ಹೆಚ್.ಎಸ್. ಪ್ರತಿಮಾ ಹಾಸನ್ ರವರ 4ನೇ ಕೃತಿ- 'ಭಾವನೆಗಳ ಪ್ರತಿರೂಪ'- ಅವಲೋಕನ

Upayuktha
0


ಮೌನವೆನ್ನುವವರೆಲ್ಲ ಮೌನಿಗಳಲ್ಲ, ಅವರಲ್ಲೂ ಬಹಳಷ್ಟು ಮಂದಿ ಉತ್ತಮ ಮಾತುಗಾರರು, ಬರಹಗಾರರು ಸಮಾಜ ಸೇವಕರೂ ಇರುತ್ತಾರೆ. ಇಂತಹ ಒಬ್ಬರು ನಮ್ಮ ನಡುವೆಯೇ ಇದ್ದಾರೆ ಅವರು ವೃತ್ತಿಯಲ್ಲಿ ಶಿಕ್ಷಕಿ ಪ್ರವೃತ್ತಿಯಲ್ಲಿ ಲೇಖಕಿ ಸಾಮಾಜಿಕ ಹೋರಾಟಗಾರ್ತಿ ಶ್ರೀಮತಿ ಹೆಚ್ ಎಸ್ ಪ್ರತಿಮಾ ಹಾಸನ್ ರವರು.


ಹಾಸನದ ಸುರೇಶ್ ಹಾಗೂ ಶ್ರೀಮತಿ ನೀಲಮ್ಮ ದಂಪತಿಗಳ ಹಿರಿಯ ಪುತ್ರಿಯಾಗಿ ಜನಿಸಿ, ಹಾಸನದಲ್ಲೇ ತಮ್ಮೆಲ್ಲ ವಿದ್ಯಾಭ್ಯಾಸವನ್ನು ಪೂರೈಸಿ; ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿ ಮಾಡಿಕೊಂಡರು. ನಂತರ ಹಲವಾರು ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ, ಸಂಸ್ಥೆಯ ಉನ್ನತಮಟ್ಟದ ಹುದ್ದೆಯನ್ನೂ ಅಲಂಕರಿಸಿದರು. ಈ ನಡುವೆ ಮದುವೆಯಾದ ತರುವಾಯ ಪತಿಯೊಡನೆ ಹೊರ ರಾಜ್ಯದಲ್ಲಿ ನೆಲೆಸಿದ್ದರು. ನಂತರ ತಾಯ್ನಾಡಿಗೆ ಬಂದು ನೆಲೆಸಿದ ನಂತರ ಸಮಾಜ ಸೇವಕಿಯಾಗಿ ಗುರುತಿಸಿಕೊಂಡರು. ಕಂಪ್ಯೂಟರ್ ಇದರಲ್ಲಿ ವಿಶೇಷ ತರಬೇತಿಯನ್ನು ಪಡೆದ ಇವರು ಈಗ ಸರಕಾರಿ ಶಾಲೆಯೊಂದರಲ್ಲಿ ಅರೆಕಾಲಿಕ ಕಂಪ್ಯೂಟರ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ರಾಜ್ಯದ ಕನ್ನಡ ಪರ ವಿವಿಧ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಅನುಭವವನ್ನು ಪಡೆದಿದ್ದು, ವಿಶೇಷವಾಗಿ ರೈತರ ಪರವಾನಗಿ ಧ್ವನಿಯೆತ್ತಿ ಅದರಲ್ಲಿ ರೈತರಿಗೆ ನ್ಯಾಯ ಕೊಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಮೂಲಕ ಹೋರಾಟಗಾರ್ತಿಯಾಗಿ ಹಾಸನ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹೋರಾಟ ಸಾಮಾಜಿಕ ಕ್ಷೇತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಿದ್ದಾರೆ. ಇವರೇ ಸ್ವತಃ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಟಾನ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಕಿರಿಯ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿ ಅವರಲ್ಲಿರುವ ಸಾಹಿತ್ಯ ವೈವಿಧ್ಯತೆಯನ್ನು ನಾಡಿಗೆ ಪರಿಚಯಿಸುತ್ತಿದ್ದಾರೆ. ಹಾಗೇ ಇವರು ಕರ್ನಾಟಕ ರಾಜ್ಯ ಮುಕ್ತಕ ಸಾಹಿತ್ಯ ಪರಿಷತ್ತಿನ ಹಾಸನದ ಜಿಲ್ಲಾಧ್ಯಕ್ಷೆಯಾಗಿ, ರಾಜ್ಯ ಒಕ್ಕಲಿಗರ ಸಂಘಟನೆಯ ಹಾಸನ ಜಿಲ್ಲಾ ಕಾರ್ಯದರ್ಶಿಯಾಗಿ, ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಮತ್ತೆ ಪತ್ರಕರ್ತೆಯಾಗಿಯೂ ಪತ್ರಿಕಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಇನ್ನೂ ಹತ್ತು ಹಲವು ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.


ಇವರ ಸಾಧನೆಗೆ ಸಂದ ಗೌರವ ಪ್ರಶಸ್ತಿಗಳು ಹಲವಾರು. ಮೂಲತಃ ಶಿಕ್ಷಕಿಯಾಗಿರುವ ಇವರ ಸೇವೆಯನ್ನು ಗಮನಿಸಿ ಅನೇಕ ಸಂಘ ಸಂಸ್ಥೆಗಳು ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ. ಕಥಾಬಿಂದು ಪ್ರಕಾಶನದಿಂದ ಸೌರಭರತ್ನ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು   ರಾಜ್ಯ ಹೊರ ರಾಜ್ಯಗಳು ಇವರಿಗೆ ನೀಡಿ ಗೌರವಿಸಿದೆ.


ಇಂತಹ ಬಹುಮುಖ ಪ್ರತಿಭೆಯುಳ್ಳ ಶ್ರೀಮತಿ ಹೆಚ್ ಎಸ್ ಪ್ರತಿಮಾ ಹಾಸನ್ ಇವರು ಇದೀಗ ವಿವಿಧ ಪತ್ರಿಕೆಗಳಲ್ಲಿ ಈಗಾಗಲೆ ಬಂದಿರುವ ೫೩ಲೇಖನಗಳನೆಲ್ಲ ಒಂದೆಡೆ ಸೇರಿಸಿ ಭಾವನೆಗಳ ಪ್ರತಿರೂಪ ಪುಸ್ತಕ ರೂಪದಲ್ಲಿ ಹೊರ ತರುತ್ತಿದ್ದು ನನ್ನಿಂದ ಈ ಸಂಕಲನಕ್ಕೆ ಮುನ್ನುಡಿಯ ಬರೆದು ಕೊಡುವಿರಾ ಎಂದಾಗ ಸಂತೋಷದಿಂದ ಒಪ್ಪಿ ನನ್ನೆರಡು ಮಾತುಗಳ ಬರೆಯುತ್ತಿರುವೆ. ಕನ್ನಡ ಪದಗಳ ಸಂಪತ್ತು ಇವರಲ್ಲಿ ಹೇರಳವಾಗಿವೆ. ಬಹು ಸುಂದರ ಉಪಮೇಯ ಮೂಲಕ ಲೇಖನ ಬರೆಯುವ ಕಲೆ ಇವರಿಗೆ ಸಿದ್ಧಿಸಿದೆ‌. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಾಮಾಜಿಕ ಸಾಹಿತ್ಯದಲ್ಲಿ ಕೈಯಾಡಿಸದ ಕ್ಷೇತ್ರವಿಲ್ಲ. ಎಲ್ಲಾ ಪ್ರಕಾರಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.


ಈಗ ಹೊರ ತರುತ್ತಿರುವ ವೈಚಾರಿಕ ಲೇಖನ ಮಾಲೆ ಜನಮಾನಸವನ್ನು ತಲುಪಿ, ರಾಜ್ಯ ಹೊರ ರಾಜ್ಯದ ಕನ್ನಡಿಗರಿಗೂ ತಲುಪಲಿ. ಆ ಮೂಲಕ ಅವರ ಹೆಸರು ಪ್ರಜ್ವಲಿಸಲಿ.


'ಭಾವನೆಗಳ ಪ್ರತಿರೂಪ' ಕೃತಿಯು "ಸಮಾಜದ ಮುಖಭಾವಗಳ ಪ್ರತಿರೂಪ"ವಾಗಿದೆ. ಇದು 2024ನೇ ಆವೃತ್ತಿಯಾಗಿದ್ದು 260 ಪುಟಗಳನ್ನು ಒಳಗೊಂಡಿದೆ. ಅರ್ಪಣೆಯನ್ನು ತನ್ನ ತಂದೆ ತಾಯಿ ಮತ್ತು ಸೋದರನಿಗೆ ಅರ್ಪಿಸಿದ್ದಾರೆ. ತನ್ನೆಲ್ಲ ಸಾಧನೆಗೆ ಇವರೇ ಕಾರಣವೆಂದು ಶ್ರೀಮತಿ ನೀಲಮ್ಮ ಸುರೇಶ್ ಮತ್ತು ದಿವಂಗತ ಸುರೇಶ್ ಹಾಗೂ ಅಣ್ಣನಾದ ಹೆಚ್.ಎಸ್. ಮಂಜುನಾಥ್ ರವರಿಗೆ ಅರ್ಪಿಸಿದ್ದಾರೆ. ಈ ಕೃತಿಯ ಬೆಲೆಯೂ 320 ರೂಪಾಯಿಯಾಗಿದೆ. ಆಶಯ ನುಡಿಯವನ್ನು ಹೆಚ್ ಪಿ ದೇವರಾಜ್ ರವರು ಹಾಸನ ಬರೆದಿದ್ದು ನನ್ನುಡಿಯಲ್ಲಿ ಲೇಖಕಿ ಶ್ರೀಮತಿ ಹೆಚ್ಎಸ್ ಪ್ರತಿಮಾ ಹಾಸನ್ ರವರು ತನ್ನ ಸಾಹಿತ್ಯ ದಾರಿಯಲ್ಲಿ ಸಹಕಾರವನ್ನು ನೀಡಿದಂತ ಎಲ್ಲರಿಗೂ ಧನ್ಯವಾದಗಳು ತಿಳಿಸಿದ್ದಾರೆ. ಬೆನ್ನುಡಿಯೆಲ್ಲ ಡಾಕ್ಟರ್ ದಿನೇಶ್ ಬೈರೇಗೌಡರವರು ಮಕ್ಕಳ ತಜ್ಞರು ಸಮಾಜ ಸೇವಕರು ಹಾಸನ ಇವರು ಲೇಖಕಿಗೆ ಬೆನ್ನು ತಟ್ಟುವ ಕಾರ್ಯವನ್ನು ಮಾಡಿದ್ದಾರೆ. ಬಹಳ ಅರ್ಥಪೂರ್ಣವಾದಂತ ನುಡಿಗಳು ಈ ಬೆನ್ನುಡಿಯಲ್ಲಿದೆ.


ಪ್ರೇಮಿಗಳ ದಿನಾಚರಣೆ ಸಿದ್ಧತೆ ಎನ್ನುವ ಲೇಖನದಲ್ಲಿ ಹರೆಯದವರು ಹೇಗಿದ್ದರೆ ಚೆಂದ ಹೇಗಿರಬಾರದು, ಪ್ರೀತಿ ಬೇಕು ಅದನ್ನು ಹೇಗೆ ಯಾವ ರೀತಿಯಲ್ಲಿ ಪಡೆದು ಬದುಕನ್ನು ಸುಂದರವಾಗಿಸಬೇಕೆಂಬುವುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಯುವ ಜನತೆಗೆ ಒಂದೊಳ್ಳೆಯ ಸಂದೇಶ ಕೊಡುವ ಲೇಖನವಿದು. ಬರಹಗಾರ್ತಿ ಚೆನ್ನಾಗಿ ವಿವರಿಸಿದ್ದಾರೆ, ಚೆನ್ನಾಗಿದೆ. ಮಾನಿನಿಯ ಜವಾಬ್ದಾರಿಗಳು ಇದರಲ್ಲಿ ಮನೆಯ ಸಮಸ್ತ ಜವಾಬ್ದಾರಿ ಹೆಣ್ಣು ಮಕ್ಕಳಿಗೆದೆಯೆನ್ನುತ್ತಾ, ಒಂದು ಉತ್ತಮ ಕುಟುಂಬದ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಎಂದಿದ್ದಾರೆ. ಬಹಳ ಉತ್ತಮ ಲೇಖನ. ಬರಿದೆ ಸ್ತ್ರೀ ಕುಲದ ಬಗ್ಗೆ ತಿಳಿಸುವ ಲೇಖನಗಳಲ್ಲದೆ ಹಬ್ಬಗಳ ಕುರಿತಾದ ಲೇಖನಗಳೂ ಇದರಲ್ಲಿವೆ. ಶಿವರಾತ್ರಿ ಹಬ್ಬದ ಕುರಿತು ವಿವರಣೆಯುಳ್ಳ ಲೇಖನ ಚೆನ್ನಾಗಿದೆ. 


ಹೀಗೆ ವೈವಿಧ್ಯಮಯ ಸುಮಾರು 53 ಲೇಖನಗಳು ಈ ಭಾವನೆಗಳ ಪ್ರತಿರೂಪ ಎನ್ನುವ ಲೇಖನ ಸಂಕಲನದಲ್ಲಿ ಇದೆ. ಹೆಸರಿಗೆ ತಕ್ಕಂತೆ ಲೇಖಕಿ ತಮ್ಮ ಭಾವನೆಗಳ ರೂಪಗಳನ್ನು ಲೇಖನದಲ್ಲಿ ತಿಳಿಸುತ್ತಾ ಸಾಗಿದ್ದು ರಾಜ್ಯದಲ್ಲೇ ನಾನೊಬ್ಬ ಉತ್ತಮ ಬರಹಗಾರ್ತಿ ಎಂಬುವುದನ್ನು ನಿರೂಪಿಸಿದ್ದಾರೆ. ಒಂದಕ್ಕಿಂತ ಒಂದು ಲೇಖನಗಳು ಓದುಗರ ಮನಸ್ಸಿಗೆ ಮುಟ್ಟುವಂತಿದೆ.


ಅವರ ಹೆಸರು ನಾಡಿನಲ್ಲಿ ಇನ್ನಷ್ಟು ಎತ್ತರಕ್ಕೇರಲಿ ಎನ್ನುವ ಸದಾಶಯದೊಂದಿಗೆ ಕೃತಿಯು ಲೋಕಾರ್ಪಣೆಗೆ ಸಿದ್ದವಾಗಿದ್ದು ಅತಿ ಶೀಘ್ರದಲ್ಲಿ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಲೇಖಕಿ ಶ್ರೀಮತಿ ಎಚ್ ಎಸ್ ಪ್ರತಿಮಾ ಹಾಸನದವರಿಗೆ ಶುಭವಾಗಲಿ.


- ಹಾ.ಮ. ಸತೀಶ ಬೆಂಗಳೂರು

ಕವಿ, ಸಾಹಿತಿ, ಅಧ್ಯಾಪಕರು 

ತಾವರೆಕೆರೆ ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top