ಭಾರತದ ಆಸ್ತಿ ಎಂದರೆ ಅದು ಯುವ ಜನತೆ. ಹಾಗಾಗಿ ಭಾರತಕ್ಕೆ ಯುವಜನತೆಯು ನೀಡುವ ಕೊಡುಗೆಯೂ ಅನೇಕ. ಇಂದು ಭಾರತವು ಹಲವು ಕ್ಷೇತ್ರದಲ್ಲಿ ಮುಂದೆ ಸಾಗುತ್ತಿದೆ ವಿಜ್ಞಾನ ತಂತ್ರಜ್ಞಾನ ಕ್ರೀಡೆ ಹಾಗೂ ಆರ್ಥಿಕ ಸ್ಥಿತಿಗಳಲ್ಲಿ ತನ್ನ ಸ್ಥಾನವನ್ನು ದಿನೇ ದಿನೇ ವಿಸ್ತರಿಸುತ್ತಾ ಮುನ್ನಡೆಯುತ್ತಿದೆ.
ಒಂದು ಕಡೆ ನಮ್ಮ ದೇಶವು ಅಭಿವೃದ್ಧಿಯತ್ತ ದಾಪುಗಾಲಿಡ್ದುತ್ತಿದ್ದರೆ, ಇನ್ನೊಂದು ಕಡೆ ಇಂದಿನ ಯುವ ಪೀಳಿಗೆಯು ದಿನೇ ದಿನೇ ಭಯಾನಕ ಜಾಲಗಳಿಗೆ ಸಿಲುಕಿ ತಮ್ಮ ಪ್ರಾಣವನ್ನು ಬಳಿ ಕೊಡುತ್ತಿದ್ದಾರೆ. ಅಂತಹ ಜಾಲಗಳಲ್ಲಿ ಮಧ್ಯಪಾನ, ಡ್ರಗ್ಸ್ ಹೀಗೆ ಜೀವಕ್ಕೆ ಹಾನಿಕಾರಕ ವಸ್ತುಗಳು ಯುವಜನತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ . ಇದು ಅವರ ಇಡೀ ಭವಿಷ್ಯವನ್ನೆ ಹಾಳುಕೆಡುತವುತ್ತದೆ.
ಹೊಸತನವನ್ನು ಕಾಣುವುದರ ಜೊತೆಗೆ ಜಗತ್ತು ಆಧುನಿಕತೆಯಲ್ಲಿ ಮುಂದುವರಿಯುತ್ತದೆ. ಆಚರಣೆಗಳೆಲ್ಲವೂ ಮೋಜು-ಮಸ್ತಿ ಇಲ್ಲದೆ ನಡೆಯುವುದೇ ಇಲ್ಲ ಎಂಬ ರೀತಿಯಲ್ಲಿ ಬದಲಾವಣೆ ಹೊಂದುತ್ತಿದೆ. ಹಾಗೆಯೇ ನಮ್ಮ ದೇಶದಲ್ಲಿಯೂ ಹೊಸ ವರ್ಷದ ಸಂಭ್ರಮಾಚರಣೆಯಂದು ಅತೀ ಹೆಚ್ಚು ಮಧ್ಯಪಾನ ಮಾರಾಟವಾಗುತ್ತದೆ ಎಂಬುದು ವಿಪರ್ಯಾಸ. ಅತಿಯಾದರೆ ಅಮೃತವು ವಿಷ ಎಂಬುದಕ್ಕೆ ಉದಾಹರಣೆಯಾಗಿ ಮಧ್ಯಪಾನದ ಅತಿಯಾದ ಸೇವನೆಯಿಂದ ಜೀವಕ್ಕೆ ಕುತ್ತು ತಂದುಕೊಂಡಿರುವವರನ್ನು ನಾವು ಕಂಡಿದ್ದೇವೆ. ಇದು ಮನುಷ್ಯನ ಬದುಕಿಗೆ ಅಡ್ಡಿಯುಂಟು ಮಾಡುತ್ತದೆ.
ಡ್ರಗ್ಸ್ ಜಾಲ ಇಂದು ಬಹು ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಇದು ವಿದ್ಯಾರ್ಥಿಗಳಿಂದ ಹಿಡಿದು ಯುವಕ -ಯುವತಿಯರವರೆಗೂ ಹಬ್ಬಿದೆ, ಮಾತ್ರವಲ್ಲದೆ ವಿದ್ಯಾವಂತ ಯುವ ಜನಾಂಗ ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ದುರದೃಷ್ಟಕರ. ಕಾನೂನಿನಲ್ಲಿ ಕಠಿಣ ಕ್ರಮಗಳಿದ್ದರೂ ಅದನ್ನು ಮೀರಿ ಡ್ರಗ್ಸ್ ಇಂದು ಯುವಜನರನ್ನು ಕೆಡಿಸುತ್ತಿದೆ. ಈ ಕುರಿತಾಗಿ ಎಷ್ಟು ಎಚ್ಚೆತ್ತುಕೊಂಡರು ಸಾಲದಂತಾಗಿದೆ.
ನಮ್ಮ ದೇಶದಲ್ಲಿ ಜೂನ್ 26ರಂದು ಮಾದಕ ವಸ್ತುಗಳ ವಿರೋಧಿ ದಿನವೆಂದು ಆಚರಿಸುತ್ತಾರೆ. ಈ ನಿಟ್ಟಿನಲ್ಲಾದರೂ ಜನತೆ ಇದರಿಂದಾಗುವ ಕೆಡುಕುಗಳನ್ನು ಅರಿಯುವಂತಾಗಬೇಕು. ನಾವು ನಮಗಾಗಿ ಮಾತ್ರವಲ್ಲದೆ ನಮ್ಮ ತಂದೆ ತಾಯಿ ಮತ್ತು ನಮ್ಮ ಕುಟುಂಬದವರಿಗಾಗಿ ಬದುಕಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ನಾವು ದೇಶದ ಸತ್ಪ್ರಜೆಗಳಾಗಬೇಕು. ಸಮಾಜದಲ್ಲಿನ ಒಳಿತು ಕೆಡುಕುಗಳನ್ನು ಅರಿತು ಸನ್ಮಾರ್ಗದಲ್ಲಿ ನಡೆದು, ನಮ್ಮಿಂದ ಆದಷ್ಟು ನಾವು ಒಳ್ಳೆಯ ಕೆಲಸವನ್ನು ಮಾಡಿದಾಗ ಮಾತ್ರ ನಮ್ಮ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಕಾಣಲು ಸಾಧ್ಯ. ದೇಶಕ್ಕೆ ಒಳಿತನ್ನು ಮಾಡಿ, ಭಾರತವನ್ನು ಉತ್ತುಂಗಕ್ಕೇರಿಸುವುದು ನಮ್ಮ ಜವಾಬ್ದಾರಿ ಮತ್ತು ನಮ್ಮ ಆದ್ಯ ಕರ್ತವ್ಯ.
-ಅಜಿತ್ ನೆಲ್ಯಾಡಿ
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ