ದೆಹಲಿ: ಜಗತ್ಪ್ರಸಿದ್ಧ ಉಡುಪಿ ಅಡುಗೆ ಮತ್ತೆ ದೇಶದ ರಾಜದಾನಿ ನವದೆಹಲಿಯಲ್ಲಿ ಅದೂ ದೇಶದ ಶಕ್ತಿ ಕೇಂದ್ರ ಸಂಸತ್ತಿನಲ್ಲಿ ಘಮಘಮಿಸಿದೆ . ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಬಾಳೆ ಎಲೆಯಲ್ಲಿ ಬಡಿಸಿದ ಉಡುಪಿ ಸಾರು ಪತ್ರೊಡೆ , ಸುಕುರುಂಡೆ , ಹಲಸಿನ ಹಣ್ಣಿನ ಗಟ್ಟಿ , ತಿಮರೆ ಚಟ್ನಿ ಮೊದಲಾದವುಗಳು ಮತ್ತು ಅಡುಗೆ ಮತ್ತು ಆಂಧ್ರ ತಮಿಳುನಾಡಿನ ಕೆಲವು ಖಾದ್ಯಗಳನ್ನೊಳಗೊಂಡ ಈ ಶುಚಿ ರುಚಿಯಾದ ಭೋಜವನ್ನು ಸವಿದು ಟ್ವೀಟ್ ಮಾಡಿರುವುದು ವಿಶೇಷವಾಗಿದೆ .
ಗುರುವಾರ ಸಂಸತ್ ಭವನದ ಒಳಾಂಗಣದಲ್ಲಿ ನಡೆದ ಎನ್ ಡಿ ಎ ಸಂಸದರ ಸಭೆಯ ನಂತರ ಏರ್ಪಡಿಸಲಾಗಿದ್ದ ಭೋಜನಕೂಟಕ್ಕೆ ಉಡುಪಿಯ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ಆಹ್ವಾನದ ಮೇರೆಗೆ ದೆಹಲಿಗೆ ತೆರಳಿ ಉಡುಪಿ ಅಡುಗೆಯನ್ನು ಸಿದ್ಧಪಡಿಸಿ ಮೋದಿ ಮತ್ತು ಎಲ್ಲ ನಾಯಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ . ಭೋಜನ ಸಿದ್ಧಪಡಿಸಿದ ಬಳಿಕ ಸ್ವತಃ ಸುಬ್ರಹ್ಮಣ್ಯರೇ ಮೋದಿ ಸೇರಿದಂತೆ ಎಲ್ಲರಿಗೂ ಊಟ ಬಡಿಸುವಲ್ಲೂ ಕೈ ಜೋಡಿಸಿ ಸಂತಸ ಪಟ್ಟಿದ್ದಾರೆ . ಪ್ರಹ್ಲಾದ್ ಜೋಶಿ , ಗಡ್ಕರಿ ,ಜೆ ಪಿ ನಡ್ಡಾ , ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಸುಬ್ಬಣ್ಣನ ಅಡುಗೆಯ ಸವಿಯುಂಡು ಪ್ರಶಂಸಿದ್ದಾರೆ . ಸುವ್ರಹ್ಮಣ್ಯರ ಜೊತೆ ಸಹಾಯಕರಾಗಿ ರಾಜಶೇಖರ್ ತೆರಳಿದ್ದರು .
ಇತ್ತೀಚೆಗೆ ಸುಬ್ರಹ್ಮಣ್ಯ ಆಚಾರ್ಯರು ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲೂ ಉಡುಪಿ ಅಡುಗೆ ಸಿದ್ಧಪಡಿಸಿದ್ದರು .
ಸುಬ್ರಹ್ಮಣ್ಯ ಆಚಾರ್ಯರ ಸಂಖ್ಯೆ : 98803 80215
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ