ಬೆಂಗಳೂರು: ಶ್ರೀ ಗುರುರಾಘವೇಂದ್ರ ಸೇವಾ ಸಮಿತಿಯು ಪವನ ಪರಿಮಳ ಪ್ರಸಾರಿಣೀ ಸಮಿತಿಯ ನೆರವಿನೊಂದಿಗೆ ಕಳೆದ ಹನ್ನೆರಡು ವರ್ಷಗಳಿಂದ ಪ್ರಕಾಶನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿವಿಧ ಪಂಡಿತರುಗಳಿಂದ ಜರುಗಿಸುತ್ತಿದ್ದ ಮಹಾಭಾರತ ಪ್ರವಚನದ ಮಹಾ ಮಂಗಳೋತ್ಸವದ ಪ್ರಯುಕ್ತ ದಿನಾಂಕ 10-6-2024, ಸೋಮವಾರದಂದು ಸಂಜೆ 5-00 ಗಂಟೆಗೆ ಪ್ರಕಾಶನಗರದ ಮುಖ್ಯರಸ್ತೆಯಲ್ಲಿ (ರಾಯರ ಮಠದ ಸುತ್ತ) ವಾದ್ಯಘೋಷ, ವೇದಘೋಷ ಮತ್ತು ಭಜನಾ ಮಂಡಳಿಗಳ ಗಾಯನದೊಂದಿಗೆ "ಮಹಾಭಾರತ ಗ್ರಂಥ"ದ ಮೆರವಣಿಗೆಯನ್ನು ಏರ್ಪಡಿಸಲಾಗಿದೆ ಮತ್ತು ಅದೇ ದಿನ ಸಂಜೆ 6-30 ರಿಂದ 8-00 ಗಂಟೆಯವರೆಗೆ ಶ್ರೀಮಠದಲ್ಲಿ ಮಹಾಭಾರತ ವ್ಯಾಖ್ಯಾನ ಮಾಲಿಕೆಯಲ್ಲಿ ನಾಡಿನ ಪ್ರಸಿದ್ಧ ವಿದ್ವಾಂಸರುಗಳಾದ ಪಂ|| ವಿದ್ಯಾಧೀಶಾಚಾರ್ಯ ಗುತ್ತಲ್ ಮತ್ತು ಪಂ|| ಕರಣಂ ವಾದಿರಾಜಚಾರ್ಯ ಭಾಗವಹಿಸಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ