ಬೆಂಗಳೂರು : ಶ್ರೀರಾಮಪುರದ ನಾಲ್ಕನೇ ಅಡ್ಡರಸ್ತೆಯಲ್ಲಿರುವ ಶ್ರೀ ಗೀತಾ ಮಂದಿರ ಟ್ರಸ್ಟ್ ವತಿಯಿಂದ ಡಿಸೆಂಬರ್ 22 ಮತ್ತು 23 ಗೀತಾ ಜಯಂತಿ ಮತ್ತು ವೈಕುಂಠ ಏಕಾದಶಿ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಡಿಸೆಂಬರ್ 22, ಶುಕ್ರವಾರ, "ಗೀತಾ ಜಯಂತಿ" : ಬೆಳಗ್ಗೆ 10-00ಕ್ಕೆ "ಗೀತಾ ಪಾರಾಯಣ" 12-00ಕ್ಕೆ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ. ಸಂಜೆ 6-30ಕ್ಕೆ : "ಹರಿನಾಮ ಸಂಕೀರ್ತನೆ" ಗಾಯನ : ಶ್ರೀಮತಿ ಭವಾನಿ ಭುವನ್, ಪಿಟೀಲು : ವಿ|| ಎಂ.ಎಸ್. ಗೋವಿಂದಸ್ವಾಮಿ, ಮೃದಂಗ : ಶ್ರೀ ಬಿ.ಜೆ. ಭುವನ್ ಶರ್ಮಾ. (ಈ ಕಾರ್ಯಕ್ರಮದ ಪ್ರಾಯೋಜಕರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಬೆಂಗಳೂರು.
ಡಿಸೆಂಬರ್, 23, ಶನಿವಾರ, "ವೈಕುಂಠ ಏಕಾದಶಿ" : ದರ್ಶನದ ಸಮಯ : ಬೆಳಗ್ಗೆ 8-00 ರಿಂದ 1-00, ಸಂಜೆ 5-00 ರಿಂದ 9-00. ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 6-00 ರಿಂದ 8-00 : ಶ್ರೀರಾಮಪುರದ ಶ್ರೀ ವೈಷ್ಣವಿ ವಾಸವಿ ಮಹಿಳಾ ಮಂಡಲಿಯ ಸದಸ್ಯರಿಂದ "ಅನ್ನಮಾಚಾರ್ಯರ ಕೀರ್ತನೆ"ಗಳ ಗಾಯನ.
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟಿನ ಪದಾಧಿಕಾರಿಗಳು ವಿನಂತಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ