ಲೇಖಾ ಲೋಕ-5: ಅಪ್ರತಿಮ ಸಾಮಾಜಿಕ ಪ್ರಗತಿಪರ ಚಿಂತಕಿ ಪರಿಮಳ ಶರಶ್ಚಂದ್ರ

Upayuktha
0




ಬ್ಯಾಂಕ್ ಉದ್ಯೋಗದಲ್ಲಿದ್ದು, ಸಾಮಾಜಿಕ ಸೇವೆ ಮಾಡಿ, ಅಪ್ರತಿಮ ಸಾಧನೆ ಮಾಡಿದ ಮಹಿಳೆ ಶ್ರೀಮತಿ  ಪರಿಮಳ ಶರಶ್ಚಂದ್ರ ಅವರು. ಹೈದರಾಬಾದ್ ನಲ್ಲಿ 1950 ರಂದು, ಮಾಧ್ವ ಬ್ರಾಹ್ಮಣ ಕುಟುಂಬದ ಮೈಸೂರು ಮೂಲದ ಅರಗುಳ ರಾಮರಾವ್  ಮತ್ತು ಜಯಂತಿ ದಂಪತಿಗೆ ಪುತ್ರಿಯಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಮುಗಿಸಿ, 1970ರಲ್ಲಿ ಬಿ.ಎ.ಅಥ೯ಶಾಸ್ತ್ರ ಪದವಿ ಪಡೆದರು. ಬಾಲ್ಯದಲ್ಲಿ ಸಾಂಸ್ಕೃತಿಕ, ಸಾಹಿತ್ಯ ಕಾಯ೯ಕ್ರಮಗಳಲ್ಲಿ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ, ರಸಪ್ರಶ್ನೆ ಕಾಯ೯ಕ್ರಮದಲ್ಲಿ ಭಾಗವಹಿಸಿ, ಬಹುಮಾನ ಪಡೆದ ಪ್ರವೀಣಳು. 1975 ರಲ್ಲಿ ಆಂಧ್ರ ಬ್ಯಾಂಕ್ ನಲ್ಲಿ ನೇರವಾಗಿ, ಆಯ್ಕೆಗೊಂಡು, ಪ್ರೊಬೇಷನರಿ ಪರೀಕ್ಷೆ ಪಾಸು ಮಾಡಿದರು. ಅದೇ ಬ್ಯಾಂಕ್ ನಲ್ಲಿ, ಅಧಿಕಾರಿಯಾಗಿಯಾಗಿ ನೇಮಕಗೊಂಡರು. ಬ್ಯಾಂಕ್ ಪರೀಕ್ಷೆ ಸಿಎ ಐಐಬಿ ಪಾಸು ಮಾಡಿ, ಆ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಶರಶ್ಚಂದ್ರ ಅವರನ್ನು 1976ರಲ್ಲಿ ವಿವಾಹವಾದರು. ಇವರ ಪುತ್ರಿ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ, ಪಿ ಹೆಚ್ ಡಿ ಮಾಡುತ್ತಿದ್ದಾರೆ ಮತ್ತು ಪರಿಮಳ ಶರಶ್ಚಂದ್ರ ಅವರ ಅಳಿಯ ಸಾಪ್ಟ್ವೇರ್ ಇಂಜಿನಿಯರ್. ಇವರ ಮೊಮ್ಮಗ ಐಐಟಿ. ಖರಗ್ ಪುರ್ ನಲ್ಲಿ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾನೆ. 


ಪರಿಮಳ ಶರಶ್ಚಂದ್ರ ಅವರು ಆಂಧ್ರಬ್ಯಾಂಕ್ ನ ವಿವಿಧ ಹಣಕಾಸು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ. ಪ್ರತಿಷ್ಟಿತ  ಬ್ಯಾಂಕ್ ತರಬೇತಿ  ಸಂಸ್ಥೆಗಳಲ್ಲಿ ಹಿರಿಯ ಮಟ್ಟದ ಕಾಯ೯ಕ್ರಮಗಳಿಗೆ ಹಾಜರಾಗಲು  ನಾಮನಿದೇ೯ಶನಗೊಂಡರು. ವಿಜಯವಾಡ ಆಕಾಶವಾಣಿಯಲ್ಲಿ ಬ್ಯಾಂಕ್ ಯೋಜನೆಗಳ ವಿಶೇಷ  ಉಪನ್ಯಾಸ, ಭಾಷಣ,ಸೆಮಿನಾರ್, ಗ್ರಾಹಕರ ಸಭೆ, ನೀಡುವುದಲ್ಲದೇ ಸಂದಶ೯ನ ನೀಡಿದ್ದಾರೆ. ಹಲವಾರು ಶಾಲಾ ಮಟ್ಟದಲ್ಲಿ ಕಾಲೇಜುಗಳಲ್ಲಿ, ಆಹ್ವಾನಿತರಾಗಿ ಭಾಷಣ ಮಾಡಿದ  ಮಹನೀಯರು.  1972 ರಿಂದ  2001ರವರೆಗೆ ಆಂಧ್ರಬ್ಯಾಂಕ್ ನಲ್ಲಿ ವಿವಿಧ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು.  

ಪರಿಮಳ ಶರಶ್ಚಂದ್ರ ಅವರಿಗೆ ಅನೇಕ ಬಹುಮಾನಗಳು, ಸನ್ಮಾನ, ಪ್ರಶಸ್ತಿಗಳು ಲಭಿಸಿವೆ. ಹೈದರಾಬಾದ್ ರೋಟರಿ ಕ್ಲಬ್  ಪ್ರಶಸ್ತಿ, ಬ್ಯಾಂಕ್ ಮಹಿಳಾ  ಸಿಬ್ಬಂದಿಗಳಿಂದ  ಪ್ರಶಸ್ತಿ, ಲಭಿಸಿವೆ. 1-3-2018 ರಂದು ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟ (ಕನಾ೯ಟಕ) ಸಮಿತಿಗೆ ಸೇರಿ, ಅನೇಕ ಅದರ  ಕಾಯ೯ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ, ಎಐಬಿಆರ್ಎಎಫ್ ನ   ಪದಾಧಿಕಾರಿಗಳ ಉಪಾಧ್ಯಕ್ಷ ರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳಾ ವಿಭಾಗದ ಕಾಯ೯ಕಾರಿ ಸದಸ್ಯೆಯಾಗಿ, ಬ್ಯಾಂಕ್ ಗಳ  ಕುಟುಂಬ ಪಿಂಚಣಿ ದಾರರ ಸಮಸ್ಯೆಗೆ  ಪರಿಹರಿಸಿದ  ಹೋರಾಟಗಾರರಲ್ಲೊಬ್ಬ  ಮಹಿಳೆ! ಎಐಬಿಆರ್ ಎಫ್ ಮಹಿಳಾ ವಿಭಾಗದ ಸಾಮಾಜಿಕ ಚಟುವಟಿಕೆಗಳಲ್ಲಿ  ಭಾಗವಹಿಸಿದ  ಸಾಧಕಿ! ಬೆಂಗಳೂರು ಡಿವಿಜಿ ರಸ್ತೆಯ ಸಾಯಿವೃಧ್ಧಾಶ್ರಮದಲ್ಲಿ ಸೇವೆ, 

ರಾಗಿಗುಡ್ಡದಲ್ಲಿನ ಬೆಳಕು ವೃದ್ಧ ಮಹಿಳೆಯರ ಆರೈಕೆ  ಕೇಂದ್ರಕ್ಕೆ ಭೇಟಿ, ಓಂ ಆಶ್ರಮ, ತೀಥಾ೯ಶ್ರಮ, ಮನೋನಂದ ಮಾನಸಿಕ  ವಿಕಲಚೇತನರ  ಕೇಂದ್ರ, ನೆಮ್ಮದಿ ಮನೆಯ ಬಾಲಕಿಯರ ಅನಾಥಾಶ್ರಮ, ವೃಧ್ಧಾಶ್ರಮ, ಬಾಲಮನೋವಿಕಾಸ  ಕೇಂದ್ರ  ಮಾನಸಿಕ ವಿಕಲಚೇತನರಿಗೆ ಚಿತ್ರ ಕಲಾ  ಸ್ಪಧೆ೯, ರಸಪ್ರಶ್ನೆ, ಚಿಂದಿ ಆಯುವ ಮಕ್ಕಳಿಗೆ ಶಿಕ್ಷಣ, ಅಂಧ ವಧುವರರ ವಿವಾಹ  ಸಮಾರಂಭದಲ್ಲಿ ದಾನ  ಧಮ೯, ಕೊಡಗು ಮತ್ತು ಕೇರಳದ  ಪ್ರವಾಹ ಪೀಡಿತರಿಗೆ  ಸಹಾಯ, ಮನುಕುಲ ಅನಾಥಾಶ್ರಮದ  ಕೈದಿಗಳಿಗೆ  ಹಣವನ್ನು ದಾನ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ, ಗೃಹ ವಾಸಿಗಳಿಗೆ ಅಗತ್ಯ ವಸ್ತುಗಳ ಸಹಾಯ, ವಿಜಯನಗರ  ಜ್ಞಾನ ಜ್ಯೋತಿ ಅಂಧ  ಮಕ್ಕಳಿಗೆ ಭೇಟಿ ಮತ್ತು  ಸಿಧ್ಧ ಉಡುಪುಗಳ ಸಹಾಯ, ಹಾಗೂ ಜೆಪಿನಗರದ ವೃದ್ಧಾಶ್ರಮಕ್ಕೆ ಭೇಟಿ, ಮತ್ತು ರಸಪ್ರಶ್ನೆ ನಡೆಸಿದ್ದು, ಬೆಂಗಳೂರಿನ  ಉತ್ತರಹಳ್ಳಿಯಲ್ಲಿ, ಮಕ್ಕಳಿಗೆ ಸಹಾಯ, ಕೈದಿಗಳಿಗೆ  ಅಗತ್ಯ  ವಸ್ತುಗಳನ್ನು  ವಿತರಿಸಿದ್ದಕ್ಕೆ ಬ್ಯಾಂಕ್ ಸ್ವಯಂ ನಿವೃತ್ತರಿಂದ ಹಣ ಸಹಾಯ ಪಡೆದು, ಅದರಲ್ಲಿ ಭಾಗವಹಿಸಿ, ಸೇವೆ ಸಲ್ಲಿಸಿದ್ದಾರೆ. 

 

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ವಿದ್ಯಾಥಿ೯ಗಳಿಗೆ ಟ್ಯೂಷನ್, ಅದರಲ್ಲೂ 7ನೇ ತರಗತಿಯಿಂದ 10 ನೇ ತರಗತಿ ವಿದ್ಯಾಥಿ೯ಗಳಿಗೆ ಹಿಂದಿ ಮತ್ತು ಇಂಗ್ಲೀಷ್, ಅಥ೯ಶಾಸ್ತ್ರದ ಬೋಧನೆ ಮಾಡುತ್ತಿದ್ದಾರೆ.  


ಅಖಿಲ  ಭಾರತ ಪ್ರಗತಿಪರ ವೇದಿಕೆಯ  ಸದಸ್ಯೆ, (ಎಐಬಿಆರ್ ಎಫ್ ಕನಾ೯ಟಕ  ವಿಭಾಗ) ಭಜನಾ ಮಂಡಳಿ ಸದಸ್ಯೆ, ರೆಡ್ ಕ್ರಾಸ್ ಸೊಸೈಟಿ ಆಫ್ ಇಂಡಿಯಾ ಸದಸ್ಯೆ, ಬೆಂಗಳೂರಿನ ಇಂಗ್ಲೀಷ್ ಕವನದ ಸದಸ್ಯೆ, ಪ್ರಸ್ತುತ ಎಐಬಿಐ ಆರ್ ಎಫ್ ನ ಕನಾ೯ಟಕ ವಿಭಾಗದ ಪದಾಧಿಕಾರಿಗಳ  ತಂಡದಲ್ಲಿ ಉಪಾಧ್ಯಕ್ಷೆ! ಅನೇಕ ಚಟುವಟಿಕೆಗಳು, ಇವರಿಂದ ಜರುಗುತ್ತದೆ.


ದೇಹದಾನ  ನೊಂದಾಯಿಸಿದ ಮಹಿಳೆ, ಮಲ್ಲೇಶ್ವರ  ಹಿರಿಯ ನಾಗರಿಕರ ಸಂಘದ ಸದಸ್ಯೆ, ಅಥ೯ಶಾಸ್ತ್ರ ರಾಜಕೀಯ ವಿಷಯಗಳ ವಿಶ್ಲೇಷಣೆಯಲ್ಲಿ  ಆಸಕ್ತಿ.ಕವನ ರಚನೆ, ಕನಾ೯ಟಕ ಸಂಗೀತದಲ್ಲಿ ಆಸಕ್ತಿ, ಸಕಲ ಜನರ  ಹಿತ ಬಯಸುವ ಬಹುಶ್ರುತ ಸಾಧಕಿ!  


ಮಲ್ಲೇಶ್ವರದಲ್ಲಿ ವಾಸಿಸುತ್ತಿದ್ದು, ಅನೇಕ  ಸಾಮಾಜಿಕ, ಧಾರ್ಮಿಕ, ಕಾಯ೯ಕ್ರಮದಲ್ಲಿ ಭಾಗವಹಿಸುವ, ಬಿಡುವಿಲ್ಲದ ಸಮಾಜ  ಸೇವಕಿ!!!



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top