ಒಬ್ಬ ಶಿಷ್ಯನಿಗೆ ತುಂಬಿ ಹರಿಯುತ್ತಿದ್ದ ನದಿಯನ್ನು ದಾಟಲು ಭಯವಾಗುತ್ತಿತ್ತು. ಅವನಿಗೆ ಗುರುಗಳು ಒಂದು ಚೀಟಿಯಲ್ಲಿ ಮಂತ್ರವನ್ನು ನೀಡಿದ್ದೇನೆ. ಈ ಚೀಟಿಯನ್ನು ತೆರೆದು ನೋಡದೆ ದೇವರ ಮೇಲೆ ನಂಬಿಕೆಯಿಂದ ನದಿಯನ್ನು ದಾಟು ಎಂದು ಹೇಳುತ್ತಾರೆ. ಗುರುಗಳು ಕೊಟ್ಟ ಚೀಟಿಯನ್ನು ಕೈಯಲ್ಲಿ ಹಿಡಿದು ಕೊಂಡು ನದಿಯನ್ನು ದಾಟಬಹುದೆಂದು ನಂಬಿ ಗುರುಗಳ ಮಾತಿನಂತೆ ಅವರು ಕೊಟ್ಟಿದ್ದನ್ನು ಹಿಡಿದು ದಾಟುತ್ತಲಿದ ತುಂಬಿ ಹರಿಯುತ್ತಿರುವ ನದಿಯನ್ನು ಇಷ್ಟು ಅರಾಮವಾಗಿ ದಾಟುತ್ತಿದ್ದೇನೆ. ಈ ಚೀಟಿಯಲ್ಲಿ ಯಾವ ಮಂತ್ರವಿದೆ ಎಂದು ಗುರುಗಳು ಕೊಟ್ಟ ಆ ಚೀಟಿಯನ್ನು ತೆಗೆದು ನೋಡಬಾರದೆಂದು ಹೇಳಿದ್ದರೂ ತೆಗೆದು ನೋಡಿದ ಅದರಲ್ಲಿ "ಶ್ರೀ ರಾಮ" ಎಂದು ಬರೆದಿತ್ತು. ಭವ ಸಾಗರವನ್ನು ದಾಟಿಸುವ ಶ್ರೀರಾಮ, ಯಾವ ಸಮುದ್ರ ರಾಜನನ್ನು ರಾಮನು ಕ್ರೋಧದಿಂದ ನೋಡಿದಾಗ ಸಮುದ್ರ ದಾಟಲು ಸ್ಥಳ ಮಾಡಿ ಕೊಟ್ಟಿದ್ದನೋ, ಯಾವ ಶ್ರೀಕೃಷ್ಣನನ್ನು ನಂದನು ಗೋಕುಲಕ್ಕೆ ಕರೆದು ಕೊಂಡು ಹೋದಾಗ ನದೀ ದಾರಿ ಬಿಟ್ಟಿತ್ತೋ ಆ "ಶ್ರೀರಾಮನಾಮದ" ಬಗೆಗೆ ಶಿಷ್ಯ ಇಷ್ಟೇನೇ ಎಂದು ಅಸಡ್ಡೆ ಆವಿಶ್ವಾಸ ಮಾಡಿದರೆ ಆಗ ಮುಳುಗುತ್ತಾನೆ. ಆದರೆ ಭಗವಂತನಲ್ಲಿ ವಿಶ್ವಾಸ ಇಟ್ಟು ನಂಬಿದಾಗ ದೇವರು ರಕ್ಷಿಸಿರುತ್ತಾನೆ.
ವಿಶ್ವಾಸ ಮತ್ತು ಶ್ರದ್ಧೆ ಇಲ್ಲದೇ ಇದ್ದಾಗ ಯಾವುದೇ ಕಾರ್ಯದಲ್ಲಿ ಅದರ ಪ್ರಯೋಜನವಾಗುವುದಿಲ್ಲ. ವಿಶ್ವಾಸ ಇಲ್ಲದೇ ಆಚರಣೆ ಧರ್ಮ ಕಾರ್ಯ ಮಾಡಬಾರದು. ದೃಢವಾದ ವಿಶ್ವಾಸದಿಂದ ಶ್ರದ್ಧೆಯಿಂದ ಅನುಷ್ಠಾನ ಧರ್ಮಕಾರ್ಯಗಳನ್ನು ಮಾಡಿದಾಗ ನಮ್ಮನ್ನು ಭಗವಂತ ರಕ್ಷಿಸುತ್ತಾನೆ ಎಂದು ಮಹಾಭಾರತದಿಂದ ತಿಳಿಯುತ್ತೇವೆ. ಶ್ರೀ ಕೃಷ್ಣ ಪರಮತ್ಮನು ಹೇಳುತ್ತಾನೆ ಸತ್ಕರ್ಮಗಳನ್ನು ಮಾಡಿದ ವ್ಯಕ್ತಿ ಸುಖವನ್ನು ಅನುಭವಿಸೇ ಅನುಭವಿಸುತ್ತಾನೆ. ಸತ್ಕರ್ಮ ಮಾಡಿದ ಕೂಡಲೇ ಸುಖ ಸಿಗದೇ ಇರಬಹುದು, ಆದರೆ ಪರಮಾತ್ಮನು ಸರಿಯಾದ ಸಮಯದಲ್ಲಿ ಸತ್ಕರ್ಮದ ಫಲವಾದ ಸುಖವನ್ನು ಕೊಡುತ್ತಾನೆ. ಅದನ್ನು ಮನುಷ್ಯ ಅನುಭವಿಸೇ ಅನುಭವಿಸುತ್ತಾನೆ ಎನ್ನುತ್ತಾನೆ. ಅದೇ ರೀತಿ ಅಸತ್ಕಕರ್ಮಕ್ಕೂ ಇದೇ ಫಲ ಕೂಡ ನಾನು ಶಿಕ್ಷೆಯನ್ನು ಕೊಟ್ಟೆ ಕೊಡುತ್ತೇನೆ ಪಾಪ ಮಾಡಿದರೂ ಆರಾಮದಿಂದ ಇದ್ದೇವೆ ಎನ್ನುವವರ ಮಾತುಗಳಿಗೆ ಮರುಳಾಗಿ ಬೇಡಿ. ಸತ್ಕಕರ್ಮ ಮಾಡಿದವರಿಗೆ ದುಃಖ ಆಗಬಹುದು. ಆದರೆ ಅಸತ್ಕರ್ಮದಿಂದ ಆ ದುಃಖ ತಡವಾಗಬಹುದು. ಆದ್ದರಿಂದ ಸತ್ಕಕರ್ಮದ ಫಲ ಶುಭ ಮಂಗಲವೇ ಆಗುವುದು ಎಂದು ಶ್ರೀಕೃಷ್ಣ ಪರಮಾತ್ಮ ಸ್ವತಃ ಹೇಳುತ್ತಾನೆ.
ಧರ್ಮವನ್ನು ಮಾಡಿದ ಕೂಡಲೇ ಫಲ ದೊರಕಿಲ್ಲ ಎಂದು ದುಃಖಿಸಬಾರದು ಹಿಂದೆ ಮಾಡಿದ ಅಧರ್ಮದ ಫಲ ದುಃಖ ಬಂದರೂ ನಂತರ ಸತ್ಕರ್ಮದ ಫಲವಾದ ಸುಖವನ್ನು ಅನುಭವಿಸುತ್ತೇವೆ. ಇಂದು ನಮಗೆ ಅನೇಕ ಸುಖ ಹಣ ಜನ ಸಂಪತ್ತು ಎಲ್ಲವೂ ಇದೆ, ಬುದ್ದಿವಂತರಾಗಿದ್ದೇವೆ, ಆರೋಗ್ಯವಂತವಾಗಿ ಇದ್ದೇವೆ ಎಂದರೆ ಇವೆಲ್ಲವೂ ಹಿಂದೆ ನಾವು ಮಾಡಿದ ಸತ್ಕರ್ಮಗಳ ಫಲ. ಮನುಷ್ಯನು ಸುಖವನ್ನು ಕೊಟ್ಟಾಗ ದೇವರನ್ನು ನೆನೆಸುವುದಿಲ್ಲ. ಆದರೆ ಭಗವಂತ ನಾವು ಮಾಡಿದ ಅತ್ಯಲ್ಪ ಸತ್ಕರ್ಮಕ್ಕೆ ಸುಖವನ್ನು ಫಲ ಸ್ವರೂಪವಾಗಿ ಕೊಟ್ಟು ಉದ್ದರಿಸಿದ್ದಾನೆ ಎಂದು ಸ್ಮರಿಸುವ ತಿಳಿವಳಿಕೆ ಬಂದರೆ ಮಾತ್ರ ಧಾರ್ಮಿಕರಾದಂತೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ