ಮಂಗಳೂರು: ಯಕ್ಷಗಾನಕ್ಕೆ ಜಾನಪದೀಯ - ಪಾರಂಪರಿಕ ಸೊಗಡಿದೆ. ಅದನ್ನು ಬೆಳೆಸಲು ಹಿಂದಿನವರು ಬಹಳ ಪ್ರಯತ್ನಿಸಿದ್ದಾರೆ. ಅದನ್ನು ಉಳಿಸಿ ಬೆಳೆಸುವಲ್ಲಿ ದಿ.ಲಕ್ಮೀನಾರಾಯಣ ಅಲೆವೂರಾಯರಂತಹಾ ಕಲಾವಿದರು ಬಹಳ ಕೊಡುಗೆ ಕೊಟ್ಟಿದ್ದಾರೆ. ಅಂತಹವರ ಸಂಸ್ಮರಣೆ ಮಾಡುತ್ತಾ ಬರುತ್ತಿದ್ದಾರೆ ಅಲೆವೂರಾಯ ಸಹೋದರರು. ಏಳನೇ ಈ ವರ್ಷದಲ್ಲೂ ಹಿರಿಯರನ್ನು ಗೌರವಿಸುವ ಕಾರ್ಯ ಸ್ತುತ್ಯರ್ಹ. ಅದಕ್ಕೆ ನಮ್ಮ ಕಡೆಯಿಂದ ಸಂಪೂರ್ಣ ನೆರವು ನೀಡುತ್ತೇವೆ ಎಂದು ಶ್ರೀಕ್ಷೇತ್ರ ಶರವಿನ ಶಿಲೆಶಿಲೆ ಮೊಕ್ತೇಸರರಾದ ರಾಘವೇಂದ್ರ ಶಾಸ್ತ್ರಿಗಳು ಅಲೆವೂರಾಯ ಪ್ರತಿಷ್ಠಾನ ಏರ್ಪಡಿಸಿದ್ದ ಯಕ್ಷ ತ್ರಿವೇಣಿಯನ್ನು ಉದ್ಘಾಟಿಸುತ್ತಾ ನುಡಿದರು.
ಶ್ರೀಕ್ಷೇತ್ರ ಶರವು ಎಲ್ಲಾ ಕಾರ್ಯಕ್ರಮಗಳಿಗೆ ತವರು ಮನೆ, ಯಕ್ಷಗಾನ - ನಾಟಕ- ಸಿನಿಮಾವೇ ಮೊದಲಾದ ಕಾರ್ಯಕ್ರಮಕ್ಕೆ ಶುಭಾರಂಭಿಕ ಆಶ್ರಯ ತಾಣ. ಶಾಸ್ತ್ರಗಳು ತಾವೇ ಮುಂಚೂಣಿಯಲ್ಲಿ ನಿಂತು ಎಲ್ಲದಕ್ಕೂ ಮಾರ್ಗದರ್ಶನ ಮಾಡಿ ಹರಸುತ್ತಾರೆ. ಅವರ ಉದಾರತೆ, ಕಲೆಯ ಮೇಲಿನ ಪ್ರೀತಿ ಅಲೆವೂರಾಯ ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾರೆ. ಅವರನ್ನು ಅಭಿನಂದಿಸುತ್ತಾ, ಅವರನ್ನು ಸನ್ಮಾನಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಪ್ರತಿಷ್ಠಾನದ ಈ ಬಾರಿಯ ಮೊದಲ ದಿನದ ಕಾರ್ಯಕ್ರಮದಲ್ಲಿ ರಾಘವೇಂದ್ರ ಶಾಸ್ತ್ರಿಗಳನ್ನು ಸನ್ಮಾನಿಸುತ್ತಾ ಡಾ|| ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಶ್ರೀಸುಧಾಕರ ರಾವ್ ಪೇಜಾವರರು ಸ್ವಾಗತ ಪ್ರಸ್ತಾವನೆ ನಡೆಸಿದರು. ವರ್ಕಾಡಿ ಮಧುಸೂದನ ಅಲೆವೂರಾಯರ ಸನ್ಮಾನ ಪತ್ರ ವಾಚಿಸಿದರು. ಪೂರ್ಣಿಮಾ ಪ್ರಭಾಕರ ಪೇಜಾವರರು ಧನ್ಯವಾದವಿತ್ತರು. ಪೂರ್ಣಿಮಾ ಶಾಸ್ತ್ರಿ, ನ್ಯಾಯವಾದಿ ಗೋಪಾಲಕೃಷ್ಣ ಭಟ್, ಪ್ರಭಾಕರ ರಾವ್ ಪೇಜಾವರ ಹಾಗೂ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಸರಯೂ ಯಕ್ಷ ಬಳಗದಿಂದ ವೀರ ಕುಶ-ಲವ ಎಂಬ ಬಯಲಾಟ ಜರಗಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ