ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ರಾಜಾಜಿನಗರದ ಬಾಲಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಜೂನ್ 4 ರಿಂದ 7ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ : (ಪ್ರತಿದಿನ ಸಂಜೆ 6 ರಿಂದ 7), ಜೂನ್ 4 : ಶ್ರೀ ವಾಸವಿ ಮಹಿಳಾ ಮಂಡಲಿ, ಜೂನ್ 5 : ಆರ್ಯವೈಶ್ಯ ಮಹಿಳಾ ಮಂಡಲಿ, ಜೂನ್ 6 : ಆರ್ಯಪುತ್ರಿ ಮಹಿಳಾ ಮಂಡಲಿ.
ಪ್ರವಚನ ಕಾರ್ಯಕ್ರಮ : (ಪ್ರತಿದಿನ ಸಂಜೆ 7 ರಿಂದ 8). ಪ್ರವಚನಕಾರರು :
ಮ|| ಶಾ|| ಸಂ|| ಶ್ರೀ ರಾಮವಿಠಲಾಚಾರ್. ವಿಷಯ : "ಶ್ರೀಮದ್ಭಾಗವತ".
ಜೂನ್ 7, ಶುಕ್ರವಾರ : (ಸಂಜೆ 6-30 ರಿಂದ 8-00) "ಹರಿನಾಮ ಸಂಕೀರ್ತನೆ" : ಗಾಯನ : ಕು|| ಸಿ. ಆರ್. ವೈಷ್ಣವಿ, ಪಿಟೀಲು : ಅಭಯ್ ಸಂಪಿಗೆತಯ ಮೃದಂಗ : ಶ್ರೀ ಜಿ. ಲೋಕಪ್ರಿಯ. ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನ, 10ನೇ ಮುಖ್ಯರಸ್ತೆ, ಡಿ ಬ್ಲಾಕ್, 2ನೇ ಹಂತ, ರಾಜಾಜಿನಗರ, ಬೆಂಗಳೂರು-560010
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಅವರು ವಿನಂತಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ