ಮಂಗಳೂರು: ದೇಶದ ಪ್ರಮುಖ ಬರವಣಿಗೆ ಸಾಮಗ್ರಿ ಮತ್ತು ಸ್ಟೇಷನರಿ ವಸ್ತುಗಳ ತಯಾರಕ ಕಂಪನಿಯ ನಟರಾಜ್ ಪೆನ್ಸಿಲ್ ಪ್ಯಾಕೇಜಿಂಗ್ ಉದ್ಯೋಗಾವಕಾಶದ ಆಮಿಷವೊಡ್ಡಿ ಮುಗ್ಧ ಜನರನ್ನು ವಂಚಿಸುವ ನಕಲಿ ಉದ್ಯೋಗದ ಜಾಲ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿಂದೂಸ್ತಾನ್ ಪೆನ್ಸಿಲ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕಟಿಸಿದೆ.
ವಂಚಕರು ಎಚ್ಪಿಪಿಎಲ್ ನ ನಿಯಮಿತ ಪ್ರತಿನಿಧಿಗಳಂತೆ ಬಿಂಬಿಸಿ ಗೂಗಲ್, ಲಿಂಕ್ಡ್ಇನ್, ವಾಟ್ಸಾಪ್ ಮತ್ತು ಇತರ ಆನ್ ಲೈನ್ ಪ್ಲಾಟ್ ಫಾರ್ಮ್ ಸೇರಿದಂತೆ ವಿವಿಧ ಡಿಜಿಟಲ್ ಮಾಧ್ಯಮಗಳ ಮೂಲಕ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಾವಕಾಶಗಳ ಆಸೆ ತೋರಿಸಿ, ಮುಗ್ಧ ಮತ್ತು ಅಮಾಯಕ ವ್ಯಕ್ತಿಗಳನ್ನು ವಂಚಿಸುತ್ತಿರುವುದು ಕಳವಳಕಾರಿ ಬೆಳವಣಿಗೆ.
ಇಂಥ ತಪ್ಪುದಾರಿಗೆಳೆಯುವ ಆಫರ್ ಗಳು, ದುರದೃಷ್ಟಕರ ನಿದರ್ಶನಗಳಿಗೆ ಕಾರಣವಾಗಿದ್ದು, ಮುಗ್ಧ ಉದ್ಯೋಗಾಕಾಂಕ್ಷಿಗಳು ವಂಚನೆಗಳಿಗೆ ಬಲಿಯಾಗುವುದರೊಂದಿಗೆ ಹಣ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹಿಂದೂಸ್ತಾನ್ ಪೆನ್ಸಿಲ್ಸ್ ನ ಅಧ್ಯಕ್ಷ ಪ್ರದೀಪ್ ಉಘಾಡೆ ಸ್ಪಷ್ಟಪಡಿಸಿದ್ದಾರೆ.
ನಟರಾಜ್ ಮತ್ತು ಅಪ್ಸರಾ ಪೆನ್ಸಿಲ್ ಗಳನ್ನು ಭಾರತದಾದ್ಯಂತ ದೃಢವಾದ ಉತ್ಪಾದನಾ ಘಟಕಗಳಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಯಂತ್ರೋಪಕರಣಗಳೊಂದಿಗೆ ತಯಾರಿಸಲಾಗುತ್ತದೆ ಮತ್ತು ಪ್ಯಾಕ್ ಮಾಡಲಾಗುತ್ತದೆ. ಕಂಪನಿ, ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದರೊಂದಿಗೆ ತನ್ನ ಗ್ರಾಹಕರು ಮತ್ತು ಸಾರ್ವಜನಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧವಾಗಿದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ