ಪುತ್ತೂರು: ವೃತ್ತಿಪರ ಕೋರ್ಸ್ ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ-2024ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿಂಧ್ಯಾ ಕಾರಂತ್ (ಪುತ್ತೂರಿನ ಪ್ರೊ. ಕೃಷ್ಣ ಕಾರಂತ್ ಹಾಗೂ ಸಂಧ್ಯಾ ಕಾರಂತ್ ದಂಪತಿಗಳ ಪುತ್ರಿ) ಇಂಜಿನಿಯರಿಂಗ್ ನಲ್ಲಿ 550ನೇ ರಾಂಕ್ ಗಳಿಸಿದ್ದಾರೆ. ಗಮನಗೌರಿ ಎಸ್.ಎಂ. (ಬೆಳ್ತಂಗಡಿ ತಾಲೂಕಿನ ಮಹೇಶ್.ಎಸ್. ಹಾಗೂ ದೀಪಾ ಮಹೇಶ್ ದಂಪತಿಗಳ ಪುತ್ರಿ) ಇಂಜಿನಿಯರಿಂಗ್ ನಲ್ಲಿ 743ನೇ ರಾಂಕ್ ಗಳಿಸಿದ್ದಾರೆ. ಕೈಝನ್ ಎಸ್. (ವಿಟ್ಲದ ಸೂರ್ಯನಾರಾಯಣ ಎನ್.ಕೆ. ಹಾಗೂ ಸುಮನಾ ಎಸ್.ಎನ್ ದಂಪತಿಗಳ ಪುತ್ರ) ಇಂಜಿನಿಯರಿಂಗ್ ನಲ್ಲಿ 1017 ನೇ ರಾಂಕ್, ಶಮಂತ್ ಕುಮಾರ್ ಕೆ. (ಸುಳ್ಯ ತಾಲೂಕಿನ ಕೆ. ಚಂದ್ರಶೇಖರ ಉಪಾಧ್ಯಾಯ ಹಾಗೂ ವೀಣಾ ಕೆ. ಇವರ ಪುತ್ರ) ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 1196, ಇಂಜಿನಿಯರಿಂಗ್ ನಲ್ಲಿ 2809ನೇ ರಾಂಕ್, ಯುಕ್ತಾ ವಿ.ಜಿ. (ರಾಮಕುಂಜದ ವಿಜಯ ವಿಕ್ರಮ ಜಿ. ಹಾಗೂ ಸುನೀತಾ ಎಮ್.ಕೆ ಇವರ ಪುತ್ರಿ) ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ (BNYS) 1204, ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 1707 ಹಾಗೂ ವೆಟರ್ನರಿಯಲ್ಲಿ 2032, ಬಿಎಸ್ಸಿ ನರ್ಸಿಂಗ್ ನಲ್ಲಿ 2033, ಬಿ ಫಾರ್ಮಾ ಮತ್ತು ಫಾರ್ಮಾ ಡಿಯಲ್ಲಿ 2705 ನೇ ರಾಂಕ್, ಸೌಮ್ಯ ಕೆ. (ಪುತ್ತೂರಿನ ಸುರೇಶ್ ಕೆ. ಹಾಗೂ ಗಾಯತ್ರಿ ಸುರೇಶ್ ಇವರ ಪುತ್ರಿ) ಇಂಜಿನಿಯರಿಂಗ್ ನಲ್ಲಿ 1207ನೇ ರಾಂಕ್, ಎನ್. ಶ್ರೀರಾಮ್ ರಾವ್ (ಪಾಣೆಮಂಗಳೂರಿನ ರಮೇಶ್ ರಾವ್.ಎನ್ ಹಾಗೂ ಅನುಪಮಾ ರಾವ್ ದಂಪತಿಗಳ ಪುತ್ರ) ಇಂಜಿನಿಯರಿಂಗ್ ನಲ್ಲಿ 1898ನೇ ರಾಂಕ್, ಅದಿತಿ ಕೆ. (ಪುತ್ತೂರಿನ ದರ್ಬೆಯ ಕೆ. ಶಂಕರ್ ಹಾಗೂ ವಂದನಾ ಶಂಕರ್ ದಂಪತಿಗಳ ಪುತ್ರಿ) ಇಂಜಿನಿಯರಿಂಗ್ ನಲ್ಲಿ 2094ನೇ ರಾಂಕ್, ಭೂಮಿಕಾ ಕೆ. ಕೊಟ್ಟಾರಿ (ಕಲ್ಲಡ್ಕದ ಕಮಲಾಕ್ಷ ಹಾಗೂ ಶ್ವೇತಾ ದಂಪತಿಗಳ ಪುತ್ರಿ) ಇಂಜಿನಿಯರಿಂಗ್ ನಲ್ಲಿ 2690, ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 2454ನೇ ರಾಂಕ್, ಇಂದುಶ್ರೀ (ಕೆದಿಲದ ಕೆ. ವೆಂಕಟಕೃಷ್ಣ ಹಾಗೂ ಸುಜಾತಾ ಇವರ ಪುತ್ರಿ) ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ (BNYS) 2583 ಹಾಗೂ ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 2981ನೇ ರಾಂಕ್, ಆದರ್ಶ ಇ (ಕೆದಿಲದ ಗಿರೀಶ್ ಕೆ ಹಾಗೂ ಉಷಾ ಸರಸ್ವತಿ ಇವರ ಪುತ್ರ) ಇಂಜಿನಿಯರಿಂಗ್ ನಲ್ಲಿ 2633ನೇ ರಾಂಕ್, ಅಂಕಿತಾ ಡಿ. (ಕಬಕದ ದಾಮೋದರ ಮತ್ತು ಉಷಾ ದಂಪತಿಗಳ ಪುತ್ರಿ) ಇಂಜಿನಿಯರಿಂಗ್ ನಲ್ಲಿ 2951ನೇ ರಾಂಕ್, ಪ್ರಧಾನ್ ಎಮ್.ಎನ್. (ಬೆಳ್ಳಾರೆಯ ನಾರಾಯಣ ಬಾಳಿಲ ಹಾಗೂ ಕಲಾವತಿ ಎಲ್ ದಂಪತಿಗಳ ಪುತ್ರ) ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 3224ನೇ ರಾಂಕ್, ನಿಶ್ಚಯ್ ರೈ (ಕಡಬದ ಅಡ್ಕಾರ್ ಉಮೇಶ್ ರೈ ಮತ್ತು ಸುನಿತಾ ರೈ ದಂಪತಿಗಳ ಪುತ್ರ) ಇಂಜಿನಿಯರಿಂಗ್ ನಲ್ಲಿ 4104ನೇ ರಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.
1. ವಿಂಧ್ಯಾ ಕಾರಂತ್
2. ಗಮನ ಗೌರಿ ಎಸ್. ಎಮ್.
3. ಕೈಝನ್
4. ಶಮಂತ್ ಕುಮಾರ್ ಕೆ.
5. ಯುಕ್ತಾ ವಿ. ಜಿ.
6. ಸೌಮ್ಯ ಕೆ.
7. ಎನ್. ಶ್ರೀರಾಮ್ ರಾವ್
8. ಅದಿತಿ ಕೆ.
9. ಭೂಮಿಕಾ ಕೆ. ಕೊಟ್ಟಾರಿ
10. ಇಂದುಶ್ರೀ
11. ಆದರ್ಶ್ ಇ.
12. ಅಂಕಿತಾ ಡಿ.
13. ಪ್ರಧಾನ್ ಎಮ್. ಎನ್.
14. ನಿಶ್ಚಯ್ ರೈ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ