ಆಳ್ವಾಸ್ ಶಾಲೆಯಲ್ಲಿ ವಿಶ್ವ ತೇವಭೂಮಿ ದಿನ ಆಚರಣೆ

Upayuktha
0

ಪ್ಲಾಸ್ಟಿಕ್ ಬಳಕೆ ಮಿತಗೊಳಿಸಿ, ಪರಿಸರ ಬೆಳೆಸಿ: ಡಾ ಟಿ. ವಿ. ರಾಮಚಂದ್ರ


ವಿದ್ಯಾಗಿರಿ
: ‘ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ, ಪರಿಸರ ಹಸಿರು ಹೆಚ್ಚಿಸಿ’ ಎಂದು ಇಂಧನ ಮತ್ತು ಜೌಗು ಪ್ರದೇಶ ಸಂಶೋಧನಾ ತಂಡದ ಸಂಯೋಜಕ, ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನದ ವಿಜ್ಞಾನಗಳ ಕೇಂದ್ರ (ಸಿಇಎಸ್) ದಲ್ಲಿನ ಪರಿಸರ ಮಾಹಿತಿ ವ್ಯವಸ್ಥೆಯ (ಇಎನ್‍ವಿಐಎಸ್) ಸಂಚಾಲಕ ಡಾ ಟಿ. ವಿ. ರಾಮಚಂದ್ರ ಹೇಳಿದರು. 




ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಆವರಣದಲ್ಲಿ  ಗುರುವಾರ ‘ವಿಶ್ವ ತೇವಭೂಮಿ ದಿನ -2024’ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು .



ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವುದರಿಂದ ಜನರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ, ಸಾಧ್ಯವಾದಷ್ಟು ಪಾಲಿಥಿನ್ ಚೀಲಗಳ ಬಳಕೆಯನ್ನು ನಿಲ್ಲಿಸಬೇಕು. ತಮ್ಮ   ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು  ಎಲ್ಲ ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದರು. 



ಮುಂದಿನ 16ನೇ ಕೆರೆ (ಲೇಕ್) ಸಮ್ಮೇಳನದ ಸ್ವಚ್ಛತಾ ಕಾರ್ಯವನ್ನು ಆಳ್ವಾಸ್ ಆಳ್ವಾಸ್‍ನಲ್ಲಿ ನಡೆಸಲಾಗುತ್ತಿದ್ದು, ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ.   ಚಿತ್ರಕಲೆಯ ಸ್ಪರ್ಧೆಯನ್ನು ನಡೆಸುತ್ತಿದ್ದೇವೆ. ನನ್ನ ದೇಶದ ಪ್ರತಿಯೊಂದು ಮಗು ಉಜ್ವಲವಾಗಬೇಕು ಮತ್ತು ಪ್ರತಿ ಮಗು ಪರಿಸರ ಸಾಕ್ಷರಾಗಿರಬೇಕು ಎಂದು ಉದ್ದೇಶವನ್ನು ಇಟ್ಟುಕೊಂಡಿರಬೇಕು ಎಂದರು.



ಮುಂಬರುವ ಪೀಳಿಗೆಗೆ ಈ ರೀತಿಯ ಪರಿಸರ ಕಾಳಜಿ ವಿಷಯಗಳ ಬಗ್ಗೆ    ಶಿಕ್ಷಣ ನೀಡಬೇಕು. ಇಂದಿನ ಮಕ್ಕಳು ನಮ್ಮ ದೇಶದ ಪ್ರಗತಿಗೆ ಸಹಕರಿಸುವ ಮತ್ತು ಪರಿಸರ ನಿರ್ಮಾಣಕ್ಕೆ  ಅಮೂಲ್ಯ ಕೊಡುಗೆಯನ್ನು ನೀಡುವಂತವರಾಗಬೇಕು. ಜ್ಞಾನವುಳ್ಳವರು, ಸಂವೇದನಾಶೀಲರು ಮತ್ತು ಜವಾಬ್ದಾರರು  ರಾಷ್ಟ್ರವನ್ನು ನೋಡಿಕೊಳ್ಳುತ್ತಾರೆ. ನಾವು ನಮ್ಮ ದೇಶದ ಬಗ್ಗೆ ಹೆಮ್ಮೆಪಡುತ್ತೇವೆ ಎಂದರು.



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ  ಮಾತನಾಡಿ, ಬಾಲ್ಯದಲ್ಲಿ  ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಕ, ಪೆÇಲೀಸ್ ಆಗಬೇಕು ಎಂಬ ಆಸೆ  ವ್ಯಕ್ತ ಪಡಿಸುತ್ತಾರೆ. ಅಲ್ಲಿ ಯಾವುದೇ ನಿಶ್ಚಿತ ಗುರಿ ಇರುವುದಿಲ್ಲ. ಪದವಿ ಶಿಕ್ಷಣದ ಸಮಯದಲ್ಲಿ ಬಹುತೇಕ  ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೆ . ಅವರು ಯೌವನಕ್ಕೆ ಬಂದಾಗ ಆ ಗುರಿಯು ಒಂದು ಪೂರ್ಣತೆಯನ್ನು ಪಡೆಯುತ್ತದೆ ಎಂದರು .



ದೈನಂದಿನ ಚಟುವಟಿಕೆಯಲ್ಲಿ ನಾವು ಬಳಸುವ ಪ್ರತಿ ವಸ್ತುವಿನ ಹಿಂದೆ ವಿಜ್ಞಾನಿ ಮತ್ತು ಸಂಶೋಧಕರ ಆವಿಷ್ಕಾರದ ಪರಿಶ್ರಮವಿದೆ. ನೀರಿನ ಸಂರಕ್ಷಣೆಯಲ್ಲಿ  ವಿಜ್ಞಾನಿಗಳ  ಪಾತ್ರ ದೊಡ್ಡದು ಎಂದರು. 



ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ಕೆರೆ ಸ್ವಚ್ಛತಾ ಸಮಾವೇಶ ಎನ್ನುವ ಪರಿಕಲ್ಪನೆಯನ್ನು ಕರ್ನಾಟಕದ ಪ್ರತಿ ಶಾಲೆಯಲ್ಲಿ ಆಯೋಜಿಸಲು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸುತ್ತಿದೆ ಎಂದರು. 



ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಕೆರೆ ಸಮ್ಮೇಳನದಲ್ಲಿ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಆಳ್ವಾಸ್ ಶಾಲೆಯವರಾಗಿರಬೇಕು ಎಂದರು. 



ಕಾರ್ಯಕ್ರಮದಲ್ಲಿ ಡಾ.ಟಿ.ವಿ.ಆರ್ ಅವರ ಪತ್ನಿ ನಾಗರತ್ನ, ಆಳ್ವಾಸ್ ಕೇಂದ್ರೀಯ ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ಶಫಿ ಶೇಖ್, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ ದತ್ತಾತ್ರೇಯ, ಡಾ.ವಿನಯ್ ಶಿವಮುರಳಿ, ಆಳ್ವಾಸ್ ಕೇಂದ್ರೀಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಾನೆಟ್ ಪೈಸ್, ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಮಾ ರೂಫಸ್ ಇದ್ದರು. ಶಿಕ್ಷಕಿ ಶುಭಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top