ಹಿಂದೂ ಆಚರಣೆಗಳಲ್ಲಿರುವ ವೈಜ್ಞಾನಿಕ ಸಂಗತಿಯನ್ನು ಅರಿಯಬೇಕು : ಸುಬ್ರಹ್ಮಣ್ಯ ನಟ್ಟೋಜ

Upayuktha
0



ಪುತ್ತೂರು: ನಮ್ಮ ಆಚರಣೆಗಳ ಹಿಂದಿರುವ ಅರ್ಥವನ್ನು ಅರಿಯದಿರುವ ಪರಿಣಾಮದಿಂದ ಆಚರಣೆಗಳ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಮೂಲ ಹಾಗೂ ನೈಜ ವಿಚಾರಗಳಿಗೆ ದೊರಕಬೇಕಾದ ಆದ್ಯತೆ ಮರೆಯಾಗಿ ವಿಕೃತಿಯ ವೈಭವೀಕರಣಕ್ಕೆ ಎಡೆ ಮಾಡಿಕೊಡುತ್ತಿದೆ. ಹಾಗಾಗಿ ನಮ್ಮ ಪ್ರತಿಯೊಂದು ಹಬ್ಬ ಹರಿದಿನಗಳ, ಆಚಾರ ವಿಚಾರಗಳ ಹಿಂದೆ ಅಡಗಿರುವ ವೈಜ್ಞಾನಿಕ ತತ್ತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.




ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಶನಿವಾರ ‘ಆಚರಣೆಗಳನ್ನು ಅರಿಯೋಣ’ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು.




ಹಿಂದೂ ಧರ್ಮ ಉಳಿಯಬೇಕಾದರೆ ಮುಂದಿನ ತಲೆಮಾರು ಧರ್ಮದ ಆಚರಣೆ, ಪರಂಪರೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ನಮ್ಮ ಹಿರಿಯರು ನಮಗೆ ಅದನ್ನು ತಿಳಿಸಿಕೊಡದಿದ್ದಲ್ಲಿ ಅದು ಅವರ ತಪ್ಪು. ಹಾಗೆಂದು ನಾವು ನಮ್ಮ ಮಕ್ಕಳಿಗೆ ತಿಳಿಸಿಕೊಡದಿದ್ದರೆ ಅದು ನಮ್ಮ ತಪ್ಪಾಗುತ್ತದೆ. ಆದ್ದರಿಂದ ಯಾವ ಹಬ್ಬ ಹರಿದಿನಗಳು ಬಂದರೂ ಅದರ ಹಿಂದೆ ಅಡಕವಾಗಿರುವ ವೈಜ್ಞಾನಿಕ ಸತ್ಯವನ್ನು ಮೊದಲು ಅರ್ಥ ಮಾಡಿಕೊಂಡು ಅದರ ಆಶಯಕ್ಕನುಗುಣವಾಗಿ ನಡೆದುಕೊಳ್ಳಬೇಕು ಎಂದು ಕರೆನೀಡಿದರು.




ಬಲಿ ಚಕ್ರವರ್ತಿಯನ್ನು ವಾಮನರೂಪಿಯಾದ ವಿಷ್ಣು ಪಾತಾಳಕ್ಕೆ ತಳ್ಳಿದ ಕತೆಗಳನ್ನು ನಾವು ಕೇಳಿದ್ದೇವೆ. ಬಲಿಯನ್ನು ತಳ್ಳಿದಾಗ ಆತನ ಆಪ್ತ ಮಂತ್ರಿಯಾಗಿದ್ದ ಮಾಯಾಸುರನೂ ಆತನ ಜತೆ ಪಾತಾಳಕ್ಕಿಳಿಯುತ್ತಾನೆ. ಭಾರತದಿಂದ ನೇರವಾಗಿ ಆಳಕ್ಕಿಳಿದರೆ ಆಚೆ ಬದಿಯಲ್ಲಿ ಮೆಕ್ಸಿಕೋ ಕಾಣಿಸುತ್ತದೆ. ಆ ಮೆಕ್ಸಿಕೋ ನಗರದಲ್ಲಿ ಇತ್ತೀಚೆಗೆ ಉತ್ಖನನ ನಡೆಸಿದಾಗ ಸುಮಾರು ಆರೂವರೆ ಸಾವಿರ ವರ್ಷಗಳ ಹಿಂದಿನದು ಎಂದು ಅಂದಾಜಿಸಲಾದ ಮಾಯಾ ನಗರ ಎಂಬ ನಗರ ನಿರ್ಮಾಣವಾದದ್ದು ಕಂಡು ಬಂದಿದೆ. ಅಲ್ಲಿ ಕಾಣಿಸಿದ ಆ ಮಾಯಾನಗರದ ನಾಗರಿಕತೆಯು ಬಲಿಯೊಂದಿಗೆ ಪಾತಾಳಕ್ಕಿಳಿದ ಮಾಯಾಸುರ ನಿರ್ಮಿಸಿದ್ದೇ ಆಗಿದೆ. ಆದ್ದರಿಂದ ಪುರಾಣ ಸುಳ್ಳು ಎನ್ನುವವರಿಗೆ ಸ್ಪಷ್ಟ ಉತ್ತರ ನೀಡುವಂತಹ ವಿಚಾರಗಳು ನಮ್ಮಲ್ಲಿ ಸಾಕಷ್ಟಿವೆ ಎಂದರು.




ಕಾರ್ಯಕ್ರಮದಲ್ಲಿ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ ಕಮ್ಮಜೆ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾಥಿಗಳು ಹಾಜರಿದ್ದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top