ಕೃತಿ ಪರಿಚಯ : ವ್ಯಕ್ತಿತ್ವ ವಿಕಸನದ "ದಿಕ್ಸೂಚಿ"

Upayuktha
0


ಲೇಖಕರು: ಸಂತೋಷ್ ರಾವ್ ಪೆರ್ಮುಡ

ಪುಟಗಳು: 224; ಬೆಲೆ ರೂ 200

ಪ್ರಕಾಶಕರು: ದಾಕ್ಷಾಯಣಿ ಪ್ರಕಾಶನ, ಮೈಸೂರು


ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕೆಂಬ ಆಸೆ ಇರುತ್ತದೆ. ಯಶಸ್ಸನ್ನು ಗಳಿಸಲು ಹತ್ತು ಹಲವು ಒಳ ಮಾರ್ಗಗಳಿದ್ದು ವ್ಯಕ್ತಿತ್ವ ವಿಕಾಸನ ಪ್ರಮುಖವಾದದ್ದು. "ದಿಕ್ಸೂಚಿ" ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕ. ಇಂದಿನ ದಿನಗಳಲ್ಲಿ ನೇಮಕಾತಿ ಮಾಡುವವರು ಅಭ್ಯರ್ಥಿಗಳ ಸೂಕ್ಷ್ಮ ಕೌಶಲಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಅಭ್ಯರ್ಥಿ ತನ್ನ ಬುದ್ಧಿಮತ್ತೆಯಲ್ಲಿ ಎಷ್ಟೇ ಮುಂದಿದ್ದರೂ ತನ್ನ ಜೀವನ ಕೌಶಲ್ಯಗಳನ್ನು ದುರ್ಬಲವಾದರೆ ಭವಿಷ್ಯದಲ್ಲಿ ಅಂಥವರು ಹೆಚ್ಚು ಕ್ಷಮತೆ ಹೊಂದಲಾರರು. ಆದ್ದರಿಂದ ಕೌಶಲ್ಯ ವೃದ್ಧಿ ಒಂದು ಮುಖ್ಯ ವಿಷಯವಾಗುತ್ತದೆ.


ಸಂವಹನ, ಉದ್ಯಮಶೀಲತೆ, ಹವ್ಯಾಸಗಳು, ನಾಗರಿಕ ಪ್ರಜ್ಞೆ, ಕೋಪದ ಅರಿಮೆ, ಸಮಯದ ನಿರ್ವಹಣೆಯ ಗರಿಮೆ, ತಂಡದಲ್ಲಿ ಕೆಲಸ ಮಾಡಲು ಬೇಕಾಗುವ ಒಲುಮೆ ಇಂತಹ ಹಲವು ಗುಣಗಳು ಪ್ರತಿಯೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವ ಮುಖ್ಯ ಅಂಶಗಳು. 


ಸಂತೋಷ ರಾವ್ ಪೆರ್ಮುಡ ಹಲವು ವರ್ಷಗಳಿಂದ ವ್ಯಕ್ತಿತ್ವ ವಿಕಸನದ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಪ್ರಸ್ತುತ  ಧಾರವಾಡದಲ್ಲಿ  ಧರ್ಮಸ್ಥಳ ಮಹಾಸಂಸ್ಥಾನ ನಡೆಸುವ ಜ್ಞಾನವಿಕಾಸ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. "ದಿಕ್ಸೂಚಿ" ಪುಸ್ತಕದಲ್ಲಿ ಅವರು ತಮ್ಮ ಪ್ರಾಯೋಗಿಕ ಅನುಭವಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಅವುಗಳ ತಿರುಳನ್ನು ಅರಿಯಬೇಕಾದರೆ "ದಿಕ್ಸೂಚಿ" ಒಂದು ಉತ್ತಮ ಓದು.


ವ್ಯಕ್ತಿತ್ವ ವಿಕಸನದ ಮುಖ್ಯ 25 ಅಂಶಗಳ ಕುರಿತು ವಿಸ್ತೃತವಾದ ಅನುಭವ ಜನ್ಯ ಸತ್ಯಗಳು ಈ ಹೊತ್ತಗೆಯಲ್ಲಿ ಇವೆ. ಪುಸ್ತಕಗಳನ್ನು ಕೊಳ್ಳಲು ಬಯಸುವವರು 974 288 4160 ಈ ನಂಬರಿಗೆ ಕರೆ ಮಾಡಬಹುದು. ಕೃತಿಕಾರರಾದ ಸಂತೋಷ್ ರಾವ್ ಪೆರ್ಮುಡ ಅವರಿಗೆ ಅಭಿನಂದನೆಗಳು.


- ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top