ಮಂಗಳೂರು/ ಉಡುಪಿ: ದೇಶದ ಪ್ರಮುಖ ಚಹಾ ಬ್ರ್ಯಾಂಡ್ ಆಗಿರುವ ಟಾಟಾ ಟೀ ಕಣ್ಣನ್ ದೇವನ್, ಸಂಕ್ರಾಂತಿಯ ಸಂದರ್ಭದಲ್ಲಿ 'ಮನೆ ಗಾಡಿ ಚಿನ್ನ' ಹಬ್ಬದ ಅಭಿಯಾನವನ್ನು ಘೋಷಿಸಿದೆ. ಈ ಅಭಿಯಾನದಡಿ ಕರ್ನಾಟಕದ ಗ್ರಾಹಕರು ಅದ್ಭುತ ಬಹುಮಾನಗಳನ್ನು ಗೆಲ್ಲಲು ಅವಕಾಶ ಇರುತ್ತದೆ.
ವಿಶೇಷ ಸಂಕ್ರಾಂತಿ ಆವೃತ್ತಿಯ ಪ್ಯಾಕ್ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಗ್ರಾಹಕರು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಪಡೆಯಬಹುದು. ಟಾಟಾ ಹ್ಯಾರಿಯರ್, ಚಿನ್ನದ ನಾಣ್ಯಗಳು ಮತ್ತು ಬೆಂಗಳೂರಿನಲ್ಲಿ ವಿಶಾಲವಾದ 2ಬಿಎಚ್ಕೆ ಅಪಾರ್ಟ್ಮೆಂಟ್ ಮುಂತಾದ ಬಹುಮಾನಗಳನ್ನು ಗೆಲ್ಲಲು ಅವಕಾಶವಿದ್ದು, ಇದು ಸಂಕ್ರಾಂತಿಗೆ ಸಂಬಂಧಿಸಿದ ಸಮೃದ್ಧಿಯ ಸಂಕೇತವಾಗಿರುತ್ತದೆ ಎಂದು ಭಾರತ ಮತ್ತು ದಕ್ಷಿಣ ಏಷ್ಯಾದ ಪ್ಯಾಕೇಜ್ಡ್ ಪಾನೀಯಗಳ ಅಧ್ಯಕ್ಷ ಪುನೀತ್ ದಾಸ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ಅಭಿಯಾನದಡಿ ಪ್ಯಾಕ್ ಮೇಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ, ಕಂಪನಿಯ ಸಂದೇಶವು ಗೋಚರಿಸುತ್ತದೆ; ಭಾಗವಹಿಸುವವರು ಸಂದೇಶವನ್ನು ಸಲ್ಲಿಸಲು 'ಕಳುಹಿಸು' ಕ್ಲಿಕ್ ಮಾಡಬೇಕು. ಜತೆಗೆ ವಿವರಗಳೊಂದಿಗೆ ಕಣ್ಣನ್ ದೇವನ್ ಸಂಕ್ರಾಂತಿ ಆಫರ್ ಪ್ಯಾಕ್ನಿಂದ ಅನನ್ಯ ಕೋಡ್ ಅನ್ನು ನಮೂದಿಸಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ಬಹುಮಾನ ಗೆಲ್ಲುವ ಅವಕಾಶ ಪಡೆಯುತ್ತಾರೆ. ವಿಶೇಷ ಸಂಕ್ರಾಂತಿ ಪ್ಯಾಕ್ಗಳಲ್ಲಿ ನಮೂದಿಸಲಾದ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಕೂಡ ಗ್ರಾಹಕರು ಭಾಗವಹಿಸಬಹುದು ಗ್ರಾಹಕರು ಹೆಚ್ಚಿನ ಮಾಹಿತಿಗೆ https://www.kanandevan.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


