ತುಳು ಭಾಷಾ ಬಳಕೆಯಿಂದ ಮಾತ್ರ ತುಳು ಉಳಿಯಲು ಸಾಧ್ಯ: ಭಾಸ್ಕರ ಸಾಲ್ಯಾನ್

Upayuktha
0



ಮಂಗಳೂರು: ನಾವು ತುಳುವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವಾದರೂ ನಾವು ಭಾಷೆಯನ್ನು ಅಷ್ಟಾಗಿ ದುಡಿಸಿಕೊಂಡಿಲ್ಲ. ಎಷ್ಟೇಷ್ಟೋ ಕವಿಗಳು, ಸಾಹಿತಿಗಳು ಬೆಳೆದರೂ ಭಾಷೆ ಹಿಂದುಳಿದಿದೆ. ನಾವು ಗ್ರಾಂಥಿಕವಾದ ತುಳು ಮಾತನಾಡಲು ಅಸಾಧ್ಯವಾದರೂ ನಮ್ಮ ಮನೆಯ ಭಾಷೆಯಾಗಿ ತುಳುವನ್ನು ಸ್ವೀಕರಿಸಬೇಕು. ಖಂಡಿತಾ ದೈನಂದಿನ ಚಟುವಟಿಕೆಗಳಲ್ಲಿ, ಪರಸ್ಪರ ಸಂಭಾಷಣೆಗಳಲ್ಲಿ ತುಳು ಬಳಕೆಯಾಗಬೇಕು. ಅಂತಹಾ ಸ್ಥಿತಿ, ಪರಿಸರ, ಪರಿಸ್ಥಿತಿ ಇದ್ದಾಗ ಮಾತ್ರ ತುಳು ಭಾಷೆಯ ಬೆಳವಣಿಗೆ ಉಳಿವಿಗೆ ಸಾಧ್ಯ ಎಂದು ಸನ್ನಿಧೀಸ್ ಹೋಟೆಲ್ಸ್ (ಪ್ರೈ) ಲಿನ ಜನರಲ್ ಮ್ಯಾನೇಜರ್ ಭಾಸ್ಕರ ಸಾಲ್ಯಾನ್ ರವರು ಹೇಳಿದರು.



ಅವರು ಸುರತ್ಕಲ್ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ ಜರಗಿದ ತುಳುಕೂಟ (ರಿ) ಕುಡ್ಲದ ಬಂಗಾರ್ ಪರ್ಬ ವೈಭವ ಸರಣಿ -09 ರ ಮುಖ್ಯ ಅತಿಥಿಯಾಗಿ ತುಳು ಭಾಂಧವರಿಗೆ ಕರೆ ನೀಡಿದರು.



ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅಗರಿ ರಾಘವೇಂದ್ರರಾಯರು ತುಳುವಿನಲ್ಲಿ ಪರಂಪರಾನುಗತ ತುಳು ಮಾತನಾಡಲು ಕಷ್ಟವಾದರೂ ನಾವು ಸಮಯ  ಸಂದರ್ಭದಲ್ಲಿ ತುಳು ಆಡಲೇ ಬೇಕಾಗುತ್ತದೆ. ಕೆಲವೊಮ್ಮೆ ತಪ್ಪಿದರೂ ಅದನ್ನು ತಿದ್ದಿಕೊಂಡು ತುಳು ನಮ್ಮದು ಎಂಬ ವಿಶೇಷ ಮಮತೆಯಿಟ್ಟು ಬೆಳಸೋಣ ಎಂಬ ಸಂದೇಶವನ್ನು ನೀಡಿದರು.



ತುಳು ಈಗ ಬಹಳ ಪರಿಚಿತವಾದ ಭಾಷೆಯಾಗಿದೆ. ತುಳು ಅರಿಯದವರ ಸಂಖ್ಯೆ ವಿರಳ. ಉತ್ತರ ನೀಡಲು  ಅಸಮರ್ಥರಾದರೂ ಭಾಷೆಯನ್ನು ಮನನ ಮಾಡಿಕೊಳ್ಳುತ್ತಾರೆ. ಇದು ತುಳು ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಧನಾತ್ಮಕ ಅಂಶ ನಾವು ಎಲ್ಲೇ ಹೋಗಲಿ ಅಲ್ಲಿಗೆಲ್ಲಾ ತುಳುವನ್ನು ಒಯ್ಯೋಣ. ತುಳುಕೂಟ ನಡೆಸುವ ಈ ಯಜ್ಞದಲ್ಲಿ ನಾನೆಲ್ಲರೂ ಕರ ಜೋಡಿಸೋಣ. ಶ್ರದ್ಧೆಯಿಂದ ತುಳು ತೇರನ್ನು ಎಳೆಯೋಣ ಎ೦ದು ತುಳು ಕೂಡ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗ ತುಳುವರಿಗೆ ಕರೆ ನೀಡಿದರು.



ವಿದ್ಯಾದಾಯಿನೀ ಪ್ರೌಢ ಶಾಲಾ ಸಂಚಾಲಕ ಶ್ರೀ ಸುಧಾಕರ ರಾವ್ ಪೇಜಾವರರು ಶುಭಾಶಂಸನೆಗೈದರು. ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ವೆಂಕಟ್ರಮಣ ಭಟ್ಟರು ತುಳುವರ ದೀಪಾವಳಿ, ನರಕ ಚತುರ್ದಶಿ, ಗೋಪೂಜೆ, ಬಲಿ ಪಾಡ್ಯಮಿಯ ಬಗ್ಗೆ ಉಪನ್ಯಾಸ ವಿತ್ತರು. ತುಳುಕೂಟದ ಖಚಾಂಚಿ ಚಂದ್ರಶೇಖರ ಸುವರ್ಣ, ಪಿ. ಗೋಪಾಲಕೃಷ್ಣ. ಸದಸ್ಯರಾದ ರಮೇಶ ಕುಲಾಲ್ ಬಾಯಾರ್ , ವಿಶ್ವನಾಥ ಪೂಜಾರಿ. ವಿಜಯ ಕುಮಾರ್ ಕುಲಾಲ್ ಉಪಸ್ಥಿತರಿದ್ದರು.




ಹೇಮಾ ನಿಸರ್ಗ : 'ಪ್ರ.ಕಾರ್ಯದರ್ಶಿ ವರ್ಕಾಡಿ ಶ್ರೀ ರವಿ ಅಲೆವೂರಾಯ ಸಭೆ ನಿರ್ವಹಿಸಿದರು. ಉಪಾಧ್ಯಕ್ಷ ಲ || ಜೆಪ್ಪು ವಿಶ್ವನಾಥ ಶೆಟ್ಟಿ ಪ್ರಸ್ತಾವನೆಗೈದರು. ಹಿರಿಯ ಅಧ್ಯಾಪಕರಾದ ವಸಂತ ಕುಮಾರ್ ರವರು ದನ್ಯವಾದವಿತ್ತರು. ಸಂಸ್ಕೃತ ಅಧ್ಯಾಸಕರಾದ ದಿವಸ್ಪತಿಯವರು ಅತಿಥಿ ಗಣ್ಯರಿಗೆ ಸ್ಮರಣಿಕೆಗೆಳನ್ನು ನೀಡಿ ಗೌರವಿಸಿದರು.



ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಶಾಲಾ ವಿದ್ಯಾರ್ಥಿನಿಯರಿಂದ ಹಾಡುಗಳು, ತೋನ್ಸೆ ಪುಷ್ಕಳ ಕುಮಾರ್ ಮತ್ತು ಬಳಗದಿಂದ ತುಳು ಪದರಂಗಿತೊ ಹಾಗೂ ಬಲಿ - ವಾಮನ ರೂಪಕ ಜರಗಿತು. ಚಂದ್ರಶೇಖರ ಸುವರ್ಣರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ವಿದ್ಯಾದಾಯಿನಿ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top