ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಡಾ ಚೂಂತಾರು

Upayuktha
0


ಮಂಗಳೂರು: ವಿಶ್ವ ಪರಿಸರ ದಿನವನ್ನು ಇಂದು (ಭಾನುವಾರ) ಮಹಾತ್ಮನಗರ ಬೋಂದೇಲ್ ಪರಿಸರದಲ್ಲಿ ಆಚರಿಸಲಾಯಿತು. ಗ್ರಹ ರಕ್ಷಕದಳದ ಸಮಾದೇಷ್ಟ  ಡಾ ಮುರಲೀ ಮೋಹನ್ ಚೂಂತಾರು  ಹಾಗೂ ಇಲಾಖೆಯ ಸಿಬ್ಬಂದಿಗಳು ಆಗಮಿಸಿದ್ದರು. ಮಹಾತ್ಮನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮಚಂದ್ರ ಭಟ್ಟ, ಪರಿಸರವಾದಿ ಕೃಷ್ಣಪ್ಪ ಅವರು ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿದರು. 


ಡಾ ಮುರಲೀಮೋಹನ ಚೂಂತಾರು ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವನ ಮಹೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಗಿಡ ನೆಟ್ಟರೆ ಸಾಲದು, ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದು ಡಾಚೂಂತಾರು ನುಡಿದರು.


ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರದ ಪದಾಧಿಕಾರಿಗಳಾದ ವಸಂತಿ ಕಾಮತ್,ಸಂಗಡಿಗರು, ಪೃಥ್ವಿ ಸ್ವಯಂ ಸೇವಕ ಸದಸ್ಯರಾದ ಲೋಲಾಕ್ಷಿ  ಫರ್ನಾಂಡಿಸ್, ಅಲ್ಬೆನ್, ಪ್ರಕಾಶ್, ಅಕ್ಶಯ್ , ಸಂಗಡಿಗರು, ಕೆ ಹಚ್ ಬಿ ಸದಸ್ಯರಾದ ಬಿ ಎಂ ಅಚಾರ್ಯ, ಮಾಜಿ ಯೋಧ ಪ್ರವೀಣ,  ಸಂತೋಷ್ ಮಹಾತ್ಮನಗರ ಬಡಾವಣೆಯ ಪ್ರಮೀಳ, ರವಿ, ಪ್ರಸನ್ನ, ಸುಭಾಷ್, ಪ್ರಾಪ್ತಿ ಭೂಮಿ, ಸಚೀದೇವಿ  ಬಿ ವಿ ಜಯರಾಮ್ ಮತ್ತು ಹತ್ತಕ್ಕಿಂತ ಹೆಚ್ಚು  ಮಕ್ಕಳು 50 ಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. ಸುಪ್ರೀಮ್ ಮೋಟಾರ್ ನ ಪ್ರಕಾಶ್ ಉಪಾಹಾರದ ಪ್ರಾಯೋಜಕತ್ವ ವಹಿಸಿದ್ದರು.


ಲೋಹಿತ್ ಅಮೀನ್, ಗಿಡಗಳನ್ನು ಅರಣ್ಯ ಇಲಾಖೆಯಿಂದ ಒದಗಿಸಿ ಜೆ ಸಿ ಬಿ ಮೂಲಕ  ಇಂಗು ಗುಂಡಿ,ಹಾಗೂ ಗಿಡ ನೆಡುವ  ಗುಂಡಿಯ ವ್ಯವಸ್ಥೆ ಮಾಡಿದ್ದರು. ಪರಿಸರವಾದಿ ಕೃಷ್ಣಪ್ಪ ಒದಗಿಸಿದ ಸಸ್ಯ ಸಂರಕ್ಷಣೆಯ ಅನೇಕ ಫಲಕ ಹಾಗೂ ಭಿತ್ತಿಪತ್ರ ಪತ್ರದ ಮೂಲಕ  ಮಕ್ಕಳು ಹಾಗೂ ಪಾಲ್ಗೊಂಡಿದ್ದ ಜನರಲ್ಲಿ ಪರಿಸರ ಕಾಳಜಿ ಮತ್ತು ಜಾಗ್ರೃತಿ ಮೂಡಿಸಲಾಯಿತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top