ಮಂಗಳೂರು : ಮಕರ ಸಂಕ್ರಾಂತಿ ಪ್ರಯುಕ್ತ ನಗರದ ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ ರಂಗೋಲಿ ಸ್ಪರ್ಧೆಯನ್ನು ಭಾನುವಾರ ಸಂಜೆ ಏರ್ಪಡಿಸಲಾಗಿತ್ತು. ಸ್ಪಾರ್ ಹೈಪರ್ ಮಾರ್ಕೆಟ್ ನ ವ್ಯವಸ್ಥಾಪಕ ಕಾ.ವೀ.ಕೃಷ್ಣದಾಸ್ ತೀರ್ಪುಗಾರರಾಗಿದ್ದರು.
ಸೆಂಟ್ರೋ ಸಂಸ್ಥೆಯ ಕಾರ್ಯ ನಿರ್ವಾಹಕ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಫಿಜಾ ಬೈ ನೆಕ್ಸಸ್ ನ ಮಾರ್ಕೆಟಿಂಗ್ ಮೇನೇಜರ್ ಶ್ರೀನಿಧಿ, ಮಾರ್ಕೆಟಿಂಗ್ ತಂಡದ ಉಲ್ಲಾಸ್ ಮತ್ತು ಅನಿಷಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸುಮೀತಾ ಮತ್ತು ಬಳಗ, ದ್ವಿತೀಯ ಬಹುಮಾನವನ್ನು ದಿವ್ಯ ಮತ್ತು ಬಳಗ, ತೃತೀಯ ಬಹುಮಾನವನ್ನು ಸೌಮ್ಯ ಮತ್ತು ಬಳಗ ಮತ್ತು ಸಮಾಧಾನಕರ ಬಹುಮಾನವನ್ನು ಕುಮಾರಿ ನಿಖಿತಾ ಪಡೆದುಕೊಂಡರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ