‘ಸತ್ಸಂಗ ಸಂಪದ’ ದ್ವಿತೀಯ ಮುದ್ರಣ ಬಿಡುಗಡೆ

Upayuktha
0

ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ ಅಂಕಣ ಬರಹಗಳ ಸಂಕಲನ


ಬೆಂಗಳೂರು: ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ದಿಂದ ಪ್ರಕಟವಾಗಿರುವ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ ಅಂಕಣ ಬರಹಗಳ ಸಂಕಲನ ‘ಸತ್ಸಂಗ ಸಂಪದ’ ದ್ವಿತೀಯ ಮುದ್ರಣದ ಆವೃತ್ತಿಯನ್ನು ಸೋಂದಾ ಸ್ವರ್ಣವಲ್ಲಿ ಮಠದ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಸನ್ನಿಧಿಗೆ ಸಮರ್ಪಿಸಲಾಯಿತು . 


ಇತ್ತೀಚೆಗೆ ನಮ್ಮನ್ನಗಲಿದ ನಿವೃತ್ತ ಶಿಕ್ಷಕ ಸುಬ್ರಾಯ ಭಟ್ಟ ಗಡಿಗೆಹೊಳೆ ಸ್ಮರಣಾರ್ಥ ನಡೆದ ಶ್ರವಣಾರಾಧನೆಯ ಸಂದರ್ಭದಲ್ಲಿ  ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗೆಡೆ ಕೃತಿಯನ್ನು ಅನಾವರಣಗೊಳಿಸಿದರು. 


ಸುಬ್ರಾಯ ಭಟ್ಟರು ವೃತ್ತಿಯಿಂದ ಬಿಸಲಕೊಪ್ಪ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ 33  ವರ್ಷಗಳ ಸಹ ಶಿಕ್ಷಕರಾಗಿ , ಪ್ರವೃತ್ತಿಯಿಂದ ಯಕ್ಷಗಾನ ಆಸಕ್ತರಾಗಿ ಕಾಶ್ಯಪ ಪ್ರತಿಷ್ಠಾನ ಶ್ರೀವಿದ್ಯಾ ಸಂಸ್ಕೃತಿ ಟ್ರಸ್ಟ್ ಸ್ಥಾಪಿಸಿ ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡಿ ಯಕ್ಷಗಾನ ಉಳಿಸುವ ನಿಟ್ಟಿನಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. 


ಕೀರ್ತಿಶೇಷ  ಸುಬ್ರಾಯ ಭಟ್ಟ ಗಡಿಗೆಹೊಳೆ ಸವಿನೆನಪಲ್ಲಿ ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ ಸದ್ವಿಚಾರಗಳ ಸಂಕಲನ ‘ಸತ್ಸಂಗ ಸಂಪದ’ ಕೃತಿಯನ್ನು ಅವರ ಕುಟುಂಬದವರು ನೆರದಿದ್ದ ಹಿತೈಷಿಗಳು, ಆಸಕ್ತ ಪುಸ್ತಕ ಪ್ರಿಯರು , ಶಿಕ್ಷಕರಿಗೆ ಗ್ರಂಥ ತಾಂಬೂಲ ನೀಡಿ ಪುಸ್ತಕ ಸಂಸ್ಕøತಿ ಬೆಳೆಸುವಲ್ಲಿ ಮಾದರಿ ಕಾರ್ಯ ಮಾಡಿದ್ದಾರೆ. ವಿದ್ಯಾಧಿದೇವತೆ ಶಾರದೆಯನ್ನು ಪೂಜಿಸುವ ಶರನ್ನವರಾತ್ರಿ ಸಮಯದಲ್ಲಿ ನಿಜ ಅರ್ಥದಲ್ಲಿ ಜ್ಞಾನಾರಾಧನೆ ನಡೆಸಲಾಗಿದೆ. ಸುಬ್ರಾಯ ಭಟ್ಟರ ಧರ್ಮಪತ್ನಿ ಸುಶೀಲ , ಪುತ್ರಿಯರಾದ ವಿದ್ಯಾ ಪ್ರಶಾಂತ ಹೆಗೆಡೆ ಸೋಂದಾ ಮತ್ತು ಜಯಶ್ರೀ ರಾಜೀವ ಹೆಗಡೆ ಕೊಡೆಮನೆ ಉಪಸ್ಥಿತರಿದ್ದರು. 


ಭರವಸೆಯ ಬೆಳಕಿನ ಅನಾವರಣ  - ಸತ್ಸಂಗ ಸಂಪದ 

ಇಂದಿನ ಯುವ ಪೀಳಿಗೆಯನ್ನು ಬೆಳಕಿನ ದಾರಿಯತ್ತ ಕೊಂಡ್ಯೂಯುವ  ವ್ಯಕ್ತಿತ್ವ ವಿಕಸನದ ಚಿಂತನಗಳ ಗುಚ್ಛವಿದು. ಸಂಯುಕ್ತ ಕರ್ನಾಟಕದಲ್ಲಿ ನಿತ್ಯಾಂಕಣವಾಗಿ ಪ್ರಕಟವಾಗಿ ಸಾಕಷ್ಟು ಮನಗಳನ್ನು ತಟ್ಟಿದ ಬರಹಗಳಿವು. ಇದೀಗ ಪುಸ್ತಕ ರೂಪದಲ್ಲಿ ಸಾಕಾರಗೊಂಡಿವೆ. ಅವರಿಗೆ ದೊರೆತ ಓದುಗರ ಪ್ರೋತ್ಸಾಹ ಅಪರಿಮಿತ. ವೇದ ಶಾಸ್ತ್ರ ಪುರಾಣಗಳ ಇತಿಹಾಸ ಸಾಹಿತ್ಯಗಳ ಬೆಳಕು ಇಲ್ಲಿ ಹರಡಿದೆ. ವಿವಿಧ ವಿಷಯಗಳ ಮೇಲೆ ವಿಚಾರಪೂರ್ಣ ಬರಹಗಳು ಇಲ್ಲಿನ ವೈಶಿಷ್ಟ್ಯ.


ಪಾಶ್ಚಾತ್ಯ ಸಂಸ್ಕೃತಿಯ ಆಕರ್ಷಣೆಗಳಲ್ಲಿ ಬಹುವೇಗವಾಗಿ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಸನಾತನವೂ ಶಾಶ್ವತವೂ ಆದ ನಮ್ಮ ಜೀವನ ಮೌಲ್ಯಗಳನ್ನು ಪುನರುಜ್ಜೀವಿಸುವುದು ಹಾಗೂ ಮಕ್ಕಳಲ್ಲಿ ಜೀವನದ ನಿಜವಾದ ಉದ್ದೇಶವನ್ನು ಕಂಡುಕೊಳ್ಳುವ ಪ್ರಚೋದನೆ ನೀಡಿ ಅದನ್ನು ಸಾಧಿಸುವಂತೆ ಪ್ರೇರೇಪಿಸುವುದೇ ಈ ಕೃತಿಯ ಮುಖ್ಯ ಉದ್ದೇಶವಾಗಿದೆ.


ಡಾ.ಗುರುರಾಜ ಪೋಶೆಟ್ಟಿಹಳ್ಳಿ ಕಿರುಪರಿಚಯ : 

ವೃತ್ತಿಯಿಂದ ಮಾಧ್ಯಮ ಸಮನ್ವಯಕಾರರು ; ಪ್ರವೃತ್ತಿಯಿಂದ ಬರಹಗಾರರು , ಎರಡು ದಶಕಗಳಿಂದ ಆಧ್ಯಾತ್ಮಿಕ ಬರವಣಿಗೆಯಿಂದ ಗುರುತಿಸಿಕೊಂಡವರು, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ರೂವಾರಿ, ವಂದೇ ಗುರು ಪರಂಪರಾಂ, ಸತ್ಸಂಗ ಸಂಪದ , ದಾಸ ಪಂಥ ಹೊತ್ತಗೆಗಳು ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ.  ಸದ್ಯ ಬೆಂಗಳೂರು ನಿವಾಸಿ. ಹಲವು ಸಾಂಸ್ಕøತಿಕ ಮತ್ತು ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಬಿಎಸ್‍ಡಬ್ಲ್ಯೂ ಪದವಿ ತರಗತಿಯ ಪಠ್ಯಕ್ಕೆ ಇವರು ಬರೆದ ‘ಸಂತ ಶಿಶುನಾಳ  ಷರೀಫ’ ಲೇಖನ ಆಯ್ಕೆಗೊಂಡಿದೆ. ‘ಶ್ರೀ ಕೃಷ್ಣಾರ್ಪಣ’ ಇತ್ತೀಚೆಗೆ ಪ್ರಕಟಗೊಂಡ ಕೃತಿ, ಟಿಟಿಡಿಯ ಪ್ರತಿಷ್ಠಿತ ‘ಪುರಂದರಾನುಗ್ರಹ’ ಪ್ರಶಸ್ತಿ, ‘ಟಿ.ವಿ.ಕಪಾಲಿ ಶಾಸ್ತ್ರಿ’ ಪುರಸ್ಕಾರಕ್ಕೆ ಭಾಜನರು.


ಸಂಪರ್ಕ: ಡಾ.ಗುರುರಾಜ ಪೋಶೆಟ್ಟಿಹಳ್ಳಿ #307, ವಿ2 ಸ್ನೇಹ ಅಪಾರ್ಟಮೆಂಟ್ , 14ನೇ ಕ್ರಾಸ್ , ಗಿರಿನಗರ ಮೂರನೇ ಹಂತ , ಆವಲಹಳ್ಳಿ ಬಿಡಿಎ ಬಡಾವಣೆ, ಬೆಂಗಳೂರು-560085 ಮೋ : 97393 69621 padmapranava@yahoo.com


- ಕೃತಿ : ಸತ್ಸಂಗ ಸಂಪದ 

- ಲೇಖಕರು: ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಸಂಸ್ಕೃತಿ ಚಿಂತಕರು 

- ಪ್ರಕಾಶಕರು : ಪ್ರಣವ ಮೀಡಿಯಾ ಹೌಸ್ ಪ್ರಕಾಶನ , ಬೆಂಗಳೂರು 97393 69621

- ಬೆಲೆ : ರೂ.200/-  ಪುಟ: 248



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top