ಪಣಜಿ: ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನಡೆದ ಸಭೆಯಲ್ಲಿ ಶ್ರೀ ಕಾಶೀ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಹುಕ್ಕೇರಿ ಶ್ರೀಗಳು ಗುಳೇದಗುಡ್ಡದ ಕೇರೂರು ಶ್ರೀಗಳ ನೇತೃತ್ವದಲ್ಲಿ ಫೆಬ್ರುವರಿ 3ರಂದು ಶನಿವಾರ ಸಂಜೆ ಧರ್ಮಜಾಗೃತಿ ಕಾರ್ಯಕ್ರಮ ನಡೆಸಲು ಸರ್ವಾನುಮತದಿಂದ ಸಮ್ಮತಿ ಸೂಚಿಸಲಾಯಿತು.
ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜ ಮಡಗಾಂವ ಗೋವಾದ ಪಣಜಿ ಶಾಖಾ ಸಮಿತಿ ಸದಸ್ಯರು ಪಣಜಿ ಖಾಸಗಿ ಹೋಟೇಲ್ನಲ್ಲಿ ಸಭೆ ನಡೆಸಿದರು. ಪಣಜಿ ಶಾಖಾ ಸಮಿತಿ ಅಧ್ಯಕ್ಷರಾದ ಸುರೇಶ ಕಣವಿ ಮಾತನಾಡಿ- ಗೋವಾದ ವಿವಿಧ ಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ವೀರಶೈವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು ಇಂದು ವೀರಶೈವ ಧರ್ಮತತ್ವಗಳು ನಶಿಸಿಹೋಗುವ ಅಂಚಿನಲ್ಲಿದೆ. ಆದ್ದರಿಂದ ನಾವೆಲ್ಲ ಧರ್ಮಗುರುಗಳನ್ನು ಕರೆಸಿ ಧರ್ಮ ಸಭೆಗಳನ್ನು ಮಾಡುವ ಉದ್ದೇಶದಿಂದ ಧರ್ಮಜಾಗೃತಿ ಮಾಡೋಣ. ಪಣಜಿಯ ಸುತ್ತಮುತ್ತಲಿನ ಜನರನ್ನು ಕರೆದು ಧರ್ಮ ತತ್ವಗಳ ಜಾಗೃತಿ ಕಾರ್ಯಕ್ರಮ ಮಾಡೋಣ ಎಂದರು.
ಈ ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಸಿದ್ಧಾರ್ಥ ಗಾಡವಿ, ಶಿವನಗೌಡ ಪಾಟೀಲ್ (ದನ್ನೂರ), ವಿರುಪಾಕ್ಷ ಬೆಟಗೇರಿ, ಗಂಗಯ್ಯ ಹಿರೇಮಠ, ಮಲ್ಲಪ್ಪ ಕೋರಿ, ಮತ್ತಿತರರು ಉಪಸ್ಥಿತರಿದ್ದರು. ಜಯಶ್ರೀ ಹೊಸ್ಮನಿ ವಂದನಾರ್ಪಣೆಗೈದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ