ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭವು ದಿನಾಂಕ 24-12-2023ನೇ ಭಾನುವಾರ ಸಂಜೆ 04.00 ಗಂಟೆಗೆ ಡಿಎಆರ್ ಪೆರೇಡ್ ಮೈದಾನ ಪಾಂಡೇಶ್ವರ, ಮಂಗಳೂರು ಇಲ್ಲಿ ಜರುಗಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ತಿರುಮಲೇಶ್ ಬಿ.ಎಂ., ಮುಖ್ಯ ಅಗ್ನಿಶಾಮಕ ಅಧಿಕಾರಿಗಳು, ಮಂಗಳೂರು ಪ್ರಾಂತ್ಯ ಇವರು ಮಾತನಾಡಿ ಕ್ರೀಡಾಪಟುಗಳು ಬಹಳ ಆಸಕ್ತಿಯಿಂದ ಭಾಗವಹಿಸಿರುತ್ತಾರೆ. ಕ್ರೀಡೆಯಿಂದ ದೇಹ ಮತ್ತು ಮನಸ್ಸಿನ ನೆಮ್ಮದಿ ಮತ್ತು ಆರೋಗ್ಯಕ್ಕೆ ಸಾಧ್ಯವಾಗುವುದು. ವಲಯಮಟ್ಟದ ಆಟೋಟಗಳೊಂದಿಗೆ ಭಾಗವಹಿಸುವುದರಿಂದ ಅನೇಕ ಜಿಲ್ಲೆಗಳ ಗೃಹರಕ್ಷಕರು ಪರಿಚಯವಾಗುವುದು. ದೇಹ ಆರೋಗ್ಯದಿಂದ ಇದ್ದರೆ ದೇಶ ಸೇವೆ ಮಾಡಲು ಅನುಕೂಲವಾಗುವುದು. ಆದ್ದರಿಂದ ದಿನನಿತ್ಯದಲ್ಲಿ ಕೆಲವು ಸಮಯ ಕ್ರೀಡೆಗೆ ಸಮಯ ಮೀಸಲಿಡುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕರು ಉತ್ತಮ ಆಟ ಮತ್ತು ಕ್ರೀಡಾಸ್ಫೂರ್ತಿಗೆ ಅಭಿನಂದಿಸಿದರು. ಸಮಗ್ರ ಟೀಂ ಚಾಂಪಿಯನ್ ಶೀಪ್ ಪಡೆದುಕೊಂಡ ಚಿಕ್ಕಮಗಳೂರು ಜಿಲ್ಲೆ ತಂಡ, ವೈಯಕ್ತಿಕ ಚಾಂಪಿಯನ್ ಪುರುಷರ ವಿಭಾಗದ ಶ್ರೀ.ಸಂದೀಪ್ ಎಚ್.ಪಿ. ಚಿಕ್ಕಮಗಳೂರು ಜಿಲ್ಲೆ ಹಾಗೂ ವೈಯಕ್ತಿಕ ಚಾಂಪಿಯನ್ ಮಹಿಳೆ ವಿಭಾಗ ಶಕೀಲಾ, ದಕ್ಷಿಣಕನ್ನಡ ಜಿಲ್ಲೆ ಇವರನ್ನು ಶ್ಲಾಘಿಸಿದರು. ಮುಂಬರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ ಪಶ್ಚಿಮ ವಲಯಕ್ಕೆ ಹೆಚ್ಚಿನ ಪದಕಗಳನ್ನು ತರುವಂತೆ ಹಾರೈಸಿದರು. ಗೃಹರಕ್ಷಕರು ನಿಷ್ಕಾಮ ಸೇವೆ ಸಲ್ಲಿಸಲು ಇಂತಹ ಕ್ರೀಡೆಗಳು ಇನ್ನಷ್ಟು ಉತ್ತೇಜನ ನೀಡಲಿ ಎಂಬುದಾಗಿ ತಿಳಿಸಿದರು.
ಶ್ರೀ ಗೋಪಿನಾಥ್ ಬಿ.ಎನ್. ಕಛೇರಿ ಅಧೀಕ್ಷಕರು ಸ್ವಾಗತ ಭಾಷಣ ಮಾಡಿದರು. ಮಂಗಳೂರು ಘಟಕದ ಘಟಕಾಧಿಕಾರಿ ಸೀನಿಯರ್ ಪ್ಲಟೂನ್ ಕಮಾಂಡರ್ ಶ್ರೀ ಮಾರ್ಕ್ಶೇರಾ ಗೌರವ ವಂದನೆ ಸಲ್ಲಿಸಿದರು. ಬೆಳಗಾವಿ ಜಿಲ್ಲೆಯ ಬೋಧಕರಾದ ಶ್ರೀ ರಾಕೇಶ್ ಬಿ. ಗೋನಾಳ್ ಕ್ರೀಡಾಸ್ಪರ್ಧೆಗಳನ್ನು ನಡೆಸಿಕೊಟ್ಟರು. ಸಮಾರಂಭದಲ್ಲಿ ಹಗ್ಗ ಜಗ್ಗಾಟದ ಅಂತಿಮ ಪದ್ಯ ನಡೆಸಲಾಯಿತು. ವಿಜೇತ ಗೃಹರಕ್ಷಕ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾಧ್ವಜದ ಹಸ್ತಾಂತರ, ಮುಕ್ತಾಯ ಘೋಷಣೆ ಮಾಡಲಾಯಿತು. ಶ್ರೀ.ಮುರಳಿಧರರವರು ವಂದನಾರ್ಪಣೆ ಸಲ್ಲಿಸಿದರು. ನಾಲ್ಕು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಗೃಹರಕ್ಷಕ/ ಗೃಹರಕ್ಷಕಿಯರು ವಿಜಯೋತ್ಸವ ಓಟದ ಮೂಲಕ ಸಮಾರಂಭ ಮುಕ್ತಾಯಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ