ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ನೂತನ ಪದಾಧಿಕಾರಿಗಳ ಆಯ್ಕೆ ಮಂಗಳವಾರ ನಡೆಯಿತು. ವಿವರ ಇಂತಿದೆ:
ಡಾ. ಟಿ ಕೆ.ಜಯಪ್ರಕಾಶನಾರಾಯಣ (ಅಧ್ಯಕ್ಷರು), ಶೇಖರ ಶೆಟ್ಟಿ.ಕೆ, ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ.(ಗೌರವ ಕಾರ್ಯದರ್ಶಿಗಳು)ಡಾ.ಬಿ ರಾಜಗೋಪಾಲ್ (ಗೌರವ ಕೋಶಾಧ್ಯಕ್ಷರು) ವಿಶಾಲಾಕ್ಷ ಪುತ್ರಕಳ, ಪಿ ರಾಮಚಂದ್ರ ಭಟ್ (ಸಂಘಟನಾ ಕಾರ್ಯದರ್ಶಿಗಳು), ಸದಸ್ಯರಾಗಿ ಕವಿತಾ ಕೂಡ್ಲು, ಡಾ.ಆಶಾಲತ ಸಿ ಕೆ, ಪ್ರವೀಣ ಕುಮಾರ್, ವಿದ್ಯಾವಾಣಿ ಮಠದಮೂಲೆ, ಆಯಿಷಾ ಎ.ಎ.ಪೆರ್ಲ, ದೇವದಾಸ.ಕೆ, ನ್ಯಾಯವಾದಿ ಥೋಮಸ್ ಡಿ ಸೋಜ ಆಯ್ಕೆಯಾದರು.
ಅಧ್ಯಕ್ಷರಾಗಿ ನಿಯುಕ್ತಿ ಗೊಂಡ ಡಾ. ಟಿ.ಕೆ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಶ್ರೀ ವಿದ್ಯಾ ವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಇದರ ಸಂಚಾಲಕರು, ಪ್ರತಿಷ್ಟಿತ ಸಹಕಾರೀ ಸಂಸ್ಥೆ ಕ್ಯಾಂಪ್ಕೋ ಇದರ ನಿರ್ದೇಶಕರು ಮತ್ತು ಧಾರ್ಮಿಕ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ