ಧರ್ಮಸ್ಥಳ: ವಿವಿಧತೆಯ ನೆಲೆಗಟ್ಟಿನಲ್ಲಿ ಭಾರತವು ಶ್ರೇಷ್ಠವಾಗಿದೆ. ಜನರು ಒಂದು ಶಕ್ತಿಯನ್ನು ಸ್ಮರಿಸುವ ವಿಧ ನೋಡುವ ಬಗೆ ಮಾತ್ರ ಬೇರೆ. ನೋಡುವ ಕಣ್ಣು ಎರಡು, ವಸ್ತು ಒಂದೇ ಎಂದು ವಿಭು ಅಕಾಡೆಮಿಯ ಸಂಸ್ಥಾಪಕಿ ಡಾ. ವಿ.ಬಿ ಆರತಿ ಮಾತನಾಡಿದರು.
ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ನಾಲ್ಕನೇ ದಿನ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ "ಪ್ರಾಚೀನ ಭಾರತದಲ್ಲಿ ಧರ್ಮಗಳು" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜಾತಿ, ಮತ, ಪಂಥ, ಒಳಪಂಗಡಗಳು ಹಲವು. ಅವೆಲ್ಲವೂ ವಿವಿಧತೆಗಳೇ ಹೊರತು ವೈರುಧ್ಯಗಳಲ್ಲ. ಮುಕ್ತಿಯನ್ನು ಕಾಣಲು ಜನರು ದೇವರನ್ನು ಬೇರೆ ಬೇರೆ ಆಯಾಮಲ್ಲಿ ಭಜಿಸುವುದಷ್ಟೇ ಭಿನ್ನ ಎಂದು ನುಡಿದರು.
ಹಲವಾರು ಮರ, ಗಿಡಗಳಿದ್ದರೆ ಮಾತ್ರ ಅದು ವನ ಎಂದೆನಿಸಿಕೊಳ್ಳುತ್ತದೆ. ಹಾಗೆ ನಮ್ಮ ಭಾರತದಲ್ಲಿಯೂ ಹಲವು ವಿವಿಧತೆಗಳು ಸೇರಿ ಏಕತೆಯಿಂದ ಗುರುತಿಸಿಕೊಂಡಿದೆ. ಸೈದ್ಧಾಂತಿಕ ಬೇಧವಿರಬೇಕು. ಬೌಧ್ಧಿಕ ನೆಲೆಯ ಮೇಲೆ ತರ್ಕಗಳು ಆಗಬೇಕು. ತಾನು ಎಂಬ ಸಂಘರ್ಷದಿಂದ ಏಕತೆಯನ್ನು ಸಾಧಿಸಲು ಅಸಾಧ್ಯ ಎಂದರು.
ಭೌತಿಕ ಪ್ರಪಂಚದಲ್ಲಿ ಗಮ್ಯವನ್ನು ತಲುಪಿದಾಗ ಮೌನ ಆವರಿಸಿಕೊಳ್ಳುತ್ತದೆ. ಅಂದರೆ ಶಾಂತಿ ಎಲ್ಲಿ ನೆಲೆಸಿರುತ್ತದೆಯೋ ಅಲ್ಲಿ ಜ್ಞಾನ ಮೂಡುವುದು. ಪ್ರಾಚೀನ ಭಾರತದಲ್ಲಿನ ಕಲೆ, ಸಾಹಿತ್ಯ, ಶಾಸ್ತ್ರಗಳ ಹೇರಳವಾದ ಜ್ಞಾನ ರಾಶಿಯನ್ನು ಕಂಡಾಗ ಭಾರತೀಯ ಧರ್ಮದ ವೈಭವವನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ವಿಜಯಪುರದ ಬಸವಶಾಂತಿ ಪ್ರಶಸ್ತಿ ಪುರಸ್ಕøತ ಮಹಮ್ಮದಗೌಸ ರ ಹವಾಲ್ದಾರ್, ನ್ಯಾಯವಾದಿ ಎಮ್.ಆರ್ ವೆಂಕಟೇಶ್ ಉಪಸ್ಥಿತರಿದ್ದರು.
- ದಿವ್ಯಶ್ರೀ ಹೆಗಡೆ
ಪ್ರಥಮ ಎಂ.ಎ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ