ಧರ್ಮಸ್ಥಳ ಲಕ್ಷದೀಪೋತ್ಸವ: ದೈವೀ ಕೃಪೆಯ ಮಹಿಮೆ ಸಾರಿದ ‘ನೃತ್ಯಸಮರ್ಪಣಂ’

Upayuktha
0



ಧರ್ಮಸ್ಥಳ: ಶಿವ ಮತ್ತು ಮನ್ಮಥ, ಶಿವ ಮತ್ತು ಮಾರ್ಕಂಡೇಯನ ಕಥನ ಮತ್ತು ಕೃಷ್ಣ ಲೀಲೆಯ ವಿವಿಧ ನಾಟ್ಯ ರೂಪಕಗಳನ್ನು ನಿರೂಪಿಸುವಲ್ಲಿ ದೃಷ್ಟಿ ನೃತ್ಯ ಮೇಳದ ಬೆಂಗಳೂರು ತಂಡ ಯಶಸ್ವಿಯಾಯಿತು.



ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಸೋಮವಾರ ಅಮೃತವರ್ಷಿಣಿ ಸಭಾಭವನದ ವೇದಿಕೆಯಲ್ಲಿ ವಿದುಷಿ ಅನುರಾಧ ವಿಕ್ರಾಂತ್ ಇವರ ತಂಡ ನಡೆಸಿಕೊಟ್ಟ ‘ನೃತ್ಯಸಮರ್ಪಣಂ’ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.



ರಾಗನಾಟ ಮತ್ತು ಆದಿತಾಳದಲ್ಲಿ ಗಣಪತಿಯ ವರ್ಣನೆಯನ್ನು ವಿವಿಧ ರೀತಿಯ ಭಂಗಿಗಳನ್ನು ಭರತನಾಟ್ಯದಲ್ಲಿ ಗಣಪತಿಗೆ ವಂದಿಸುವ ಮುಖಾಂತರ ಕಾರ್ಯಕ್ರಮವು ವಿಘ್ನವಿನಾಶಕನ ನೆನೆಯುವುದರ ಮೂಲಕ ಆರಂಭವಾಯಿತು. 



ಮೊದಲನೆಯದಾಗಿ ಮಾರ್ಕಂಡೇಯನ ಶಿವನ ಮೇಲಿನ ಭಕ್ತಿ ಮತ್ತು ಶಿವ ಯಮನಿಂದ ಮಾರ್ಕಂಡೇಯನನ್ನು ರಕ್ಷಿಸುವ ಪ್ರಸಂಗ ಮತ್ತು  ರಾವಣನ ಅಹಂಕಾರವನ್ನು ಭಗ್ನಗೊಳಿಸುವ ನಾಟ್ಯ ರೂಪಕದೊಂದಿಗೆ ಮನ್ಮಥನು ರತಿಗೆ ಹೂಬಾಣ ಬಿಟ್ಟಾಗ ಶಿವನ ಧ್ಯಾನವನ್ನು ಕೆಡಿಸಿದ ಸಂದರ್ಭ ಶಿವನ ರೌದ್ರತೆಗೊಳಗಾದ ಮನ್ಮಥನನ್ನು ಪಾರ್ವತಿಯು ರಕ್ಷಿಸುವ ಪರಿ ಪ್ರೇಕ್ಷಕರ ಮನಸೂರೆಗೊಳಿಸಿತು. ಇಲ್ಲಿ ನಾಟ್ಯ ಶಾಸ್ತ್ರದ ಬೇರೆ ಬೇರೆ ಚಾರೆಗಳ ಪ್ರಸ್ತುತಿಯನ್ನು ಕಾಣಬಹುದು. ಇದರ ರಚನೆ ಆಧಾರವನ್ನು ಶತಾವಧಾನಿ ಡಾ ಆರ್ ಗಣೇಶ್ ರಚಿಸಿದ್ದು, ವಿದ್ವಾನ್ ಬಾಲ ಸುಬ್ರಹ್ಮಣ್ಯ ಶರ್ಮಾ ಮತ್ತು ವಿದ್ವಾನ್ ಗುರುಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ನೃತ್ಯ ಸಂಯೋಜನೆಯನ್ನು ಅನುರಾಧ ವಿಕ್ರಾಂತ್ ಮಾಡಿದ್ದಾರೆ. ಈ ಕೃತಿಯು ಆದಿತಾಳ ಮತ್ತು ರಾಗಮಾಲಿಕೆಯಲ್ಲಿದೆ. ಶುಭಾ ಚೇತನ್, ಐಶ್ವರ್ಯ ಟೋಲ್ಪಡೆ, ಚಂದ್ರಲೇಖ,  ಕಾವ್ಯಶ್ರೀ ಭಾರದ್ವಾಜ್, ರಿಯಾ ವಿಕ್ರಾಂತ್ ಹೀಗೆ ಒಟ್ಟು ಏಳು ಕಲಾವಿದರು ಶಿವಪಾದವನ್ನು ಪ್ರದರ್ಶಿಸಿದರು.



ಎರಡನೆಯದಾಗಿ ರಾಷ್ಟ್ರಕವಿ ಕುವೆಂಪುರವರ ಪದ್ಯದಲ್ಲಿ ಶ್ರೀ ಶಕ್ತಿಯ ಮಹತ್ವವನ್ನು ಕಟ್ಟಿಕೊಡುತ್ತಾರೆ. ಭೈರವಿ ರೂಪದಲ್ಲಿರುವ ದೇವಿಯನ್ನು ಇಲ್ಲಿ ವರ್ಣಿಸಲಾಗಿದೆ. ಶತ್ರುಗಳ ವಿನಾಶದ ಸಂದರ್ಭ ದೇವಿಯು ರೌದ್ರ ರೂಪವನ್ನು ತಾಳುವ ದೇವಿಸ್ತುತಿಯನ್ನು ಪ್ರದರ್ಶಿಸಲಾಯ್ತು. ಇದು ರಾಗ ಶುಭ ಪಂತ್ವರಾಳಿ ಮತ್ತು ಆದಿತಾಳ ರೂಪದಲ್ಲಿತ್ತು. ಗೌರಿ ಎಸ್, ಲಾಲಿತ್ಯ ಎ, ದರ್ಶಿನಿ ವಿ. ವರ್ಷಾ ಶಂಕರ್, ವೈಷ್ಣವಿ ಕುಮಾರ್ , ರಂಜನಾ ಪದ್ಮನಾಭಿ ಅದಿತಿ , ಶ್ವೇತಾ ಆರ್  ನೃತ್ಯವನ್ನು ಪ್ರದರ್ಶಿಸಿದರು. 



ಮೊದಲನೆಯ ಭಾಗದ ಕೊನೆಯ ನೃತ್ಯ ‘ಸಂವಾದ’. ಇದು ನಾಟ್ಯ ಶಾಸ್ತ್ರದಿಂದ ಆರಿಸಲಾದ ನಾಟ್ಯ ವಿಧಾನಕ್ಕೆ ಸಮಕಾಲೀನ ಸಂಗೀತವನ್ನು ಅಳವಡಿಸಿಕೊಂಡು ಜನಪದ ನೃತ್ಯ ಶೈಲಿಯನ್ನು ಜೋಡಿಸಲಾಗಿದ್ದು, ನೃತ್ಯ ಸಂಯೋಜನೆಯು ನಾಟ್ಯ ಶಾಸ್ತ್ರದ ಮೇಲೆ ಆಧಾರವಾಗಿದೆ.



ಸಂಗೀತ ಸಂಯೋಜನೆಯನ್ನು ಪ್ರವೀಣ್ ಡಿ ರಾವ್ ಮಾಡಿದ್ದಾರೆ. ತೃಷ್ಣ ಹೊಸವಳ್ಳಿ , ಆರ್ ನಿರ್ಮಲಾ, ರಿಯಾ ವಿಕ್ರಾಂತ್, ನಿಹಾರಿಕಾ, ಅಥಿರಾ ಏಕನಾಥ್ , ಸಿರಿ, ಶೋನಿಮಾ ಹೀಗೆ ಹತ್ತು ಕಲಾವಿದರು ನೃತ್ಯ ಮಾಡಿದರು.



ಎರಡನೆಯದಾಗಿ ಕರ್ನಾಟಕದ ಹೆಸರಾಂತ ಸಾಹಿತಿ ಡಿ.ವಿ ಗುಂಡಪ್ಪನವರ ಲೋಕಮಾನ್ಯ ನಾಟಕವಾದ ಶ್ರೀ ಕೃಷ್ಣ ಪರೀಕ್ಷಣಂ ಎಂಬ ನೃತ್ಯ ನಾಟಕವನ್ನು ಏರ್ಪಡಿಸಲಾಗಿತ್ತು. ಶ್ರೀ ಕೃಷ್ಣನ ಲೀಲೆಯ ಜೊತೆ ಸರ್ವಂ ಕೃಷ್ಣ ಮಯಂ ಎಂಬ ಮಹತ್ವವಾದ ಜೀವನದ ತತ್ವವನ್ನು ಸಾರುವ ಗೋಪ ಗೋಪಿಕೆಯರಿಗೆ ತಮಾಷೆಯ ಪ್ರಸಂಗವನ್ನು ಹಣೆಯುತ್ತಾ ಸಮಾಜಕ್ಕೆ ವಿವರಿಸುತ್ತಾನೆ.  ಮಾರ್ಗದರ್ಶನವನ್ನು  ಶತವಧಾನಿ ಡಾ ಆರ್ ಗಣೇಶ್ ನೀಡಿದ್ದಾರೆ. ವಿದ್ವಾನ್ ಡಿ.ಎಸ್ ಶ್ರೀವತ್ಸ ಸಂಗೀತ ಸಂಯೋಜನೆ ಮತ್ತು ಅನುರಾಧ ವಿಕ್ರಾಂತ್ ಮತ್ತು ಶಮಾ ಗ್ರೀಷ್ಮಾ ನೃತ್ಯ ಸಂಯೋಜನೆಯನ್ನು ಮಾಡಿದರು.  ಸ್ವಾಗತ ಕಾರ್ಯಕ್ರಮವನ್ನು ಶ್ರೀಧರ್ ಭಟ್ ನಡೆಸಿದರು. 



- ಹೇಮಾವತಿ 

ದ್ವಿತೀಯ ಎಂ.ಎ 

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ 

ಎಸ್.ಡಿ.ಎಂ ಸ್ನಾತ್ತಕೋತ್ತರ ಕೇಂದ್ರ ಉಜಿರೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top