ಮಾಜಿ ಸಮಾದೇಷ್ಟ ಡಾ|| ವಿದ್ಯಾಧರ ಶೆಟ್ಟಿ ಮತ್ತು ಗೃಹರಕ್ಷಕ ಪ್ರಕಾಶ್ ಗೆ ಶ್ರದ್ಧಾಂಜಲಿ ಸಭೆ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮಾಜಿ ಸಮಾದೇಷ್ಟರಾದ ಡಾ|| ವಿದ್ಯಾಧರ ಶೆಟ್ಟಿ  ಇವರು ಮತ್ತು ಪಣಂಬೂರು ಘಟಕದ, ಗೃಹರಕ್ಷಕರಾದ ಪ್ರಕಾಶ್ ಮೆ.ನಂ 212 ಇವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿರುತ್ತಾರೆ. ಇವರುಗಳ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ಇಂದು ಗುರುವಾರ ಬೆಳಿಗ್ಗೆ 11.00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. 


ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಡಾ|| ವಿದ್ಯಾಧರ ಶೆಟ್ಟಿ ಇವರು 1998ರಲ್ಲಿ  ಗೃಹರಕ್ಷಕ ದಳದ ಸಮಾದೇಷ್ಟರ ಹುದ್ದೆಯಿಂದ ನಿವೃತ್ತಿಹೊಂದಿರುತ್ತಾರೆ. ಅವರ  ಮರಣದಿಂದ ಗೃಹರಕ್ಷಕ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಈ ನೋವನ್ನು ಮರೆಯುವ ಶಕ್ತಿಯನ್ನು ಆ ದೇವರು ಕರುಣಿಸಲೆಂದು ನಾವೆಲ್ಲರೂ ಪ್ರಾರ್ಥಿಸೋಣವೆಂದು ನುಡಿದರು. ಪಣಂಬೂರು ಘಟಕದ ಗೃಹರಕ್ಷಕ ಪ್ರಕಾಶ್ ಇವರು ಬಹಳ ಪ್ರಾಮಾಣಿಕ, ನಿಷ್ಟಾವಂತ ಮತ್ತು ದಕ್ಷ ಗೃಹರಕ್ಷಕರಾಗಿದ್ದರು. 


ಗೃಹರಕ್ಷಕ ದಳದ ಸದಸ್ಯರಾಗಿರುವ ದಿವಂಗತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವನ್ನು ದೊರಕಿಸಿಕೊಡುವುದಾಗಿ ನುಡಿದರು. ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕರಾದ  ಬಿ.ಎನ್. ಗೋಪಿನಾಥ್, ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರಾ, ಸುಬ್ರಹ್ಮಣ್ಯ ಘಟಕದ ಘಟಕಾಧಿಕಾರಿ ಹರಿಶ್ಚಂದ್ರ, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ  ಸುನಿಲ್ ಕುಮಾರ್, ಗೃಹರಕ್ಷಕರಾದ ಕುಮಾರಸ್ವಾಮಿ, ಸಂಜಯ್, ವಿಜೇಂದ್ರ, ಜ್ಞಾನೇಶ್, ಬಾಷಾ, ಆಶಾ, ಸುಲೋಚನಾ ಮುಂತಾದವರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top