ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ವತಿಯಿಂದ ಹಂಪನಕಟ್ಟೆಯ ಕ್ಯಾಂಪಸ್ನಲ್ಲಿ 'ಕೊಲಾಜ್ ಮೇಕಿಂಗ್ ಸ್ಪರ್ಧೆ'ಯನ್ನು ಸೆ.16ರಂದು ಆಯೋಜಿಸಲಾಗಿತ್ತು.
ಸ್ಪರ್ಧಾಳುಗಳ ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಕೊಲಾಜ್ ಮಾಧ್ಯಮದ ಮೂಲಕ ಕಲಾತ್ಮಕ ಅಭಿವ್ಯಕ್ತಿಯನ್ನು ಉತ್ತೇಜಿಸುವುದು ಸ್ಪರ್ಧೆಯ ಉದ್ದೇಶವಾಗಿತ್ತು. ಸ್ಪರ್ಧಿಗಳು ನಿಯತಕಾಲಿಕೆಗಳು ಮತ್ತು ಪತ್ರಿಕೆಗಳನ್ನು ಬಳಸಿಕೊಂಡು ತಮ್ಮ ಸೃಜನಶೀಲತೆಯನ್ನು ಹೊರಹೊಮ್ಮಿಸಲು ಮುಕ್ತ ಸ್ವಾತಂತ್ರ್ಯವನ್ನು ಹೊಂದಿದ್ದರು.
ಕೊಲಾಜ್ ಮೇಕಿಂಗ್ ಸ್ಪರ್ಧೆಗೆ ನೀಡಲಾದ ಥೀಮ್ ಮಹಿಳಾ ಸಬಲೀಕರಣವಾಗಿತ್ತು. ಕೆಲವು ತುಣುಕುಗಳು ಅಡೆತಡೆಗಳನ್ನು ನಿವಾರಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಮಹಿಳೆಯರ ಯಶೋಗಾಥೆಯನ್ನು ಚಿತ್ರಿಸಿದರೆ, ಇನ್ನು ಕೆಲವು ಕಲಾಕೃತಿಗಳು ಮಹಿಳೆಯರು ದಿನನಿತ್ಯದ ಹೋರಾಟಗಳನ್ನು ಮತ್ತು ಅವುಗಳನ್ನು ಜಯಿಸುವ ಅವರ ಅಚಲ ನಿರ್ಣಯವನ್ನು ಬಿಂಬಿಸಿದವು.
ಪ್ರತಿ ಕಲಾಕೃತಿಯು ವಿಶಿಷ್ಟವಾದ ಕಥೆಯನ್ನು ಹೇಳುತ್ತ ನೋಡುಗರಲ್ಲಿ ಸಹಾನುಭೂತಿ ಮತ್ತು ಪ್ರತಿಬಿಂಬದ ಭಾವನೆಯನ್ನು ಉಂಟುಮಾಡುವಂತಿದ್ದವು. ತೀರ್ಪುಗಾರರು ಸೃಜನಶೀಲತೆ, ಸಂಕೇತ ಅಥವಾ ವಿಷುಯಲ್ ಇಂಪ್ಯಾಕ್ಟ್ ಮತ್ತು ಥೀಮ್ಗೆ ಪ್ರಸ್ತುತತೆಯ ಆಧಾರದ ಮೇಲೆ ಕೊಲಾಜ್ ಗಳನ್ನು ಮೌಲ್ಯಮಾಪನ ಮಾಡಿದರು.
ಪೌಂಡ್ರಿಯಾ ತಂಡದಿಂದ ಸೀಮಾ ಕೆ (ದ್ವಿತೀಯ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್), ಸ್ವಾತಿ (ದ್ವಿತೀಯ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್) ಮತ್ತು ಜಾಯ್ಸನ್ ಡಿಸೋಜಾ (ದ್ವಿ. ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್) ಅವರಿಗೆ ಪ್ರಥಮ ಸ್ಥಾನ ಪಡೆದರು.
ದ್ವಿತೀಯ ಸ್ಥಾನವನ್ನು ಮಣಿಪುಷ್ಪಕ ತಂಡದ ಶ್ರದ್ಧಾ ವಿ.ಕೆ (ಮೊದಲ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್), ಪ್ರಸೀಜಾ.ಸಿ (ತೃತೀಯ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್), ನಯನಾ ಸತ್ಯನ್ (ತೃತೀಯ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್) ಪಡೆದರು.
ತೃತೀಯ ಸ್ಥಾನವನ್ನು ಅಭಿಷೇಕ್ ಎನ್ ಕಿಣಿ (ದ್ವಿತೀಯ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್), ರಿಪ್ಸಿ ರಾಜು (ತೃತೀಯ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್) ಮತ್ತು ಮೊಹಮ್ಮದ್ ಆದಿಲ್ (ಮೊದಲ ವರ್ಷದ ಬಿಬಿಎ ಏವಿಯೇಷನ್ ಮ್ಯಾನೇಜ್ಮೆಂಟ್) ಪಡೆದರು.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕಲೆಯು ಬದಲಾವಣೆಯ ಪ್ರಬಲ ಶಕ್ತಿಯಾಗಬಹುದು ಎಂಬ ಅರಿವಿನೊಂದಿಗೆ ವಿದ್ಯಾರ್ಥಿಗಳು ಬದ್ಧತೆಯ ಪ್ರಜ್ಞೆಯನ್ನು ಗಳಿಸಿಕೊಂಡರು. ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ಡೀನ್ ಡಾ. ಪವಿತ್ರ ಕುಮಾರ್ ಅವರು ಕೊಲಾಜ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರು ಮತ್ತು ಭಾಗವಹಿಸಿದ ಎಲ್ಲರನ್ನು ಅಭಿನಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ