ಮುಳಿಯಾರು: ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಸ್ಕಂದ ನಿನಾದ ಸಂಗೀತ ಶಾಲೆ ಮತ್ತು ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಪಾಠಶಾಲೆಯ ಸಹಯೋಗದಲ್ಲಿ ತ್ಯಾಗರಾಜ ಆರಾಧನೆ ಸಂಪನ್ನವಾಯಿತು.
ಸಂಗೀತ ವಿದುಷಿಯರಾದ ಉಷಾ ಈಶ್ವರಭಟ್, ಜಯಲಕ್ಷ್ಮಿ ಯಸ್ ಭಟ್ ಮತ್ತು ಪಾಠಶಾಲೆಯ ಶಿಷ್ಯರು ಕಾರ್ಯಕ್ರಮ ನಡೆಸಿಕೊಟ್ಟರು. ಆರಾಧನೆಯ ಅಂಗವಾದ ಸದ್ಗುರು ತ್ಯಾಗರಾಜ ಸ್ವಾಮಿಗಳ ಘನಪಂಚರತ್ನ ಕೀರ್ತನಾಲಾಪನೆಯನ್ನು ಪ್ರಸ್ತುತಪಡಿಸಲಾಯಿತು.
ಪಕ್ಕವಾದ್ಯದಲ್ಲಿ ಪಿಟೀಲಿನಲ್ಲಿ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ ಶ್ರೀಧರ ಭಟ್ ಬಡಕ್ಕೇಕರೆ, ಘಟಂ ಇದರಲ್ಲಿ ವಿದ್ವಾನ್ ಬಿ ಜಿ ಈಶ್ವರ ಭಟ್ ಇವರು ಸಹಕಾರ ನೀಡಿದರು.
ಹಾಡುಗಾರಿಕೆಯಲ್ಲಿ ಉಷಾ ಈಶ್ವರ ಭಟ್,ಜಯಲಕ್ಷ್ಮಿ ಎಸ್ ಭಟ್, ಡಾ. ಮಾಯಾ ಮಲ್ಯ, ಡಾ. ಶಾರ್ವರಿ ಭಟ್, ಪ್ರಕಾಶ್ ಆಚಾರ್ಯ, ಉಷಾ ರವಿಶಂಕರ್, ಪ್ರೀತಾ ಸಜಿತ್, ಅರ್ಚನಾ ಶೆಣೈ, ಗೋಪಿ ಚಂದ್ರನ್, ಕುಮಾರಿ ಸಮನ್ವಿತಾ ಗಣೇಶ್, ಪುಷ್ಪಾ ಇವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತಾರ್ಚನೆಯು ಜರಗಿತು.
ಕ್ಷೇತ್ರದ ಅರ್ಚಕರಾದ ಶ್ರೀ ಅನಂತಪದ್ಮನಾಭ ಮಯ್ಯ ಇವರು ಸಮಾರಂಭ ಸಂಯೋಜನ ಮಾಡಿದರು. ಕ್ಷೇತ್ರ ಮೆನೇಜರ್ ಸೀತಾರಾಮ ಬಳ್ಳುಳ್ಳಾಯ ಇವರು ಕಲಾವಿದರನ್ನು ಸತ್ಕರಿಸಿದರು.
ಗೋವಿಂದ ಬಳ್ಳಮೂಲೆ ಇವರು ತ್ಯಾಗರಾಜ ಆರಾಧನೆಯ ಮಹತ್ವದ ಬಗ್ಗೆ ವಿವರಿಸಿ ಧನ್ಯವಾದವಿತ್ತರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ