ಕವನ: ವರಗುರು

Upayuktha
0


ವೆಂಕಪ್ಪ ಕುಳಮರ್ವ ಗಡಿನಾಡ ರೂವಾರಿ 

ಕೊಂಕಿರದ ಸ್ಫುಟವಾಕ್ಕು ಸಾಹಿತ್ಯ ಶಿಖರ 

ತೆಂಕಣದ ತಂಬೆಲರ ತಂಪೀವ ಮೃದುಮಾತು 

ಶಂಕೆಯೇತಕೆ ನಿಮಗೆ- ಲಕುಮಿರಮಣ||


ಸಿರಿಗನ್ನಡದ ಚಾದರವ ಹಾಸಿ ಹೊದೆಸುತ್ತ 

ಬರೆಹಕ್ಕೆ ನಾಂದಿಯನು ಹಾಡಿರುವ ಮಹಿಮ 

ಬರೆವಣಿಗೆ ಸಾಗಿಹುದು ಮೆರವಣಿಗೆಯೋಪಾದಿ 

ಸಿರಿಗಣ್ಗೆ ಹಬ್ಬವೇ- ಲಕುಮಿರಮಣ||


ನಮಿಸುವೆನು ಪದತಲಕೆ ಚೈತನ್ಯ ಮೂರುತಿಗೆ 

ತಮವನ್ನು ಕಳೆದೊಗೆದ ಸಾಹಿತ್ಯ ಸೂರ್ಯ  

ಮಮಕಾರ ತೋರುತ್ತ ಛಂದವನು ಮೊಗೆದುಣಿಸಿ

ಸಮತೆಯಲಿ ಕಾಣುವರು- ಲಕುಮಿರಮಣ||


ಎಪ್ಪತ್ತರಾ ಹರೆಯ ಕುಳಮರ್ವ ಅಣ್ಣಂಗೆ

ದುಪ್ಪಟ್ಟು ಆಯುಷ್ಯ ಆರೋಗ್ಯವಿರಲಿ

ಕೊಪ್ಪರಿಗೆ ಹೊನ್ನಿನಾ ಸಂತಸದ ಸಂಪದವು

ಚಪ್ಪರಿಸುವಂತಿರಲಿ- ಲಕುಮಿರಮಣ||


ಮುಪ್ಪನ್ನು ಅಪ್ಪದೆಯೆ ಸಾಗುತಿರು ಮುಂದಕ್ಕೆ

ತೆಪ್ಪದಾ ಪಯಣದಲಿ ತಪ್ಪು ಹುಡುಕದೆಯೆ

ಬಪ್ಪ ದುರಿತಗಳನ್ನು ನಾಶಿಸುವ ಶ್ರೀಹರಿಯು

ಒಪ್ಪವಾಗಿರೆ ಬಾಳು- ಲಕುಮಿರಮಣ||


-ಲಕ್ಷ್ಮೀ ವಿ ಭಟ್, ಮಂಜೇಶ್ವರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top