(ಒಂದು ವಿಡಂಬನಾ ಪದಯಾತ್ರೆ)
ಚಿತ್ರ ಕೃಪೆ: ಡೆಕ್ಕನ್ ಕ್ರಾನಿಕಲ್
"ತೀವ್ರ ವರುಣಾರ್ಭಟ ಕಾರಣ, ಬಹುತೇಕ ಕಡೆ ರೋಡೆಲ್ಲ ಕುಸಿದಿದ್ದು, ಸಣ್ಣ ಕಿರಿದಾದ ಕಾಲು ದಾರಿ ಮಾತ್ರ ದರೆ ಬದಿಗೆ ಇದ್ದು, ಪಕ್ಷದ ಎಲ್ಲರೂ ಒಟ್ಟಿಗೆ ಪಾದ ಯಾತ್ರೆಗೆ ಹೋಗುವುದಕ್ಕೆ ಸಾಧ್ಯವಾಗದ ಕಾರಣ, ಪ್ರತ್ಯೇಕ ಪ್ರತ್ಯೇಕ ಪಾದಯಾತ್ರೆ ಕೈಗೊಳ್ಳಲು ನಮ್ಮ ಪಕ್ಷ ಒಮ್ಮತದಿಂದ ತೀರ್ಮಾನಿಸಿದೆ! ಪಕ್ಷದೊಳಗೆ ಯಾವ ಭಿನ್ನಮತವೂ ಇಲ್ಲ. ಭಿನ್ನಮತ ಇದೆ ಎಂಬುದು ವಿರೋಧಿಗಳ ಸೃಷ್ಟಿ, ಕಟ್ಟು ಕತೆ. ಪಾದಯಾತ್ರೆಗೆ ಹೆದರಿದ ಆಡಳಿತ ಪಕ್ಷ, ಪಾದಯಾತ್ರೆಯನ್ನು ತಡಯಲು ಸುಳ್ಳು ಸುದ್ದಿಗಳನ್ನು ಹರಿಯಬಿಡುತ್ತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಪಾದಯಾತ್ರೆ ಮಾಡಿಯೇ ಸಿದ್ದ ಎಂದು ರಾಜ್ಯದ ವಿರೋಧ ಪಕ್ಷ ಪತ್ರಿಕಾ ಹೇಳಿಕೆ ನೀಡಿದೆ.
ಪ್ರತ್ಯೇಕ ಪಾದಯಾತ್ರೆ ಮಾಡುವಾಗ ಕೆಲವು ಮಾನ ದಂಡಗಳನ್ನು ಅನುಸರಿಸಲಾಗುತ್ತದೆ ಎಂದು ಪಕ್ಷದ ಬಾತ್ಮೀದಾರರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪಾದಯಾತ್ರೆ ಸುಗಮವಾಗಿ ನಡೆಯುವುದಕ್ಕೋಸ್ಕರ, ಪ್ರತ್ಯೇಕ ಪಾದಯಾತ್ರೆಗೆ ಪಕ್ಷದಲ್ಲಿ ಒಗ್ಗಟ್ಟಿನಿಂದ ಅನೇಕ ಗುಂಪುಗಳನ್ನು ಮಾಡಲಾಗುತ್ತಿದೆ:
ಒಕ್ಕಲಿಗರ ತಂಡ,
ಲಿಂಗಾಯಿತರ ತಂಡ,
ಹಿಂದುಳಿದ ಮತ್ತು ದಲಿತರ ತಂಡ,
ವಾಲ್ಮೀಕಿ ತಂಡ,
ಕುರುಬರ ತಂಡ,
ಮಹಿಳಾ ತಂಡ,
ಯೂತ್ ತಂಡ,
ಅಲ್ಪಸಂಖ್ಯಾತರ ತಂಡ,
ಪಕ್ಷದ ಮೂಲ ನಿವಾಸಿಗಳ ತಂಡ,
ವಲಸಿಗರ ತಂಡ,
ಪಕ್ಷದಲ್ಲಿದ್ದು ಬೇರೆ ಪಕ್ಷಕ್ಕೆ ಹೋಗಿ ಬಂದವರ ತಂಡ,
ಶಿಕಾರಿಪುರ ಪ್ರಾಂತ್ಯದವರ ತಂಡ,
ಶಿವಮೊಗ್ಗ ಪ್ರಾಂತ್ಯದವರ ತಂಡ,
ಬೆಂಗಳೂರು ತಂಡ,
ಉತ್ತರ ಕರ್ನಾಟಕ ತಂಡ,
ಹೈದರಬಾದ್ ಕರ್ನಾಟಕ ತಂಡ,
ಮುಂಬಯಿ ಕರ್ನಾಟಕ ತಂಡ
ಜಮ್ಮು ಕಾಶ್ಮೀರ ಕರ್ನಾಟಕ ತಂಡ,
ಮುಂದಿನ ಸರಕಾರದಲ್ಲಿ ಸಂಭವನೀಯ ಮುಖ್ಯಮಂತ್ರಿಗಳಾಗುವ ಸನ್ಯಾಸಿಗಳಲ್ಲದವರ ತಂಡ,
ಮುಂದಿನ ಸರಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಲು ಅರ್ಹತೆ ಇರುವವರ ತಂಡ,
ಆರ್ಥಿಕವಾಗಿ ಅನುಕೂಲ ಪಡೆಯಲು, ಮತ್ತೊಂದು ಪಕ್ಷದೊಂದಿಗೆ ಸಂಬಂಧ ಬೆಳಸಿರುವ ತಂಡ,
ಧಾರ್ಮಿಕ ಫೈರ್ ಬ್ರಾಂಡ್ ತಂಡ,
ವಿರೋಧ ಪಕ್ಷವನ್ನು ಸದಾ ಹೀಗಳೆಯುತ್ತಿರುವ ತಂಡ,
ಹೈಕಮಾಂಡ್ಗೆ ಆಪ್ತವಾಗಿರುವ ತಂಡ,
ಸಮ್ಮಿಶ್ರ ದೋಸ್ತಿ ಪಕ್ಷದ ತಂಡ,
ಒಳ ಮೈತ್ರಿ ತಂಡ,
ಹೊರ ಮೈತ್ರಿ ತಂಡ,
ಹೀಗೆ ಒಟ್ಟು 224 ತಂಡಗಳನ್ನಾಗಿಸಿ ಬೃಹತ್ ಪಾದ ಯಾತ್ರೆ ಮಾಡಲು ಪಕ್ಷ ಒಮ್ಮನಸ್ಸಿನಿಂದ ಸಿದ್ದವಾಗಿದೆ!!!
ಯಾವುದೇ ಭಿನ್ನಮತ ಪಕ್ಷದಲ್ಲಿಲ್ಲ ಎಂದು ಸ್ಪೋಟಕ ಸುದ್ದಿಯನ್ನು ಪಕ್ಷದ ವಕ್ತಾರರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತೀವ್ರ ಮಳೆಯ ಕಾರಣ, ಪಕ್ಷದ ಎಲ್ಲಾ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ