ನಿಟ್ಟೆ: ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.12 ರಂದು ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಯೂಥ್ ರೆಡ್ ಕ್ರಾಸ್ ಸೊಸೈಟಿ,ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ರೋವರ್ಸ್ ಆಂಡ್ ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ 'ಮೌಲ್ಯಾಧಾರಿತ ಸಮಾಜ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಅಂಕಣಕಾರರೂ, ವಾಗ್ಮಿಗಳೂ ಆಗಿರುವ ಶ್ರೀಕಾಂತ ಶೆಟ್ಟಿ ಭಾಗವಹಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು ಆಧ್ಯಾತ್ಮಿಕ ದೇಶವಾದ ಭಾರತ ಇಂದು ಇಡಿಯ ವಿಶ್ವಕ್ಕೆ ಮಾನವೀಯತೆಯ ಪಾಠವನ್ನು ಮಾಡುವ ವಿಶ್ವಗುರುವಾಗಿದೆ. ಇದಕ್ಕೆಲ್ಲ ಕಾರಣ ಸ್ವಾಮಿ ವಿವೇಕಾನಂದರ ಚಿಕಾಗೋದ ಭಾಷಣ. ವಿವೇಕಾನಂದರು ಈ ಭಾಷಣದ ಮೂಲಕ ಜಗತ್ತಿಗೆ 'ವಸುದೈವ ಕುಟುಂಬ ಹಾಗೂ ಭ್ರಾತೃತ್ವದ ಪಾಠ ಭಾರತದ ಮಣ್ಣಿನಲ್ಲಿಯೇ ಆವರಿಸಿದೆ ಎಂಬುದನ್ನು ತಿಳಿಸಿಕೊಡುತ್ತಾರೆ. ಇಂದಿನ ಯುವ ಜನತೆ ವಿವೇಕಾನಂದರ ಆದರ್ಶಗಳನ್ನು ಪಾಲಿಸಿದರೆ ಭಾರತದ ಸಂಸ್ಕೃತಿ, ಆರ್ಥಿಕತೆ, ಪರಂಪರೆಗಳನ್ನು ಜಾಗತಿಕವಾಗಿ ಉತ್ತುಂಗದಲ್ಲಿಡಲು ಸಾಧ್ಯ ಎಂದು ತಿಳಿಸಿದರು.
ಭಾರತೀಯ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಬಾಲಗಂಗಾಧರತಿಲಕ, ಖುದೀರಾಮ್ ಬೋಸ್, ಮಹಾತ್ಮಗಾಂಧಿ, ಭಾರತದ ಆರ್ಥಿಕತೆಗೆ ಕೊಡುಗೆ ನೀಡಿದ ಜೆಮ್ಷೆಡ್ ಜೆ ಟಾಟ ಇವರಿಗೆಲ್ಲ ಆದರ್ಶವಾಗಿದ್ದವರು ಸ್ವಾಮಿ ವಿವೇಕಾನಂದರು. ಧರ್ಮ ಎಂದರೆ ಕೇವಲ ಆಚರಣೆಯಲ್ಲ, ಧರ್ಮ ಎಂದರೆ ತಾನೂ ಬದುಕಬೇಕು ಇತರರನ್ನು ಬದುಕಲು ಬಿಡಬೇಕು ಎನ್ನುವ ಮೌಲ್ಯವಾಗಿದೆ' ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾಕುಮಾರಿ ಬಿ. ಕೆ. ಮಾತನಾಡಿ ಭಾರತೀಯರು ಇಂದು ವಿದೇಶದಲ್ಲಿ ಗೌರವದಿಂದ ಬಾಳುತ್ತಿದ್ದಾರೆ ಎಂದರೆ ಅದಕ್ಕೆ ಸ್ವಾಮಿ ವಿವೇಕಾನಂದರೇ ಕಾರಣ ಎಂದು ತಿಳಿಸಿದರು. ಇಂದು ಜಗತ್ತಿನ ಪ್ರತಿ ಐದು ಜನ ತಂತ್ರಜ್ಞರಲ್ಲಿ, ಒಬ್ಬ ವ್ಯಕ್ತಿ ಭಾರತೀಯನಿದ್ದಾನೆ ಎಂಬುದು ಭಾರತದ ಯುವ ಜನತೆಯ ಶಕ್ತಿ, ಸಾಮರ್ಥ್ಯಕ್ಕೆ ಉದಾಹರಣೆ ಆಗಿದೆ ಎಂದರು.
ರೋವರ್ಸ್ ಆಂಡ್ ರೇಂಜರ್ಸ್ನ ಸಂಯೋಜಕ ಪ್ರಕಾಶ್. ಬಿ. ಅತಿಥಿಗಳನ್ನು ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ರಶ್ಮಿ ವಂದನಾರ್ಪಣೆ ಮಾಡಿದರು. ಕುಮಾರಿ ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ