ಹುನಗುಂದ: 30 ವರ್ಷಗಳ ಹಿಂದೆ ಸರ್ಕಾರಿ ಪ್ರೌಢಶಾಲೆ ಮರೋಳದಲ್ಲಿ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಗಂಜಿಹಾಳ ಅವರಿಗೆ ಸಹೋದ್ಯೋಗಿಗಳಾಗಿದ್ದ ಬಿ.ಎಸ್. ಕಲ್ಹೊಲ, ಎಚ್.ಟಿ. ಬಾಳಕ್ಕನವರ, ಎಂ.ಎಸ್. ಮೇಟಿ ದಂಪತಿಗಳು ಮತ್ತು ಚಿತ್ರಕಲಾ ಶಿಕ್ಷಕ ಎಸ್.ಎಸ್. ಹೊದ್ಲೂರ ಇವರುಗಳು ಬೀಳ್ಕೊಡುಗೆ ಸತ್ಕಾರ ಆಯೋಜಿಸಿದ್ದರು.
ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮದಲ್ಲಿ ಮರೋಳದ ಎಲ್ಲ ಗೆಳೆಯರು ಸೇರಿಕೊಂಡು ಮಲ್ಲಿಕಾರ್ಜುನ ಅವರಿಗೆ ಸತ್ಕರಿಸುವುದರೊಂದಿಗೆ ಇಡೀ ದಿನ ವೃತ್ತಿ ಬದುಕಿನ ಮತ್ತು ಸಂಸಾರದ ಸಿಹಿ-ಕಹಿ ಘಟನೆಗಳ ವಿನಿಮಯ ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು.
ಪ್ರೀತಿಯಿಂದ ಸತ್ಕರಿಸಿದ ಅವರಿಗೆಲ್ಲ ಹೃದಯಪೂರ್ವಕ ಅಭಿನಂದನೆಗಳನ್ನು ನಿವೃತ್ತ ಶಿಕ್ಷಕ ಸಿದ್ದಲಿಂಗಪ್ಪ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ