ ಗುಟ್ಟು ನಿಲ್ಲದಿರಲಿ ಎಂಬ ಶಾಪವನ್ನು ಕೂಡ ಕೊಡುತ್ತಾನೆ.


ಮಹಾಭಾರತದ ಯುದ್ಧ ಸಮಾಪ್ತವಾದ ನಂತರ ಮಕ್ಕಳಿಗೆ ರಾಜ್ಯಭಾರ ಸಿಕ್ಕಾಗಲೂ ಕೂಡ ಕುಂತಿ ದೇವಿ ತನಗಿಂತ ಹಿರಿಯರಾದ ಧೃತರಾಷ್ಟ್ರ ಮತ್ತು ಗಾಂಧಾರಿಯ ಸೇವೆಯಲ್ಲಿ ತೊಡಗುತ್ತಾಳೆ. ಅವರೊಂದಿಗೆ ವಾನಪ್ರಸ್ಥಾಶ್ರಮಕ್ಕೂ ಹೋಗುತ್ತಾಳೆ. ಹೀಗೆ ಆದರ್ಶ ಮಹಿಳೆಯ ಉತ್ತಮ ಉದಾಹರಣೆ ಕುಂತಿದೇವಿ.


ಕುಂತಿ ದೇವಿಯ ಪಾತ್ರದಿಂದ ಬಹಳಷ್ಟು ಮಹತ್ವದ ವಿಷಯಗಳನ್ನು ನಾವು ತಿಳಿಯಲೇ ಬೇಕು. ಸಣ್ಣ ವಯಸ್ಸಿನಲ್ಲಿ ಸಿಕ್ಕ ಅವಕಾಶಗಳನ್ನು ಕುತೂಹಲಕ್ಕೆ ಒಳಗಾಗಿ ಅದರ ಪ್ರಯೋಗದ ಪರಿಣಾಮ ತಿಳಿಯದೇ ಮಾಡಬಾರದು. ಗುರುಹಿರಿಯರ ಸೇವೆಯನ್ನು ಮಾಡಿದಾಗ ನಮಗೆ ಉತ್ತಮ ಫಲಗಳು ದೊರೆಯುತ್ತವೆ. ಎಲ್ಲ ಸಂಬಂಧಗಳಲ್ಲಿ ಗೌರವ ಮತ್ತು ಪ್ರೀತಿ ಆದರಗಳಿಂದ ನಡೆಯಬೇಕು. ಗಂಡನ ಪ್ರತಿಯೊಂದು ಸನ್ನಿವೇಶದಲ್ಲೂ ಬೆನ್ನೆಲುಬಾಗಿ ನಿಲ್ಲಬೇಕು. ಮಕ್ಕಳಲ್ಲಿ ಭೇದ ಭಾವ ಮಾಡದೇ ಪ್ರೀತಿಯನ್ನು ಕೊಡಬೇಕು. ನಾವು ಆಡುವ ಮಾತು ಸತ್ಯವಾಗುವ ಸಂದರ್ಭದಲ್ಲಿ ಹಿಂದೆ ಮುಂದೆ ನೋಡದೇ ಯೋಚಿಸದೇ ಮಾತನಾಡಬಾರದು. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಕೆಲವೊಮ್ಮೆ ಸತ್ಯವನ್ನು ಸಮಯ ಸಂದರ್ಭ ನೋಡಿ ಹೇಳಿ ಬಿಡಬೇಕು ಹಾಗೂ ಎಲ್ಲಕ್ಕಿಂತ ಮಹತ್ವದ ವಿಚಾರ ಸುಖ ದುಃಖ ಯಾವ ಸಂದರ್ಭವೇ ಇರಲಿ ಭಗವಂತನಲ್ಲಿ ಅಚಲ ವಿಶ್ವಾಸ ಇಡಬೇಕು. ಇಂತಹ ಪರಮಾತ್ಮನ ಪರಮ ಭಕ್ತಳು ಆದರ್ಶ ಮಹಿಳೆಯಾದ ಕುಂತಿ ದೇವಿ ಸದಾ ಪೂಜಾನೀಯಳು.


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top