ಪಣಜಿ: ಇತ್ತೀಚೆಗೆ ಗೋವಾದಲ್ಲಿ ವೀರಶೈವ ಲಿಂಗಾಯತರು ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಮರೆಯುತ್ತಿದ್ದಾರೆ. ಆದ್ಧರಿಂದ ಧರ್ಮಜಾಗೃತಿ ಮಾಡಿಸುವುದಕ್ಕಾಗಿ ವರ್ಷಕ್ಕೆ ಒಮ್ಮೆಯಾದರೂ ಧರ್ಮಗುರುಗಳನ್ನು ಕರೆಯಿಸಿ ಧರ್ಮ ಸಂಸ್ಕಾರಗಳನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಜುವಾರಿ ನಗರ ಶಾಖಾ ಸಮಿತಿ ಅಧ್ಯಕ್ಷ ರುದ್ರಯ್ಯಸ್ವಾಮಿ ಹಿರೇಮಠ ನುಡಿದರು.
ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜ ಮಡಗಾಂವ ಗೋವಾ ವತಿಯಿಂದ ಜುವಾರಿನರದಲ್ಲಿ ಶ್ರೀ ಸಚ್ಚಿದಾನಂದ ಮಠದ ಸಭಾಗೃಹದಲ್ಲಿ ಸಮಾಜದ ಜುವಾರಿನಗರ ಉಪಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರುದ್ರಯ್ಯಸ್ವಾಮಿ ಹಿರೇಮಠ ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷ ಮಲ್ಲಿಕಾರ್ಜುನ ಫರ್ತಾಬಾದ್ ಮಾತನಾಡಿ- ಜುವಾರಿನರ ಬಿರ್ಲಾದಲ್ಲಿ ವೀರಶೈವ ಲಿಂಗಾಯತ ಧರ್ಮದ ಅಜಾಗರೂಕತೆಯಿಂದಾಗಿ ಹಲವರು ಅನ್ಯ ಧರ್ಮಗಳಿಗೆ ಮತಾಂತರವಾಗುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದರು.
ಮಕರಸಂಕ್ರಾತಿಯ ಅಂಗವಾಗಿ ಜಗಧ್ಗುರುಗಳನ್ನು ಗೋವಾಕ್ಕೆ ಬರಮಾಡಿಕೊಂಡು ಧರ್ಮಜಾಗೃತಿ ಮಾಡಲು ಸರ್ವಾನುಮತದಿಂದ ಪೂರ್ವಭಾವಿ ಸಭೆ ನಡೆಸಲಾಯಿತು. ಕಾಶಿ ಜಗಧ್ಗುರುಗಳಾದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಫೆಬ್ರುವರಿ 4 ರಂದು ರವಿವಾರ ಜುವಾರಿನಗರದಲ್ಲಿ ಸಂಕ್ರಾಂತಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮಲ್ಲಪ್ಪಾ ಕೋರಿ, ಮಹಾದೇವಪ್ಪ ಬೆಳವಾಡಿ, ವಿರೇಶ ಬಾದರದಿನ್ನಿ, ಸೇರಿದಂತೆ ಸಮಾಜದ ಹಲವು ಗಣ್ಯರು ಉಪಸ್ಥಿತರಿದ್ದರು. ಪಡದಯ್ಯಾಸ್ವಾಮಿ ಹಿರೇಮಠ ಕಾರ್ಯಕ್ರಮಕ್ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಯಶ್ರೀ ಶಂಕರ ಹೊಸ್ಮನಿ ವಂದಿಸಿದರು.
ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಜುವಾರಿನಗರ ಶಾಖಾಸಮಿತಿಗೆ ಗೌರವಾಧ್ಯಕ್ಷರಾಗಿ ಮಲ್ಲಿಕಾರ್ಜುನ ಫರ್ತಾಬಾದ್, ಅಧ್ಯಕ್ಷರಾಗಿ ರುದ್ರಯ್ಯಸ್ವಾಮಿ ಹಿರೇಮಠ, ಉಪಾಧ್ಯಕ್ಷರಾಗಿ ಹನುಮಂತ ಉಮಚಗಿ, ಕಾರ್ಯದರ್ಶಿಯಾಗಿ ಶಿವನಗೌಡ ಪಾಟೀಲ್, ಸಹಕಾರ್ಯದರ್ಶಿಯಾಗಿ ಮಹೇಶ ಆಲೂರ, ಕೋಶಾಧಿಕಾರಿಯಾಗಿ ರಮೇಶಗೌಡ ಗೌಡರ್, ಸಹ ಕೋಶಾಧಿಕಾರಿಯಾಗಿ ಸಿದ್ಧನಗೌಡ ಗೌಡರ್, ಮಾಧ್ಯಮ ಸಲಹೆಗಾರರಾಗಿ ಬಾಪುಗೌಡ ಮ್ಯಾಗೇರಿ ಹಾಗೂ ಸಿದ್ಧರಾಮ ಬಿರಾದರ್ ಆಯ್ಕೆಯಾದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ