ಆಳ್ವಾಸ್ ಕಾಲೇಜು ಪದವಿ ಇಂಗ್ಲಿಷ್ ವಿಭಾಗದಿಂದ ಸರಣಿ ಉಪನ್ಯಾಸ
ವಿದ್ಯಾಗಿರಿ (ಮೂಡುಬಿದಿರೆ): ‘ಪಠ್ಯಕ್ರಮದ ನೈಜ ಭಾಗೀದಾರರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅವರೇ ಬಲಿಪಶು ಆಗುತ್ತಿದ್ದಾರೆ’ ಎಂದು ಪುತ್ತೂರು ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಪದವಿ ಇಂಗ್ಲಿಷ್ ವಿಭಾಗವು ಹಮ್ಮಿಕೊಂಡ ಸರಣಿ ಅತಿಥಿ ಉಪನ್ಯಾಸ ಹಾಗೂ ‘ವೇಟಿಂಗ್ ಫಾರ್ ಗೊಡೊಟ್’ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಠ್ಯಕ್ರಮವನ್ನು ತಿಳಿದುಕೊಳ್ಳುವ ಹಕ್ಕು ವಿದ್ಯಾರ್ಥಿಗಳಿಗೆ ಇದೆ. ಆದರೆ, ಅವರಲ್ಲಿ ಪ್ರಶ್ನಿಸುವ ಮನೋಭಾವ ಕಾಣದಾಗಿದೆ. ಇನ್ನೊಂದೆಡೆ ಪಠ್ಯಕ್ರಮ ರೂಪಿಸುವ ‘ಕಟ್ ಪೇಸ್’್ಟ ತಜ್ಞರು ಕಂಪ್ಯೂಟರ್ ಬರುವ ಮೊದಲೇ ಇದ್ದರು’ ಎಂದು ವಿವರಿಸಿದರು.
‘ವಿದ್ಯಾರ್ಥಿಗಳ ಸಾಮಥ್ರ್ಯ ಮತ್ತು ತರಗತಿ ಚಟುವಟಿಕೆ ಮಧ್ಯೆ ಅಂತರವಿದೆ. ಪಠ್ಯದಲ್ಲಿ ಘೋಷಿತ ಧ್ಯೇಯಗಳಿವೆ. ಕಲಿಕೆ ಮೇಲೆ ಕಲಿಕೆ ಕಟ್ಟಬೇಕು. ಪ್ರಚಲಿತ ವಿದ್ಯಮಾನಕ್ಕೆ ಶಿಕ್ಷಣ ಸ್ಪಂದಿಸಬೇಕು. ಆದರೆ, ವಿಶ್ವವಿದ್ಯಾಲಯ ಇಷ್ಟು ಸಂವೇದನೆ ಹೊಂದಿದೆಯೇ?’ ಎಂದು ಅವರು ಪ್ರಶ್ನಿಸಿದರು.
‘ಇಂದು ಜ್ಞಾನದ ಮೊದಲ ಸ್ಪರ್ಶ ತರಗತಿಯಲ್ಲಿ ಆಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಏನು ಕಲಿಸುತ್ತೀರಿ ಎಂಬುದಕ್ಕಿಂತ ಹೇಗೆ ಕಲಿಸುತ್ತೀರಿ’ ಎಂಬುದು ಮುಖ್ಯ ಎಂದ ಅವರು, ‘ನಿವೇ ಬರೆಯಲು ಇನ್ನೊಬ್ಬರನ್ನು ಅವಲಂಬಿಸುತ್ತಿದ್ದೀರಿ ಎಂದಾದರೆ, ನಿಮ್ಮ ಮಕ್ಕಳಿಗೆ ಏನು ಬೋಧನೆ ಮಾಡುತ್ತಿದ್ದೀರಿ’ ಎಂದು ಕುಟುಕಿದರು.
‘ಶಿಕ್ಷಣದ ಗುರಿ ಮತ್ತು ದಾರಿ ಮಧ್ಯೆ ಹೊಂದಾಣಿಕೆ ತಪ್ಪಿದೆ. ಪ್ರಕ್ರಿಯೆ ಮತ್ತು ಉದ್ದೇಶಗಳ ನಡುವೆ ಸಮತೋಲನ ಇಲ್ಲ. ಉತ್ತಮ ಶಿಕ್ಷಣವು ಮಕ್ಕಳಲ್ಲಿ ಸೃಜನಶೀಲತೆಯನ್ನು ಕಟ್ಟಬೇಕು’ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ನಂಬಿಕೆಗಳನ್ನು ಕಾಲಕಾಲಕ್ಕೆ ಪ್ರಶ್ನಿಸಿ ಮರುರೂಪುಗೊಳಿಸಿದಾಗ ಮಾತ್ರ ಪ್ರಗತಿ ಸಾಧ್ಯ’ ಎಂದು ಹೇಳಿದರು.
‘ನಂಬಿಕೆಯ ಬಲೆಯು ನಮ್ಮನ್ನು ನಡೆಸಿದರೂ, ನಾವು ಹೇಗೆ ಹೆಜ್ಜೆ ಇಡುತ್ತೇವೆ ಎಂಬುದು ಮುಖ್ಯ’ ಎಂದರು.
‘ಪ್ರತಿ ವ್ಯಕ್ತಿಯ ಬದುಕಿನ ಪಯಣ ವಿಭಿನ್ನ. ಉತ್ತಮ ಸಂಬಂಧಗಳನ್ನು ನಾವು ಬದುಕಿನಲ್ಲಿ ಪಡೆದಿದ್ದೇವೆಯೇ ಎಂಬುದು ಬಹಳ ಮುಖ್ಯವಾಗುತ್ತದೆ’ ಎಂದರು.
ಉಜಿರೆ ಎಸ್ ಡಿಎಂ (ಸ್ವಾಯತ್ತ) ಕಾಲೇಜು ಇಂಗ್ಲಿμï ವಿಭಾಗದ ಸಹ ಪ್ರಾಧ್ಯಾಪಕ ಸೂರ್ಯನಾರಾಯಣ ಭಟ್ ‘ವೇಟಿಂಗ್ ಫಾರ್ ಗೊಡೊಟ್’ ಕುರಿತು ಉಪನ್ಯಾಸ ನೀಡಿದರು.
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪದವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಚ್ಛೇಂದ್ರ, ಸಹಾಯಕ ಪ್ರಾಧ್ಯಾಪಕ ಸಂದೇಶ್ ಇದ್ದರು.
ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿದರು. ರೇಷ್ಮ ಹಾಗೂ ಪ್ರಸಾದ್ ಅತಿಥಿಗಳನ್ನು ಪರಿಚಯಿಸಿದರು. ಚಂದನಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
'ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ