ಮಂಗಳೂರು: "ಹಿಂದೆ ಯಕ್ಷಗಾನವನ್ನು ಕಲಿಯಲು ಅವಕಾಶಗಳಿರಲಿಲ್ಲ. ಕಲಾವಿದ ತನ್ನ ಸ್ವ-ಪ್ರಯತ್ನದಿಂದ ಕಲಿತು ಬೆಳೆಯುತ್ತಿದ್ದ. ಮಳೆಗಾಲದಲ್ಲಿ ಉಳ್ಳವರ ಮನೆಯಲ್ಲಿ ಉಳಿದು ಕಲಿಯುತ್ತಾ, ಕಲೆಯನ್ನು ವೈಭವದ ಸ್ಥಿತಿಗೆ ಒಯ್ಯುತ್ತಿದ್ದ. ಆದರೆ ಇಂದು ಕಲಾಸಕ್ತನಾದವನಿಗೆ ಅದು ಅಂಗೈಯಲ್ಲೇ ದೊರಕುತ್ತಿದೆ. ಅಲ್ಲಲ್ಲಿ ನಾಟ್ಯ, ಹಿಮ್ಮೇಳಗಳನ್ನು ಕಲಿಸುವ ತರಗತಿಗಳಿವೆ. ಸಮರ್ಥ ಮತ್ತು ಶಾಸ್ತ್ರೀಯವಾಗಿ ಕಲಿಸುವ ನೃತ್ಯ ಗುರುಗಳಿದ್ದರೆ ಹಾಗಾಗಿ ಮಕ್ಕಳು ಎಳವೆಯಲ್ಲಿ ಯಕ್ಷ ನಾಟ್ಯವನ್ನು ಕರಗತ ಗೊಳಿಸಿಕೊಳ್ಳುತ್ತಾರೆ. ಇಲ್ಲಿ ಕಲಿತಂತಹಾ ವಿದ್ಯಾರ್ಥಿಗಳು ಮುಂದೆ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಾರೆ. ಕಲೆಯನ್ನು ಉಳಿಸುತ್ತಾರೆ. ಕೊಂಚಾಡಿಯ ಶ್ರೀರಾಮ ಭಜನಾ ಮಂದಿರದ ಈ ಶ್ರೀ ರಾಮ ಯುಕ್ತವೃಂದವೂ ಬೆಳೆದು ಕೀರ್ತಿ ಗಳಿಸಲಿ ಎ೦ದು ಯಕ್ಷ ಗುರು ವರ್ಕಾಡಿ ರವಿ ಅಲೆವೂರಾಯ ಹೇಳಿದರು.
ಅವರು ಕೊಂಚಾಡಿಯ ಶನಿವಾರ (ನ.4) ಶ್ರೀರಾಮ ಭಜನಾ ಮಂದಿರದಲ್ಲಿ ಜರುಗುವ ಶ್ರೀರಾಮ ಯಕ್ಷ ವೃಂದದ ತರಗತಿಗಳನ್ನು ಉದ್ಘಾಟಿಸುತ್ತಾ ಶುಭ ಹಾರೈಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಕ್ಷ ವೃಂದದ ನಿರ್ದೇಶಕಿ ಶ್ರೀಮತಿ ವಿಜಯಲಕ್ಷ್ಮೀ ಎಲ್. ನಿಡ್ವಣ್ಣಾಯರು ಪ್ರಾತ್ಯಕ್ಷಿಕೆ ನೀಡುತ್ತಾ ನಾಟ್ಯಾರಂಭ ಮಾಡಿದರು.
ಭಜನಾ ಮಂದಿರದ ವಿಜಯ ಕುಮಾರ್ ದೀಪ ಬೆಳಗಿಸಿ ಸಂಸ್ಥೆಗೆ ಶುಭ ಹಾರೈಸಿದರು. ಸುರೇಶ್ ಪೂಜಾರಿ, ಶೀಮತಿ ಮೀನಾ, ನವೀನ ಚಂದ್ರ, ಶಿಲ್ಪಾ ವೀರೇಶ್ ಉಪಸ್ಥಿತರಿದ್ದರು. ಶ್ರೀಮತಿ ಜ್ಯೋತಿ ತಂತ್ರಿ ನಿರ್ವಹಿಸಿದರೆ, ಸುಪ್ರಭಾ ವಂದಿಸಿದರು ಶ್ರೀವತ್ಸ, ವೇದಾಂತ್, ರಕ್ಷಿತಾ ಕುಲಾಲ್ ಇದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ