ರಾಮಾಯಣ ಹಕ್ಕಿನೋಟ-15: ಪ್ರತಿದಿನ ರಾಮಾಯಣ ಕಿರು ಮಾಹಿತಿ

Upayuktha
0



ಶ್ರೀರಾಮಾಯನಮ:

ಇಕ್ಷ್ವಾಕು ವಂಶದಲ್ಲಿ ಸಗರ ಪ್ರಖ್ಯಾತ ರಾಜ.ಗರ(ವಿಷ) ಸಹಿತ ಹುಟ್ಟಿದ ಕಾರಣ ಸಗರ.ಸಗರನಿಂದಾಗಿ ಸಾಗರ.ಅವನು ಅಶ್ವಮೇಧ ಯಾಗವನ್ನು ಮಾಡಲು ತೊಡಗಿದನು.ಬಹಳ ವಿಜೃಂಭಣೆಯಿಂದ ಯಾಗವು ನಡೆಯುತ್ತಿತ್ತು.ಅಶ್ವಮೇಧ ಯಜ್ಞದ ಕುದುರೆಯನ್ನು ದೇಶ ಪರ್ಯಟನೆಗೆ ಅಂಶುಮಂತನ ರಕ್ಷಣೆಯಲ್ಲಿ ಕಳುಹಿಸಿದ್ದನು.ಇನ್ನೇನು ಯಾಗ ಪೂರ್ಣಗೊಳ್ಳಬೇಕು ಎಂದಿರುವಾಗ ಇಂದ್ರನು ಕುದುರೆಯನ್ನು ಅಪಹರಿಸಿ ರಸಾತಳದಲ್ಲಿ ಬಚ್ಚಿಟ್ಟನು.ಸಗರನು ತನ್ನ ಶೂರರಾದ ಅರುವತ್ತು ಸಾವಿರ ಮಕ್ಕಳಲ್ಲಿ ಕುದುರೆಯನ್ನು ಹುಡುಕಿ ತರಲು ಹೇಳಿದನು.ಯಾಕೆಂದರೆ ಯಾಗವು ಅರ್ಧದಲ್ಲೇ ನಿಂತರೆ ಮಾಡುವವರಿಗೂ ಮಾಡಿಸಿದವರಿಗೂ ಕೇಡು ಉಂಟಾಗುತ್ತದೆ.

ಸಗರನ ಮಕ್ಕಳು ಭೂಮಂಡಲವನ್ನೆಲ್ಲಾ ಜಾಲಾಡಿದರೂ ಕುದುರೆಯ ಸುಳಿವಿಲ್ಲ.ಕೊನೆಗೆ ತಂದೆಯ ಅನುಮತಿ ಪಡೆದು ಭೂಮಿಯನ್ನು ಅಗೆದು ರಸಾತಳಕ್ಕೆ ತಲುಪಿದರು.ಅಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲ ಮಹರ್ಷಿಗಳ ಪಕ್ಕದಲ್ಲಿ ಇಂದ್ರನು ಕುದುರೆಯನ್ನು ಕಟ್ಟಿ ಹಾಕಿದ್ದನು.ತಪೋನಿರತ ಕಪಿಲರಿಗೆ ಇದು ಗೊತ್ತೇ ಆಗಿರಲಿಲ್ಲ.ಕಪಿಲರನ್ನು ತಪ್ಪಾಗಿ ತಿಳಿದ ಸಗರಪುತ್ರರು ಅವರನ್ನು ಪೀಡಿಸಿದರು.ಇದರಿಂದ ಕೋಪಗೊಂಡ ಕಪಿಲರು ಹೂಂಕರಿಸದ್ದೇ ತಡ ಅರುವತ್ತು ಸಾವಿರ ಮಕ್ಕಳೂ ಸುಟ್ಟು ಬೂದಿಯಾದರು.

ಇತ್ತ ತನ್ನ ಮಕ್ಕಳನ್ನು ಕಾಣದಾದಾಗ ಸಗರನು ಮೊಮ್ಮಗ ಅಂಶುಮಂತನನ್ನು ಹುಡುಕಲು ಕಳಿಸಿದನು.ಅವನು ಹುಡುಕುತ್ತಾ ಕಪಿಲ ಮಹರ್ಷಿಗಳು ಸುಟ್ಟು ಬೂದಿಮಾಡಿದ್ದ ತನ್ನ ಚಿಕ್ಕಪ್ಪಂದಿರ ಭಸ್ಮರಾಶಿಯ ಸಮೀಪಕ್ಕೆ ಬಂದನು.ಅಲ್ಲೇ ಸಮೀಪದಲ್ಲಿ ಯಾಗಾಶ್ವವನ್ನೂ ಕಂಡನು.ನಿಜ ಅರಿವಾಗಿ ದು:ಖಿಸಿದನು.ಕೊನೆಗೆ ಅವರಿಗೆ ತರ್ಪಣ ನೀಡಲು ನೀರನ್ನು ಹುಡುಕುವಾಗ ಗರುಡನು ಕಂಡುಬಂದನು.ಗರುಡನು-ಶಾಪಗ್ರಸ್ತರಾದ ಇವರ ಸದ್ಗತಿಗೆ ಸಾಮಾನ್ಯ ಜಲ ಸಾಲದು. ದೇವಗಂಗೆಯ ನಿರ್ಮಲ ಜಲವೇ ಆಗಬೇಕೆಂದು ಹೇಳಿದನು.ನೀನೀಗ ಯಾಗಾಶ್ವದೊಡನೆ ರಾಜ್ಯಕ್ಕೆ ಹಿಂದಿರುಗಿ ಯಜ್ಞವನ್ನು ಸಮಾಪ್ತಿಗೊಳಿಸು,ಬಳಿಕ ಸದ್ಗತಿ ಕಾರ್ಯವನ್ನು ಮಾಡು- ಎಂದು ಸಲಹೆಯಿತ್ತನು.ಅಂಶುಮಂತನು ಹಾಗೇ ಮಾಡಿದನು.

ಯಾಗ ಪರಿಸಮಾಪ್ತಿಯಾಯಿತು.


ಮಕ್ಕಳ ಮರಣದಿಂದ ನೊಂದ ಸಗರನು ಸದ್ಗತಿಗಾಗಿ ಗಂಗೆಯನ್ನು ತರುವ ದಾರಿ ಕಾಣದೆ ಅಂಶುಮಂತನಿಗೆ ಆ ಹೊಣೆಯನ್ನು ನೀಡಿ ಸ್ವರ್ಗಕ್ಕೆ ತೆರಳಿದನು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top